ಮನುಷ್ಯ ಕಣ್ಣು ತೆರೆದರೆ ಸಾಕು ಅವನ ಎದುರು ಇಡೀ ಪೃಕೃತಿಯ ಸೌಂದರ್ಯವೇ ಇದೆ. ಅದೆ ಆನಂದ ನೀಡುವ ಮುಖ್ಯ ಅಂಶ. ಹೃದಯ ತುಂಬಿ, ನಿಜವಾದ ಭಾವದಿಂದ ಅನುಭವಿಸಬೇಕು. ಹರಿದಾಸ ಎಂಬ ಭಕ್ತನ ಜೀವನ ನೋಡಿದಾಗ ಇದು ಅನುಭವ ವೇದ್ಯವಾಗುತ್ತದೆ. ಆತನ ಹಾಡು ಎಷ್ಟೊಂದು ಪರಿಣಾಮ ಬೀರುತ್ತಿತ್ತು ಎಂದರೆ, ಯಮುನೆಯ ಅಲೆಗಳೊಂದಿಗಿನ ನರ್ತನಕ್ಕೆ ಸ್ವತಃ ಶ್ರೀ ಕೃಷ್ಣನೇ ಸಾಕ್ಷಿಯಾಗುತ್ತಿದ್ದ. ದೇವರನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಇದ್ದ ಪರಿಸರದಲ್ಲಿಯೇ ದೇವರನ್ನು ಹುಡುಕುವುದು ಮತ್ತು ಆತನ ಇರುವಿಕೆ ಅನುಭವಿಸುವುದು ಶ್ರೇಷ್ಠವಾದದ್ದು.