ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 14-03-2021 ರಿಂದ 20-03-2021 ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680
***
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಮಾನಸಿಕ ಚಿಂತೆಗಳು ಹೆಚ್ಚಾಗಬಹುದು. ಬೆಂಕಿ ಮತ್ತು ಇತರೆ ಅಪಾಯಕಾರಿ ವಸ್ತುಗಳ ಜೊತೆ ಕೆಲಸ ಮಾಡುವವರು ಎಚ್ಚರವಾಗಿರಿ. ಹಣಕಾಸಿನ ವಿಚಾರದಲ್ಲಿ ವಂಚನೆಗೆ ಒಳಗಾಗಬಹುದು ಆದ್ದರಿಂದ ಅಪರಿಚಿತರ ಜೊತೆ ವ್ಯವಹರಿಸುವಾಗ ಎಚ್ಚರ. ಆಕಸ್ಮಿಕ ಧನಪ್ರಾಪ್ತಿ ಇದೆ, ಕಳೆದಿದ್ದ ಆಸ್ತಿಯನ್ನು ಪುನಃ ಸಂಪಾದಿಸಬಹುದು. ಮಹಿಳೆಯರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿಖರತೆ ಮೂಡುತ್ತದೆ.

***

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಮಧ್ಯವರ್ತಿಗಳಿಂದ ವಿವಾಹ ಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶದ ಸಾಧ್ಯತೆಗಳಿವೆ. ಮಾತನಾಡುವಾಗ ಎಚ್ಚರವಿರಲಿ. ಕೃಷಿ ಭೂಮಿಯನ್ನು ಹೊಂದುವ ಯೋಗವಿದೆ. ಕೆಲವು ಕೆಲಸಗಳು ಸರಾಗವಾಗಿ ಸಾಗುತ್ತವೆ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳು ತಹಬಂದಿಗೆ ಬರುತ್ತದೆ. ತಂದೆಯಿಂದ ಸ್ವಲ್ಪ ಧನ ಸಹಾಯ ವಿರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಉತ್ತಮ ಲಾಭವಿದೆ.

***

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಲೇವಾದೇವಿ ಮಾಡುವವರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ವೃತ್ತಿಯಲ್ಲಿದ್ದ ಎಲ್ಲಾ ರೀತಿಯ ಗೊಂದಲಗಳು ನಿವಾರಣೆಯಾಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಅತಿ ಅವಶ್ಯವಾಗಿರುತ್ತದೆ. ಹಣದ ಒಳಹರಿವು ಉತ್ತಮವೆನಿಸುವಷ್ಟಿರುತ್ತದೆ. ಬಂಧುಬಾಂಧವರ ಮನೆಯಲ್ಲಿನ ಸಂತೋಷಕೂಟಕ್ಕೆ ಹೋಗಿ ಹೊಸ ಚೈತನ್ಯವನ್ನು ಪಡೆಯುವಿರಿ.

***

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಕ್ರೀಡಾಪಟುಗಳಿಗೆ ಗೌರವಾದರಗಳು ದೊರೆಯುವ ಸಾಧ್ಯತೆಗಳಿವೆ. ರಾಜಕಾರಣಿಗಳು ನೀಡುವ ಬೇಜವಾಬ್ದಾರಿ ಹೇಳಿಕೆಗಳಿಂದ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ದೂರದೂರಿಗೆ ಪ್ರಯಾಣ ಮಾಡುವ ಅವಕಾಶವಿದೆ. ನಿರೀಕ್ಷಿತ ಮಟ್ಟದಲ್ಲಿ ವ್ಯವಹಾರಗಳಿದ್ದರೂ ಲಾಭದಲ್ಲಿ ಕೊಂಚ ಕಡಿಮೆಯಾಗಬಹುದು. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಕೀಲುನೋವು ಕಾಡಬಹುದು. ಹಿರಿಯರ ಸಲಹೆಗಳು ಮುಂದೆ ಬರುವ ಸಂಕಷ್ಟಗಳನ್ನು ನಿವಾರಿಸುವ ಅಸ್ತ್ರವಾಗುತ್ತದೆ.

