<p>ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ</p>.<p>–––––––</p>.<p>ನೀರಿಂಗೆ ನೈದಿಲೆಯೆ ಶೃಂಗಾರ</p>.<p>ಸಮುದ್ರಕ್ಕೆ ತೆರೆಯೆ ಶೃಂಗಾರ</p>.<p>ನಾರಿಗೆ ಗುಣವೆ ಶೃಂಗಾರ</p>.<p>ಗಗನಕ್ಕೆ ಚಂದ್ರಮನೆ ಶೃಂಗಾರ</p>.<p>ನಮ್ಮ ಕೂಡಲಸಂಗನ ಶರಣರಿಗೆ</p>.<p>ನೊಸಲ ವಿಭೂತಿಯೆ ಶೃಂಗಾರ</p>.<p>ಪ್ರತಿಯೊಂದು ವಸ್ತುವಿನ ಮೌಲ್ಯ ಹೆಚ್ಚಾಗಲು ಮತ್ತೊಂದು ವಸ್ತುವು ಅವಶ್ಯಕವಾಗಿದೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೆ ಅನುರೂಪವಾಗಿ ಇನ್ನೊಂದು ವಸ್ತು ಇದ್ದೇ ಇರುತ್ತದೆ. ಆ ಇನ್ನೊಂದು ಮೊದಲನೆ ವಸ್ತುವಿನೊಡನೆ ಕೂಡುವುದರಿಂದ ಮೌಲ್ಯ ಹೆಚ್ಚುತ್ತದೆ. ಅದನ್ನೆ ಬಸವಣ್ಣನವರು ತುಂಬಾ ಸೊಗಸಾಗಿ ಈ ವಚನದ ಮೂಲಕ ವಿವರಿಸಿದ್ದಾರೆ. ವಿಶಾಲವಾದ ಸರೋವರಕ್ಕೆ ಕಮಲದ ಹೂವುಗಳು ಶೋಭೆಯನ್ನು ಉಂಟು ಮಾಡುತ್ತವೆ. ಸಮುದ್ರಕ್ಕೆ ತೆರೆಗಳೆ ಶೋಭೆಯನ್ನುಂಟು ಮಾಡುತ್ತವೆ. ಮಹಿಳೆಗೆ ಅವಳ ಗುಣವೆ ಶೋಭೆಯನ್ನು ಕೊಡುತ್ತವೆ. ಹುಣ್ಣಿಮೆಯ ಬಾನಂಗಳವು ಚಂದ್ರಮನಿಂದಲೇ ಕಂಗೊಳಿಸುತ್ತದೆ. ನಮ್ಮ ಶಿವಶರಣರ ನೊಸಲಿಗೆ ವಿಭೂತಿಯೇ ಶೃಂಗಾರವಾಗಿ ಕಾಣುತ್ತದೆ. ಇಲ್ಲಿ ವಿಭೂತಿಯ ಮಹತ್ವವನ್ನು ಹಲವು ಉದಾಹರಣೆಗಳನ್ನು ಕೊಡುವುದರ ಮೂಲಕ ಬಸವಣ್ಣನವರು ವಿವರಿಸಿದ್ದಾರೆ. ಉತ್ತಮ ಸಂಸ್ಕಾರದಿಂದ ಮೌಲ್ಯ ಹೆಚ್ಚಿಸಿಕೊಳ್ಳೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ</p>.<p>–––––––</p>.<p>ನೀರಿಂಗೆ ನೈದಿಲೆಯೆ ಶೃಂಗಾರ</p>.<p>ಸಮುದ್ರಕ್ಕೆ ತೆರೆಯೆ ಶೃಂಗಾರ</p>.<p>ನಾರಿಗೆ ಗುಣವೆ ಶೃಂಗಾರ</p>.<p>ಗಗನಕ್ಕೆ ಚಂದ್ರಮನೆ ಶೃಂಗಾರ</p>.<p>ನಮ್ಮ ಕೂಡಲಸಂಗನ ಶರಣರಿಗೆ</p>.<p>ನೊಸಲ ವಿಭೂತಿಯೆ ಶೃಂಗಾರ</p>.<p>ಪ್ರತಿಯೊಂದು ವಸ್ತುವಿನ ಮೌಲ್ಯ ಹೆಚ್ಚಾಗಲು ಮತ್ತೊಂದು ವಸ್ತುವು ಅವಶ್ಯಕವಾಗಿದೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೆ ಅನುರೂಪವಾಗಿ ಇನ್ನೊಂದು ವಸ್ತು ಇದ್ದೇ ಇರುತ್ತದೆ. ಆ ಇನ್ನೊಂದು ಮೊದಲನೆ ವಸ್ತುವಿನೊಡನೆ ಕೂಡುವುದರಿಂದ ಮೌಲ್ಯ ಹೆಚ್ಚುತ್ತದೆ. ಅದನ್ನೆ ಬಸವಣ್ಣನವರು ತುಂಬಾ ಸೊಗಸಾಗಿ ಈ ವಚನದ ಮೂಲಕ ವಿವರಿಸಿದ್ದಾರೆ. ವಿಶಾಲವಾದ ಸರೋವರಕ್ಕೆ ಕಮಲದ ಹೂವುಗಳು ಶೋಭೆಯನ್ನು ಉಂಟು ಮಾಡುತ್ತವೆ. ಸಮುದ್ರಕ್ಕೆ ತೆರೆಗಳೆ ಶೋಭೆಯನ್ನುಂಟು ಮಾಡುತ್ತವೆ. ಮಹಿಳೆಗೆ ಅವಳ ಗುಣವೆ ಶೋಭೆಯನ್ನು ಕೊಡುತ್ತವೆ. ಹುಣ್ಣಿಮೆಯ ಬಾನಂಗಳವು ಚಂದ್ರಮನಿಂದಲೇ ಕಂಗೊಳಿಸುತ್ತದೆ. ನಮ್ಮ ಶಿವಶರಣರ ನೊಸಲಿಗೆ ವಿಭೂತಿಯೇ ಶೃಂಗಾರವಾಗಿ ಕಾಣುತ್ತದೆ. ಇಲ್ಲಿ ವಿಭೂತಿಯ ಮಹತ್ವವನ್ನು ಹಲವು ಉದಾಹರಣೆಗಳನ್ನು ಕೊಡುವುದರ ಮೂಲಕ ಬಸವಣ್ಣನವರು ವಿವರಿಸಿದ್ದಾರೆ. ಉತ್ತಮ ಸಂಸ್ಕಾರದಿಂದ ಮೌಲ್ಯ ಹೆಚ್ಚಿಸಿಕೊಳ್ಳೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>