ಮನಸ್ಸು ತನ್ನಲ್ಲಿಯ ಸ್ವರ್ಗವನ್ನು ನರಕವನ್ನಾಗಿಯೂ, ನರಕವನ್ನು ಸ್ವರ್ಗವನ್ನಾಗಿಯೂ ಮಾಡಿಕೊಳ್ಳಬಹುದು. ಮನಸ್ಸು ವ್ಯಕ್ತಿಯೊಳಗಿದ್ದರೂ, ಮೇಲಾಧಿಕಾರಿಯಂತೆ ಅದು ವ್ಯಕ್ತಿಯ ಮೇಲೆ ಅಧಿಕಾರ ನಡೆಸುತ್ತದೆ. ಅಂದುಕೊಂಡಂತೆ ಮನಸ್ಸನ್ನು ಹರಿಬಿಡುವ ಅವಕಾಶ ಮನುಷ್ಯನಿಗಿರುವುದರಿಂದಲೆ ದೇವರು ಮನುಷ್ಯನಿಗೆ ರೆಕ್ಕೆಗಳನ್ನು ಕೊಟ್ಟಿಲ್ಲ. ಮುರಿದ ಮನೆಯನ್ನು ಕಟ್ಟಬಹುದು ಮುರಿದ ಮನಸ್ಸನ್ನು ಕಟ್ಟುವದು ಹೇಗೆ? ಅದನ್ನೇ ಶರಣರ ಜೀವನದಿಂದ ತಿಳಿಯಬಹುದು.