ಹಾಗೆಯೇ ಭಗವಂತನನ್ನು ಅರಿಯಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು. ಪ್ರತಿಯೊಬ್ಬರೂ ಬಾಲ್ಯದಲ್ಲಿ ಗುರುವಿನಿಂದ ಸಂಸ್ಕಾರಕ್ಕೆ ಒಳಗಾಗಿರುತ್ತಾರೆ. ಗುರುವಿನ ಮಾರ್ಗದರ್ಶನದಿಂದ ಭಗವಂತನ ಸ್ವರೂಪ ಮತ್ತು ಸಾಕ್ಷಾತ್ಕಾರ ಮಾತ್ರ ಸಾಧ್ಯ. ಹರ ಮುನಿದರೆ ಗುರು ಕಾಯುವ, ಗುರು ಮುನಿದರೆ ಹರ ಕಾಯಲಾರ ಎಂಬ ಮಾತಿನಲ್ಲಿ ಗುರುವಿನ ಮಹತ್ವವು ನಮಗೆ ತಿಳಿಯುತ್ತದೆ. ಭಗವಂತ ನಮ್ಮ ಮೇಲೆ ಕೋಪಗೊಂಡರೆ ಗುರುವಿನ ರಕ್ಷಣೆಯಿಂದ ನಾವು ಪಾರಾಗಬಹುದು. ಆದರೆ, ನಾವು ಗುರುವಿನ ಕೋಪಕ್ಕೆ ತುತ್ತಾದರೆ ಭಗವಂತನು ನಮ್ಮನ್ನು ರಕ್ಷಣೆ ಮಾಡುವುದಿಲ್ಲ. ಒಳ್ಳೆಯವರ ಸಂಗದಿಂದ ನಾವು ಭಗವಂತನ ಸಾಕ್ಷಾತ್ಕಾರ ಪಡೆಯಬಹುದು ಎನ್ನುವುದನ್ನು ಬಸವಣ್ಣ ಅವರು ಈ ವಚನದ ಮೂಲಕ ತಿಳಿಸಿದ್ದಾರೆ.