ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂಧ್ರ ಮೊದಲಾದ ಕಡೆಗಳಿಂದ ಬಂದಿದ್ದ ಭಕ್ತರು, ಶ್ರದ್ಧಾ-ಭಕ್ತಿಯಿಂದ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತಭಾವ ತಳೆದರು. ಅವರು ಭಂಡಾರ ಹಾರಿಸುತ್ತಿದ್ದುದ್ದರಿಂದ ಕ್ಷೇತ್ರವೆಲ್ಲವೂ ಬಂಗಾರದ ಬಣ್ಣಮಯವಾಗಿತ್ತು. ಜಗ (ದೇವರ ಮೂರ್ತಿ) ಹೊತ್ತು ಕುಣಿಯುತ್ತಿದ್ದ ಜೋಗತಿಯರು ಗಮನಸೆಳೆದರು. ಉಧೋ... ಉಧೋ... ಯಲ್ಲಮ್ಮ ನಿನ್ಹಾಲ್ಕ ಉಧೋ... ಎಂಬ ಘೋಷಣೆಗಳು ಮೊಳಗಿದವು.