ನಾಯಿಯ ಹಾಲು ನಾಯಿಯ ಮರಿಗೆ ಮಾತ್ರ ಮೀಸಲಾಗಿರುತ್ತದೆಯೋ ಹಾಗೆಯೇ ಪಾಪಿಗಳು ಗಳಿಸಿದ ಹಣ ಅದು ಪ್ರಾಯಶ್ಚಿತ್ತಕ್ಕೆ ಮಾತ್ರ ಸಲ್ಲುತ್ತದೆ. ಭಗವಂತನಿಗೆ ಸಲ್ಲಿಸದ ನಮ್ಮ ಹಣ ಅದು ಇದ್ದರೂ ವ್ಯರ್ಥ. ಆದ್ದರಿಂದ ನಾವು ಸದಾ ಕಾಲ ಕಾಯಾ, ವಾಚಾ, ಮನಸಾ, ತನು–ಮನ– ಧನದಿಂದ ಭಗವಂತನಿಗೆ ಭಕ್ತಿಯನ್ನು ಸಲ್ಲಿಸಬೇಕು. ಆಗ ಅವನ ಕೃಪೆ ಸಾಧ್ಯವಾಗುತ್ತದೆ. ಸ್ವಾರ್ಥಕ್ಕಾಗಿ, ಅಸೆಯ ಪಾಶಕ್ಕೆ ಸಿಲುಕಬಾರದು.