<p>ಬೀದರ್: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2021-22ನೇ ಸಾಲಿನ ಬಹುಮುಖ ಪ್ರತಿಭೆ ಕ್ಷೇತ್ರದ ಬಾಲಗೌರವ ಪ್ರಶಸ್ತಿ ಬೀದರ್ನ ಪ್ರಾಪ್ತಿ ಪ್ರಭುಗೆ ಲಭಿಸಿದೆ.</p>.<p>ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಾಪ್ತಿ ಪ್ರಭುಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 12 ಮಕ್ಕಳು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು ಅದರಲ್ಲಿ ಕಲಬುರಗಿ ವಿಭಾಗದಿಂದ ಆಯ್ಕೆಯಾದ ಏಕೈಕ ಬಾಲ ಪ್ರತಿಭೆಯಾಗಿದ್ದಾರೆ. ಬೀದರ್ನ ಇನ್ಫಿನಿಟಿ ಪಬ್ಲಿಕ್-ಹನಿಬೀಸ್ ಶಾಲೆಯ 6ನೇ ತರಗತಿ ವಿಧ್ಯಾರ್ಥಿನಿ ಪ್ರಾಪ್ತಿ ಅವರು ಸಹಾರ್ದ ತರಬೇತಿ ಕೇಂದ್ರದ ನಿರ್ಧೇಶಕ ಸುಬ್ರಹ್ಮಣ್ಯ ಪ್ರಭು ಹಾಗೂ ಪ್ರಫುಲ್ಲಾ ಅವರ ಪುತ್ರಿಯಾಗಿದ್ದಾರೆ.</p>.<p>ಶಾಲೆಯ ವತಿಯಿಂದ ಪ್ರಾಚಾರ್ಯೆ ಲಕ್ಷ್ಮೀ ಮುಗಳಿ ಮತ್ತು ಸಹಾರ್ದ ಕೇಂದ್ರದಲ್ಲಿ ಬೀದರ್ ವಿಶ್ವ ವಿದ್ಯಾಲಯದ ಸಮಾಜ ಕಾರ್ಯದ ಉಪನ್ಯಾಸಕ ಶಾಂತಕುಮಾರ ಚಿದ್ರಿ, ರವಿಕುಮಾರ ಅರಗಲ್ಲಿ, ಪ್ರದೀಪ ಕಡೋಣ, ಕೃಷ್ಣಾನಂದ, ಅನಿಲ ಕುಮಾ ಪಿ, ಎಸ್.ಜಿ. ಪಾಟೀಲ ಮಹಾಲಿಂಗ ಅಪ್ಪಣ್ಣಾ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2021-22ನೇ ಸಾಲಿನ ಬಹುಮುಖ ಪ್ರತಿಭೆ ಕ್ಷೇತ್ರದ ಬಾಲಗೌರವ ಪ್ರಶಸ್ತಿ ಬೀದರ್ನ ಪ್ರಾಪ್ತಿ ಪ್ರಭುಗೆ ಲಭಿಸಿದೆ.</p>.<p>ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಾಪ್ತಿ ಪ್ರಭುಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 12 ಮಕ್ಕಳು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು ಅದರಲ್ಲಿ ಕಲಬುರಗಿ ವಿಭಾಗದಿಂದ ಆಯ್ಕೆಯಾದ ಏಕೈಕ ಬಾಲ ಪ್ರತಿಭೆಯಾಗಿದ್ದಾರೆ. ಬೀದರ್ನ ಇನ್ಫಿನಿಟಿ ಪಬ್ಲಿಕ್-ಹನಿಬೀಸ್ ಶಾಲೆಯ 6ನೇ ತರಗತಿ ವಿಧ್ಯಾರ್ಥಿನಿ ಪ್ರಾಪ್ತಿ ಅವರು ಸಹಾರ್ದ ತರಬೇತಿ ಕೇಂದ್ರದ ನಿರ್ಧೇಶಕ ಸುಬ್ರಹ್ಮಣ್ಯ ಪ್ರಭು ಹಾಗೂ ಪ್ರಫುಲ್ಲಾ ಅವರ ಪುತ್ರಿಯಾಗಿದ್ದಾರೆ.</p>.<p>ಶಾಲೆಯ ವತಿಯಿಂದ ಪ್ರಾಚಾರ್ಯೆ ಲಕ್ಷ್ಮೀ ಮುಗಳಿ ಮತ್ತು ಸಹಾರ್ದ ಕೇಂದ್ರದಲ್ಲಿ ಬೀದರ್ ವಿಶ್ವ ವಿದ್ಯಾಲಯದ ಸಮಾಜ ಕಾರ್ಯದ ಉಪನ್ಯಾಸಕ ಶಾಂತಕುಮಾರ ಚಿದ್ರಿ, ರವಿಕುಮಾರ ಅರಗಲ್ಲಿ, ಪ್ರದೀಪ ಕಡೋಣ, ಕೃಷ್ಣಾನಂದ, ಅನಿಲ ಕುಮಾ ಪಿ, ಎಸ್.ಜಿ. ಪಾಟೀಲ ಮಹಾಲಿಂಗ ಅಪ್ಪಣ್ಣಾ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>