<p><strong>ವಿಜಯಪುರ:</strong> ‘ಮನುಷ್ಯನಿಗೆ ನೇಮ-ನಿಷ್ಠೆ ಬೇಕು. ಶಿವನ ಧ್ಯಾನದಿಂದ ನೆಮ್ಮದಿ, ಸುಖ, ಶಾಂತಿ ಕಂಡುಕೊಳ್ಳಲು ಸಾಧ್ಯ’ ಎಂದು ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.</p>.<p>ನಗರದ ಕೇಂದ್ರ ಕಾರಾಗೃಹ ಸಮೀಪದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ಬೃಹದಾಕಾರದ ಶಿವಲಿಂಗ ದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /><br />‘ಮಾನವನು ನಿಜವಾದ ಸಮಾಧಾನ, ಶಾಂತಿ, ಒಳ್ಳೆ ಗುಣಗಳನ್ನು ಅಳವಡಿಸಿಕೊಳ್ಳಲು ಶಿವನಿಗೆ ಶರಣಾಗಬೇಕು. ವಿನಯವೇ ಜೀವನದ ಮೌಲ್ಯ, ಶಿವನ ದರ್ಶನವನ್ನು ಪಡೆದು ಜನ್ಮವನ್ನು ಸ್ವಾರ್ಥಕ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ‘ಒತ್ತಡದ ತಾಪಕ್ಕೆ ಇಂತಹ ಆಶ್ರಮಗಳು ತಂಪು ನೀಡುತ್ತವೆ. ಮನಸ್ಸು ವಿಚಲಿತ; ಅದನ್ನು ಏಕಾತ್ರಮಾಡುವುದು ಕಷ್ಠ. ಪರಮಶಾಂತಿ ಪಡೆಯುವುದು ಅಗತ್ಯ. ವಯಸ್ಸಾದ ಮೇಲೆ ಅಧ್ಯಾತ್ಮದತ್ತ ಒಲಿಯುವ ಬದಲು ವಯಸ್ಸು ಇದ್ದಾಗಲೇ ಆಧ್ಯಾತ್ಮದ ಅಗತ್ಯವಿದೆ’ ಎಂದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ‘ಒಂದೇ ಸ್ಥಳದಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಸೌಲಭ್ಯ ಒದಗಿಸಿರುವುದು ಅಭಿನಂದನೀಯ. ನೆಮ್ಮದಿಯ ಜೀವನಕ್ಕೆ ಶಾಂತಿಯ ಅಗತ್ಯವಿದೆ. ಒತ್ತಡಮಯ ಬದುಕಿನಲ್ಲಿ ಮಾನಸಿಕ ಆರೋಗ್ಯ ಬಹುಮುಖ್ಯವಾಗಿದೆ’ ಎಂದು ಹೇಳಿದರು.</p>.<p>ರಾಜಯೋಗಿನಿ ರವಿಕಲಾ ಅವರು ಶಿವರಾತ್ರಿಯ ಶಿವ ಸಂದೇಶ ನೀಡಿದರು. ಉಮೇಶ ವಂದಾಲ, ಸಂಗೀತಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಅ.ಗೊಳಸಂಗಿ ಇದ್ದರು.</p>.<p>ಗಂಗಾಧರ ಸ್ವಾಗತಿಸಿದರು, ಕೇಂದ್ರ ಸಂಚಾಲಕಿ ಸರೋಜಾ ಅಕ್ಕ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಪ್ರಭು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಮನುಷ್ಯನಿಗೆ ನೇಮ-ನಿಷ್ಠೆ ಬೇಕು. ಶಿವನ ಧ್ಯಾನದಿಂದ ನೆಮ್ಮದಿ, ಸುಖ, ಶಾಂತಿ ಕಂಡುಕೊಳ್ಳಲು ಸಾಧ್ಯ’ ಎಂದು ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.</p>.<p>ನಗರದ ಕೇಂದ್ರ ಕಾರಾಗೃಹ ಸಮೀಪದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ಬೃಹದಾಕಾರದ ಶಿವಲಿಂಗ ದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /><br />‘ಮಾನವನು ನಿಜವಾದ ಸಮಾಧಾನ, ಶಾಂತಿ, ಒಳ್ಳೆ ಗುಣಗಳನ್ನು ಅಳವಡಿಸಿಕೊಳ್ಳಲು ಶಿವನಿಗೆ ಶರಣಾಗಬೇಕು. ವಿನಯವೇ ಜೀವನದ ಮೌಲ್ಯ, ಶಿವನ ದರ್ಶನವನ್ನು ಪಡೆದು ಜನ್ಮವನ್ನು ಸ್ವಾರ್ಥಕ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.</p>.<p>ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ‘ಒತ್ತಡದ ತಾಪಕ್ಕೆ ಇಂತಹ ಆಶ್ರಮಗಳು ತಂಪು ನೀಡುತ್ತವೆ. ಮನಸ್ಸು ವಿಚಲಿತ; ಅದನ್ನು ಏಕಾತ್ರಮಾಡುವುದು ಕಷ್ಠ. ಪರಮಶಾಂತಿ ಪಡೆಯುವುದು ಅಗತ್ಯ. ವಯಸ್ಸಾದ ಮೇಲೆ ಅಧ್ಯಾತ್ಮದತ್ತ ಒಲಿಯುವ ಬದಲು ವಯಸ್ಸು ಇದ್ದಾಗಲೇ ಆಧ್ಯಾತ್ಮದ ಅಗತ್ಯವಿದೆ’ ಎಂದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ‘ಒಂದೇ ಸ್ಥಳದಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಸೌಲಭ್ಯ ಒದಗಿಸಿರುವುದು ಅಭಿನಂದನೀಯ. ನೆಮ್ಮದಿಯ ಜೀವನಕ್ಕೆ ಶಾಂತಿಯ ಅಗತ್ಯವಿದೆ. ಒತ್ತಡಮಯ ಬದುಕಿನಲ್ಲಿ ಮಾನಸಿಕ ಆರೋಗ್ಯ ಬಹುಮುಖ್ಯವಾಗಿದೆ’ ಎಂದು ಹೇಳಿದರು.</p>.<p>ರಾಜಯೋಗಿನಿ ರವಿಕಲಾ ಅವರು ಶಿವರಾತ್ರಿಯ ಶಿವ ಸಂದೇಶ ನೀಡಿದರು. ಉಮೇಶ ವಂದಾಲ, ಸಂಗೀತಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಅ.ಗೊಳಸಂಗಿ ಇದ್ದರು.</p>.<p>ಗಂಗಾಧರ ಸ್ವಾಗತಿಸಿದರು, ಕೇಂದ್ರ ಸಂಚಾಲಕಿ ಸರೋಜಾ ಅಕ್ಕ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಪ್ರಭು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>