<p>ಡಿಸೆಂಬರ್ 30ರ ಮಂಗಳವಾರ ಸರ್ವೇಷಾಮೇಕಾದಶಿ ಅಥವಾ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿಯ ತಿಥಿ ಡಿಸೆಂಬರ್ 29 ರ ಬೆಳಗಿನ ಜಾವ 3:29ಕ್ಕೆ ಪ್ರಾರಂಭವಾಗಿ ಡಿಸೆಂಬರ್ 30 ರಾತ್ರಿ 1:17ಕ್ಕೆ ಮುಕ್ತಾಯವಾಗುತ್ತದೆ.</p><p>ರಾಶಿ ಚಕ್ರಗಳ ಪ್ರಕಾರ ಡಿಸೆಂಬರ್ 27ರಂದು ಮೂಲ ನಕ್ಷತ್ರದ ನಾಲ್ಕನೆ ಪಾದದಲ್ಲಿ ಶುಕ್ರನ ಸಂಚಾರವಾಗುತ್ತದೆ. ಡಿಸೆಂಬರ್ 29ರಂದು ಮೂಲ ನಕ್ಷತ್ರದ ಒಂದನೇ ಪಾದಕ್ಕೆ ಬುಧ ಪ್ರವೇಶಿಸುತ್ತಾನೆ. ಇದರಿಂದ 3 ರಾಶಿಯವರಿಗೆ ಶುಭ ಯೋಗ ಕೂಡಿ ಬರಲಿದೆ ಎಂದು ಜ್ಯೋತಿಷ ಹೇಳುತ್ತದೆ. ಆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. </p>.ವೈಕುಂಠ ಏಕಾದಶಿ: ಹೀಗಿರಲಿ ಪೂಜಾ ವಿಧಾನ.ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ.<p><strong>ಸಿಂಹ ರಾಶಿ: </strong>ಬುಧ ಮತ್ತು ಶುಕ್ರನ ಸ್ಥಾನ ಬದಲಾವಣೆಯಾಗುವುದರಿಂದ ಈ ರಾಶಿಯವರ ಕುಟುಂಬದಲ್ಲಿ ನೆಮ್ಮದಿ, ವಾತಾವರಣ ನಿರ್ಮಾಣವಾಗಲಿದೆ. ಮಾಡುವ ಕಾರ್ಯಗಳಲ್ಲಿ ಯಶಸ್ಸು, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ವಿವಾಹ ಕಾರ್ಯ ಹಾಗೂ ಮಂಗಳ ಕಾರ್ಯಗಳು ನಡೆಯುತ್ತವೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮೊದಲಾದ ಶುಭ ಯೋಗಗಳು ಕೂಡಿ ಬರಲಿವೆ.</p><p><strong>ತುಲಾ ರಾಶಿ: </strong>ಈ ರಾಶಿಯವರಿಗೆ ಶುಕ್ರ ಮತ್ತು ಬುಧನ ಸಂಚಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭವಾಗಲಿದೆ. ಕುಟುಂಬದಲ್ಲಿ ಸುಖ, ಆರೋಗ್ಯದಲ್ಲಿ ಸುಧಾರಣೆ, ಬಂಧು ಮಿತ್ರರ ಸಹಾಯ ಹಾಗೂ ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ ಇದೆ.</p>.ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?.ಇಂದು ವೈಕುಂಠ ಏಕಾದಶಿ: ದಾರಿ ಯಾವುದಯ್ಯಾ ವೈಕುಂಠಕೆ....<p><strong>ಮಕರ ರಾಶಿ: </strong>ವೈಕುಂಠ ಏಕಾದಶಿಯ ನಂತರ ಈ ರಾಶಿಯವರಿಗೆ ಶುಭಫಲ ದೊರೆಯಲಿದೆ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಬಂಧು ಮಿತ್ರರಿಂದ ಸಹಾಯ ದೊರೆಯಲಿದೆ. </p><p>ವೈಕುಂಠ ಏಕಾದಶಿಯ ತಿಥಿಯಂದು ಶ್ರದ್ಧೆಯಿಂದ ಉಪವಾಸ ಆಚರಿಸಿ ಉತ್ತರ ದ್ವಾರದ ಮೂಲಕ ನಾರಾಯಣನ ದರ್ಶನ ಪಡೆಯುವುದರಿಂದ ಅನಂತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಿಸೆಂಬರ್ 30ರ ಮಂಗಳವಾರ ಸರ್ವೇಷಾಮೇಕಾದಶಿ ಅಥವಾ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿಯ ತಿಥಿ ಡಿಸೆಂಬರ್ 29 ರ ಬೆಳಗಿನ ಜಾವ 3:29ಕ್ಕೆ ಪ್ರಾರಂಭವಾಗಿ ಡಿಸೆಂಬರ್ 30 ರಾತ್ರಿ 1:17ಕ್ಕೆ ಮುಕ್ತಾಯವಾಗುತ್ತದೆ.</p><p>ರಾಶಿ ಚಕ್ರಗಳ ಪ್ರಕಾರ ಡಿಸೆಂಬರ್ 27ರಂದು ಮೂಲ ನಕ್ಷತ್ರದ ನಾಲ್ಕನೆ ಪಾದದಲ್ಲಿ ಶುಕ್ರನ ಸಂಚಾರವಾಗುತ್ತದೆ. ಡಿಸೆಂಬರ್ 29ರಂದು ಮೂಲ ನಕ್ಷತ್ರದ ಒಂದನೇ ಪಾದಕ್ಕೆ ಬುಧ ಪ್ರವೇಶಿಸುತ್ತಾನೆ. ಇದರಿಂದ 3 ರಾಶಿಯವರಿಗೆ ಶುಭ ಯೋಗ ಕೂಡಿ ಬರಲಿದೆ ಎಂದು ಜ್ಯೋತಿಷ ಹೇಳುತ್ತದೆ. ಆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. </p>.ವೈಕುಂಠ ಏಕಾದಶಿ: ಹೀಗಿರಲಿ ಪೂಜಾ ವಿಧಾನ.ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ.<p><strong>ಸಿಂಹ ರಾಶಿ: </strong>ಬುಧ ಮತ್ತು ಶುಕ್ರನ ಸ್ಥಾನ ಬದಲಾವಣೆಯಾಗುವುದರಿಂದ ಈ ರಾಶಿಯವರ ಕುಟುಂಬದಲ್ಲಿ ನೆಮ್ಮದಿ, ವಾತಾವರಣ ನಿರ್ಮಾಣವಾಗಲಿದೆ. ಮಾಡುವ ಕಾರ್ಯಗಳಲ್ಲಿ ಯಶಸ್ಸು, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ವಿವಾಹ ಕಾರ್ಯ ಹಾಗೂ ಮಂಗಳ ಕಾರ್ಯಗಳು ನಡೆಯುತ್ತವೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮೊದಲಾದ ಶುಭ ಯೋಗಗಳು ಕೂಡಿ ಬರಲಿವೆ.</p><p><strong>ತುಲಾ ರಾಶಿ: </strong>ಈ ರಾಶಿಯವರಿಗೆ ಶುಕ್ರ ಮತ್ತು ಬುಧನ ಸಂಚಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭವಾಗಲಿದೆ. ಕುಟುಂಬದಲ್ಲಿ ಸುಖ, ಆರೋಗ್ಯದಲ್ಲಿ ಸುಧಾರಣೆ, ಬಂಧು ಮಿತ್ರರ ಸಹಾಯ ಹಾಗೂ ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ ಇದೆ.</p>.ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?.ಇಂದು ವೈಕುಂಠ ಏಕಾದಶಿ: ದಾರಿ ಯಾವುದಯ್ಯಾ ವೈಕುಂಠಕೆ....<p><strong>ಮಕರ ರಾಶಿ: </strong>ವೈಕುಂಠ ಏಕಾದಶಿಯ ನಂತರ ಈ ರಾಶಿಯವರಿಗೆ ಶುಭಫಲ ದೊರೆಯಲಿದೆ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಬಂಧು ಮಿತ್ರರಿಂದ ಸಹಾಯ ದೊರೆಯಲಿದೆ. </p><p>ವೈಕುಂಠ ಏಕಾದಶಿಯ ತಿಥಿಯಂದು ಶ್ರದ್ಧೆಯಿಂದ ಉಪವಾಸ ಆಚರಿಸಿ ಉತ್ತರ ದ್ವಾರದ ಮೂಲಕ ನಾರಾಯಣನ ದರ್ಶನ ಪಡೆಯುವುದರಿಂದ ಅನಂತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>