***

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳಿ. ಸ್ವಂತ ಉದ್ದಿಮೆಗಳನ್ನು ನಡೆಸುತ್ತಿರುವವರು ಸ್ವಲ್ಪ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ರಾಜಕೀಯ ಜೀವನದಲ್ಲಿ ಮೇಲೇರುವ ಅವಕಾಶಗಳು ಬರುತ್ತವೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಶತ್ರುಗಳು ಮಿತ್ರರಾಗಲು ಬಯಸಿ ಬರುವರು. ಸರ್ಕಾರಿ ಕಚೇರಿಗಳಲ್ಲಿನ ಕೆಲಸಗಳು ಸರಾಗವಾಗಿ ಆಗುತ್ತವೆ.

***

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ರಾಜಕೀಯದಲ್ಲಿ ಇರುವವರೆಗೆ ಉತ್ತಮ ಸ್ಥಾನ ಪ್ರಾಪ್ತಿಯಾಗುವ ಯೋಗವಿದೆ. ಸಾಲದ ಹಣ ಈಗ ವಾಪಸ್ಸು ಬರಲಾರಂಭಿಸುತ್ತವೆ. ವಿದ್ಯಾರ್ಥಿಗಳು ಯಶಸ್ಸನ್ನು ಕಂಡುಕೊಳ್ಳಲು ಒಳ್ಳೆಯ ಅವಕಾಶ ದೊರೆಯುತ್ತದೆ. ಹಣಕಾಸಿನ ವಿಷಯದಲ್ಲಿ ಇದ್ದ ಆತಂಕಗಳು ದೂರವಾಗುತ್ತವೆ. ಗುತ್ತಿಗೆ ಕೆಲಸ ಮಾಡುವವರು ಒಪ್ಪಿಕೊಂಡ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದಲ್ಲಿ ಹೊಸ ಕೆಲಸಗಳು ದೊರೆಯುವ ಸಾಧ್ಯತೆಗಳಿವೆ.

***

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸ್ವಯಂ ಉದ್ಯೋಗಿಗಳಿಗೆ ಆದಾಯದಲ್ಲಿ ಏರಿಕೆಯಿದೆ. ಸ್ನೇಹಿತರಿಂದ ಒಂದು ಸಂತೋಷದ ಸುದ್ದಿ ತಲುಪುತ್ತದೆ. ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವರ್ತಿಸಿರಿ, ಇಲ್ಲವಾದಲ್ಲಿ ನಿಮ್ಮ ವಿರುದ್ಧ ಷಡ್ಯಂತ್ರ ನಡೆಯಬಹುದು. ಬೇರೆಯವರ ಒತ್ತಡಕ್ಕೆ ಮಣಿದು ದುಂದು ವೆಚ್ಚ ಮಾಡಿದಲ್ಲಿ ಸಾಲ ಮಾಡಬೇಕಾದ ಸಂದರ್ಭ ಬರಬಹುದು. ಹಿರಿಯರ ಜೊತೆ ಮಾತನಾಡುವಾಗ ವಿವೇಚನೆಯಿಂದಿರಿ.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಭೂ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳಿವೆ. ಸರಿಯಾದ ನಿರ್ಧಾರಗಳಿಲ್ಲದೆ ಗೊಂದಲಮಯ ವಾತಾವರಣ ನಿರ್ಮಾಣ ಆಗಬಹುದು, ಸ್ವಲ್ಪ ಎಚ್ಚರವಿರಲಿ. ನೂತನ ಯಂತ್ರೋಪಕರಣಗಳನ್ನು ಮಾರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ವೈಯಕ್ತಿಕ ವಿಚಾರಗಳನ್ನು ಇತರರೊಡನೆ ಚರ್ಚಿಸುವುದರಿಂದ ನಿಮ್ಮ ಅಭಿಮಾನಕ್ಕೆ ಧಕ್ಕೆ ಆಗಬಹುದು. ಹಿರಿಯರಿಂದ ಆಸ್ತಿ ದೊರೆಯುವ ಸೂಚನೆಯಿದೆ.

