ಅಮೀನಗಡ: ಕಾಂಗ್ರೆಸ್ ಅಭೂತಪೂರ್ವ ಗೆಲುವು ಹಾಗೂ ಎಚ್.ವೈ.ಮೇಟಿ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.
ಮುಖಂಡರಾದ ಜಗದೀಶ ಬಿಸಲದಿನ್ನಿ, ಪೀರಾ ಖಾದ್ರಿ, ಯಮನಪ್ಪ ನಾಗರಾಳ, ಮನೋಹರ ರಕ್ಕಸಗಿ, ಶಶಿಕಾಂತ ಪಾಟೀಲ, ರಾಜು ರಕ್ಕಸಗಿ, ಗೌಡಪ್ಪ ಹೊರಗಿನಮನಿ, ಚಂದ್ರು ಹುಬ್ಬಳ್ಳಿ,ಸಲೀಮ್ ಹಾದಿಮನಿ, ರವಿ ಅನವಾಲ, ಸಿಕಂದರ್ ಲಾಲಕೋಟಿ, ವಿಲಾಸ್ ಮೆಣಸಗಿ ಸೇರಿದಂತೆ ಅನೇಕರು ಇದ್ದರು.