ಪರಿಸ್ಥಿತಿ ತಿಳಿಗೊಳಿಸಿದ ತಹಶಿಲ್ದಾರ್ ಸಂತೋಷ ಮ್ಯಾಗೇರಿ, ‘ಅರ್ಜಿ ಹಾಕುವ ಸಂದರ್ಭದಲ್ಲಿ ಸಿಎಸ್ಸಿ ಕೇಂದ್ರ, ಬಿಎಲ್ಒ ಅಥವಾ ಗ್ರಾಮ ಆಡಳಿತಾಧಿಕಾರಿಗಳಿಂದ ಲೋಪ ಆಗಿರಬಹುದು. ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ’ ಎಂದರು. ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು. ಆದರೆ, ಆ 28 ಮತದಾರರಿಗೆ ಮತದಾನಕ್ಕೆ ಅವಕಾಶ ಸಿಗದ ಕಾರಣ, ನಿರಾಸೆಯಿಂದ ಮರಳಿದರು.