<p><em>ವ್ಯಾಧನೊಂದು ಮೊಲನ ತಂದಡೆ ಸಲುವ</em></p>.<p><em>ಹಾಗಕ್ಕೆ ಬಿಲಿವರಯ್ಯಾ,</em></p>.<p><em>ನೆಲನಾಳ್ದನ ಹೆಣನೆಂದಡೆ ಒಂದಡಿಕೆಗೆ</em></p>.<p><em>ಕೊಂಬವರಿಲ್ಲ ನೋಡಯ್ಯಾ!</em></p>.<p><em>ಮೊಲನಿಂದ ಕರಕಷ್ಟ ನರನ ಬಾಳುವೆ!</em></p>.<p><em>ಸಲೆ ನಂಬೊ ನಮ್ಮ ಕೂಡಲಸಂಗಮದೇವನ.</em></p>.<p>ನಶ್ವರವಾದ ಈ ಶರೀರದ ಕುರಿತಾಗಿ ಬಸವಣ್ಣನವರು ಮಾರ್ಮಿಕವಾಗಿ ಹೇಳಿದ್ದಾರೆ. ಬೇಟೆಗಾರನು ಮೊಲವನ್ನು ಬೇಟೆಯಾಡಿ ಮಾರುಕಟ್ಟೆಯಲ್ಲಿ ಮಾರಲಿಕ್ಕೆ ತಂದರೆ ಅದನ್ನು ತೆಗೆದುಕೊಳ್ಳಲು ಜನ ಮುಗಿಬಿಳುತ್ತಾರೆ. ಅದೇ ನೆಲವನ್ನು ಆಳುವ ರಾಜನು ತೀರಿಕೊಂಡರೆ ಅವನ ಶರೀರಕ್ಕೆ ಯಾರೂ ಬೆಲೆ ಕೊಡುವುದಿಲ್ಲ. ಮೊಲಕ್ಕಿಂತ ಮಾನವನ ದೇಹದ ಬೆಲೆ ಕನಿಷ್ಠವಾಗಿದೆ. ಆದರೂ ನಮ್ಮ ದೇಹದ ಕುರಿತಾಗಿ ಅತಿಯಾದ ವ್ಯಾಮೋಹ, ಪ್ರೀತಿಯನ್ನು ನಾವು ಹೊಂದಿದ್ದೇವೆ. ನಾವು ಮಾಡುವ ಪರೋಪಕಾರಗಳು, ಪುಣ್ಯದ ಕೆಲಸಗಳಿಂದ ನಮ್ಮ ಹೆಸರು ಉಳಿಯುತ್ತದೆಯೇ ಹೊರತು ಶರೀರದಿಂದಲ್ಲ. ಶರೀರವು ನಮ್ಮ ಕಾರ್ಯಸಾಧನೆಗೆ ನೆಪ ಮಾತ್ರ. ಅಂತಹ ಪ್ರಸಾದಕಾಯ (ಶರೀರ)ವನ್ನು ಕೆಡಿಸದೆ ಸದ್ಬಳಕೆ ಮಾಡಿಕೊಳ್ಳೋಣ. ಇದಕ್ಕಾಗಿ ದುಶ್ಚಟಗಳಿಂದ ದೂರವಿರಬೇಕಾಗುತ್ತದೆ. ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬಸವಣ್ಣನವರು ವಚನದ ಮೂಲಕ ಈ ಸಂದೇಶವನ್ನು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ವ್ಯಾಧನೊಂದು ಮೊಲನ ತಂದಡೆ ಸಲುವ</em></p>.<p><em>ಹಾಗಕ್ಕೆ ಬಿಲಿವರಯ್ಯಾ,</em></p>.<p><em>ನೆಲನಾಳ್ದನ ಹೆಣನೆಂದಡೆ ಒಂದಡಿಕೆಗೆ</em></p>.<p><em>ಕೊಂಬವರಿಲ್ಲ ನೋಡಯ್ಯಾ!</em></p>.<p><em>ಮೊಲನಿಂದ ಕರಕಷ್ಟ ನರನ ಬಾಳುವೆ!</em></p>.<p><em>ಸಲೆ ನಂಬೊ ನಮ್ಮ ಕೂಡಲಸಂಗಮದೇವನ.</em></p>.<p>ನಶ್ವರವಾದ ಈ ಶರೀರದ ಕುರಿತಾಗಿ ಬಸವಣ್ಣನವರು ಮಾರ್ಮಿಕವಾಗಿ ಹೇಳಿದ್ದಾರೆ. ಬೇಟೆಗಾರನು ಮೊಲವನ್ನು ಬೇಟೆಯಾಡಿ ಮಾರುಕಟ್ಟೆಯಲ್ಲಿ ಮಾರಲಿಕ್ಕೆ ತಂದರೆ ಅದನ್ನು ತೆಗೆದುಕೊಳ್ಳಲು ಜನ ಮುಗಿಬಿಳುತ್ತಾರೆ. ಅದೇ ನೆಲವನ್ನು ಆಳುವ ರಾಜನು ತೀರಿಕೊಂಡರೆ ಅವನ ಶರೀರಕ್ಕೆ ಯಾರೂ ಬೆಲೆ ಕೊಡುವುದಿಲ್ಲ. ಮೊಲಕ್ಕಿಂತ ಮಾನವನ ದೇಹದ ಬೆಲೆ ಕನಿಷ್ಠವಾಗಿದೆ. ಆದರೂ ನಮ್ಮ ದೇಹದ ಕುರಿತಾಗಿ ಅತಿಯಾದ ವ್ಯಾಮೋಹ, ಪ್ರೀತಿಯನ್ನು ನಾವು ಹೊಂದಿದ್ದೇವೆ. ನಾವು ಮಾಡುವ ಪರೋಪಕಾರಗಳು, ಪುಣ್ಯದ ಕೆಲಸಗಳಿಂದ ನಮ್ಮ ಹೆಸರು ಉಳಿಯುತ್ತದೆಯೇ ಹೊರತು ಶರೀರದಿಂದಲ್ಲ. ಶರೀರವು ನಮ್ಮ ಕಾರ್ಯಸಾಧನೆಗೆ ನೆಪ ಮಾತ್ರ. ಅಂತಹ ಪ್ರಸಾದಕಾಯ (ಶರೀರ)ವನ್ನು ಕೆಡಿಸದೆ ಸದ್ಬಳಕೆ ಮಾಡಿಕೊಳ್ಳೋಣ. ಇದಕ್ಕಾಗಿ ದುಶ್ಚಟಗಳಿಂದ ದೂರವಿರಬೇಕಾಗುತ್ತದೆ. ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬಸವಣ್ಣನವರು ವಚನದ ಮೂಲಕ ಈ ಸಂದೇಶವನ್ನು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>