ಬಸ್ನಲ್ಲಿ ಗೋಲಗೇರಿ, ಆಲಗೂರ, ಢವಳಾರ, ಮಳ್ಳಿ, ಅಲ್ಲಾಪುರ, ಹುಣಶ್ಯಾಳ ಕಾಚಾಪುರ, ಸುಂಬಡ, ವಂದಾಲ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳಿದ್ದು, ಇವರೆಲ್ಲರೂ ಬಿ.ಎ ಪರೀಕ್ಷೆಗೆ ಹಾಜರಾಗಲು ಹೊರಟಿದ್ದರು ಎನ್ನಲಾಗಿದೆ.‘ಚಾಲಕ ಯಂಕಂಚಿ ಗ್ರಾಮದಿಂದಲೇ ಅತೀ ವೇಗವಾಗಿ ಬಸ್ ಓಡಿಸುತ್ತಿದ್ದರು. ಸಿಂದಗಿ ಬೈಪಾಸ್ನಲ್ಲಿ ರಸ್ತೆ ಹಂಪ್ ಜಿಗಿಸಿ, ಹೆದ್ದಾರಿಯಲ್ಲಿ ಹೊರಟಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆಸಿದರು’ ಎಂದು ವಿದ್ಯಾರ್ಥಿ ಹಣಮಂತ ದೊಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.