***

ಧನಸ್ಸು ರಾಶಿ (ಮೂಲ ಪೂರ್ವಷಾಢ ಉತ್ತರಾಷಾಢ 1 )

ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಹಾದಿ ಸುಗಮವಾಗುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಒದಗಿಬರಲಿದೆ. ಹಳೆಯ ಬಾಕಿ ಹಣ ಈಗ ವಾಪಸ್‌ ಬಂದು ನಿಮಗೆ ಅನುಕೂಲವಾಗುತ್ತದೆ. ವ್ಯವಹಾರದಲ್ಲಿ ವರ್ತಮಾನದ ವಿಷಯಗಳನ್ನು ಅರಿತು ಕಾರ್ಯಮಗ್ನರಾಗುವುದು ಉತ್ತಮ. ಮಕ್ಕಳಿಂದ ಧನಸಹಾಯ ಸಿಗುವ ಸಾಧ್ಯತೆಗಳಿವೆ. ಬಂಧುಗಳ ನಡುವೆ ಸಾಕಷ್ಟು ಗುರುತಿಸಲ್ಪಡುವಿರಿ.

***

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಹಿರಿಯರ ಸಲಹೆಗಳಿಂದ ಹೊಸ ಆದಾಯದ ಮೂಲ ಸಿಗುತ್ತದೆ. ಕುಟುಂಬವರ್ಗದವರ ಸಹಕಾರದಿಂದ ವ್ಯವಹಾರದಲ್ಲಿ ಚೇತರಿಕೆ ಕಾಣಬಹುದು. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದ್ದರೂ ನಂತರ ಸರಿಯಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇರುವವರು ಉತ್ತಮ ಹೆಸರುಗಳಿಸಿದರೂ ಸಹ ಅವಮಾನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಹಿತ ಶತ್ರುಗಳಿಂದ ತೊಂದರೆಯನ್ನು ಎದುರಿಸಬೇಕಾಗಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಸ್ಥಿರಾಸ್ತಿಗಳು ಪ್ರಾಪ್ತವಾಗುವ ಸಂದರ್ಭವಿದೆ. ಹೊಸ ಭೂಮಿಯನ್ನು ಖರೀದಿಸುವಲ್ಲಿ ವಿಶೇಷ ಆಸಕ್ತಿ ಹೊಂದುವಿರಿ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಹೊಸ ಒತ್ತಡಗಳು ಬರಬಹುದು. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲೇಬೇಕು. ಕೃಷಿಗೆ ಸಂಬಂಧಿಸಿದ ಯಾಂತ್ರಿಕ ಸಲಕರಣೆಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ.

ಮೀನ ರಾಶಿ (ಪರ‍್ವಭಾದ್ರ 4 ಉತ್ತರಾಭಾದ್ರ ರೇವತಿ)

ಹಿಂದಿನ ತಾಪತ್ರಯಗಳೆಲ್ಲವೂ ಕಾಣದಂತಾಗಿ ಮನಸ್ಸು ನಿರಾಳವಾಗುವುದು. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಯಶಸ್ಸು ಇರುತ್ತದೆ. ವಕೀಲಿ ವೃತ್ತಿ ಮಾಡುವವರಿಗೆ ಕೈತುಂಬ ಕೆಲಸದ ಜೊತೆಗೆ ಆದಾಯದಲ್ಲಿ ಏರಿಕೆಯಾಗಲಿದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ತೊಗರಿ, ಕಡಲೆ ಮುಂತಾದ ಕಾಳುಗಳ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ. ಪಶುಸಂಗೋಪನೆಯನ್ನು ಮಾಡುವವರಿಗೆ ಸಾಕಷ್ಟು ಸಹಾಯಧನಗಳು ಒದಗಿಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT