<p><strong>ಎನ್ನ ಕಾಯವ ದಂಡಿಗೆಯ ಮಾಡಯ್ಯಾ</strong></p>.<p><strong>ಎನ್ನ ಶಿರವ ಸೋರೆಯ ಮಾಡಯ್ಯಾ</strong></p>.<p><strong>ಎನ್ನ ನರವ ತಂತಿಯ ಮಾಡಯ್ಯಾ</strong></p>.<p><strong>ಎನ್ನ ಬೆರಳ ಕಡ್ಡಿಯ ಮಾಡಯ್ಯಾ</strong></p>.<p><strong>ಬತ್ತೀಸ ರಾಗವ ಹಾಡಯ್ಯಾ</strong></p>.<p><strong>ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ</strong></p>.<p>ಭಗವಂತನನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಸಂಗೀತದ ಮೂಲಕವೂ ಒಲಿಸಿಕೊಳ್ಳುವುದು ಒಂದು ವಿಧಾನವಾಗಿದೆ. ಇಲ್ಲಿ ಬಸವಣ್ಣನವರು ತಮ್ಮ ಶರೀರದ ಅಂಗಾಂಗಗಳನ್ನೆ ವೀಣೆಯ ಒಂದೊಂದು ಭಾಗಗಳನ್ನಾಗಿ ಮಾಡಿ, ಮೂವತ್ತೆರಡು ಸ್ವರಗಳ ಮುಖಾಂತರ ಭಗವಂತನನ್ನು ಸ್ಮರಿಸುವೆನು ಎಂದಿದ್ದಾರೆ. ದೇಹವೆ ದಂಡಿಗೆ(ಸ್ವರ ನುಡಿಸುವ ವಾದ್ಯ)ಯಾದರೆ, ತಲೆಯು ಆ ವಾದ್ಯದ ಮೇಲ್ಭಾಗದಲ್ಲಿರುವ ಸೋರೆ (ವೀಣೆಯ ಮೇಲಿರುವ ಬುರುಡೆ)ಯಾಗಲಿ. ನರಗಳೆಲ್ಲ ತಂತಿಗಳಾಗಲಿ. ಬೆರಳುಗಳೆಲ್ಲ ಕಡ್ಡಿಗಳಾಗಲಿ. ಇವೆಲ್ಲವುಗಳ ಮೂಲಕ ಮನಸ್ಸು ತುಂಬಿ ಬರುವ ಹಾಗೆ ಹಲವಾರು ರಾಗಗಳಲ್ಲಿ ಹಾಡಿ ಭಗವಂತನನ್ನು ಒಲಿಸಿಕೊಳ್ಳುವೆನು ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ. ಹೀಗೆ ನಮ್ಮನ್ನು ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎನ್ನ ಕಾಯವ ದಂಡಿಗೆಯ ಮಾಡಯ್ಯಾ</strong></p>.<p><strong>ಎನ್ನ ಶಿರವ ಸೋರೆಯ ಮಾಡಯ್ಯಾ</strong></p>.<p><strong>ಎನ್ನ ನರವ ತಂತಿಯ ಮಾಡಯ್ಯಾ</strong></p>.<p><strong>ಎನ್ನ ಬೆರಳ ಕಡ್ಡಿಯ ಮಾಡಯ್ಯಾ</strong></p>.<p><strong>ಬತ್ತೀಸ ರಾಗವ ಹಾಡಯ್ಯಾ</strong></p>.<p><strong>ಉರದಲೊತ್ತಿ ಬಾರಿಸು ಕೂಡಲಸಂಗಮದೇವಾ</strong></p>.<p>ಭಗವಂತನನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಸಂಗೀತದ ಮೂಲಕವೂ ಒಲಿಸಿಕೊಳ್ಳುವುದು ಒಂದು ವಿಧಾನವಾಗಿದೆ. ಇಲ್ಲಿ ಬಸವಣ್ಣನವರು ತಮ್ಮ ಶರೀರದ ಅಂಗಾಂಗಗಳನ್ನೆ ವೀಣೆಯ ಒಂದೊಂದು ಭಾಗಗಳನ್ನಾಗಿ ಮಾಡಿ, ಮೂವತ್ತೆರಡು ಸ್ವರಗಳ ಮುಖಾಂತರ ಭಗವಂತನನ್ನು ಸ್ಮರಿಸುವೆನು ಎಂದಿದ್ದಾರೆ. ದೇಹವೆ ದಂಡಿಗೆ(ಸ್ವರ ನುಡಿಸುವ ವಾದ್ಯ)ಯಾದರೆ, ತಲೆಯು ಆ ವಾದ್ಯದ ಮೇಲ್ಭಾಗದಲ್ಲಿರುವ ಸೋರೆ (ವೀಣೆಯ ಮೇಲಿರುವ ಬುರುಡೆ)ಯಾಗಲಿ. ನರಗಳೆಲ್ಲ ತಂತಿಗಳಾಗಲಿ. ಬೆರಳುಗಳೆಲ್ಲ ಕಡ್ಡಿಗಳಾಗಲಿ. ಇವೆಲ್ಲವುಗಳ ಮೂಲಕ ಮನಸ್ಸು ತುಂಬಿ ಬರುವ ಹಾಗೆ ಹಲವಾರು ರಾಗಗಳಲ್ಲಿ ಹಾಡಿ ಭಗವಂತನನ್ನು ಒಲಿಸಿಕೊಳ್ಳುವೆನು ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ. ಹೀಗೆ ನಮ್ಮನ್ನು ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>