<p><strong>ಬಾದಾಮಿ</strong>: ಗಜೇಂದ್ರಗಡ ಪಟ್ಟಣದ ನಾಲ್ಕು ಜನ ಆರೋಪಿಗಳಿಂದ ಇಲ್ಲಿನ ಪೊಲೀಸರು ಅಂದಾಜು ₹7.91 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ.</p>.<p>ಚೊಳಚಗುಡ್ಡ ಗ್ರಾಮ ಸಮೀಪದ ಮಲಪ್ರಭಾ ನದಿ ಗೇಟ್ ಕಾವಲುಗಾರ ಗುರುರಾಜ ಹಿರೇಮಠ ಎಂಬುವವರ ಕೈಗೆ ಏ. 3ರಂದು ರಾತ್ರಿ ಐದಾರು ಜನ ಅಪರಿಚಿತರು ಹಗ್ಗದಿಂದ ಕಟ್ಟಿ, ಬೆದರಿಸಿ ₹50,700 ಮೌಲ್ಯದ ಕಬ್ಬಿಣದ ಗೇಟನ್ನು ಮತ್ತು ಮತ್ತು ಅವರಲ್ಲಿದ್ದ ₹ 800 ಕಿತ್ತುಕೊಂಡು ವಾಹನದಲ್ಲಿ ಪರಾರಿಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು.</p>.<p>ಗಜೇಂದ್ರಗಡದ ಮುತ್ತಪ್ಪ ಗೋಂದಳೆ ಸೇರಿದಂತೆ ನಾಲ್ಕು ಜನ ಆರೋಪಿಗಳಿಂದ ₹6 ಲಕ್ಷ ಮೌಲ್ಯದ ಎರಡು ಗೂಡ್ಸ್ ವಾಹನ, ₹1.40 ಲಕ್ಷ ಮೌಲ್ಯದ ಎರಡು ಮೋಟಾರ್ ಬೈಕ್, ₹50,700 ಮೌಲ್ಯದ 13 ಕಬ್ಬಿಣದ ಗೇಟುಗಳು ಮತ್ತು ₹800 ನಗದನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.</p>.<p>ಜಿಲ್ಲಾ ಪೊಲೀಸ್ ಅಧೀಕ್ಷಕ ಅಮರನಾಥ ರಡ್ಡಿ, ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದ ಮೇರೆಗೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ಗಜೇಂದ್ರಗಡ ಪಟ್ಟಣದ ನಾಲ್ಕು ಜನ ಆರೋಪಿಗಳಿಂದ ಇಲ್ಲಿನ ಪೊಲೀಸರು ಅಂದಾಜು ₹7.91 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ.</p>.<p>ಚೊಳಚಗುಡ್ಡ ಗ್ರಾಮ ಸಮೀಪದ ಮಲಪ್ರಭಾ ನದಿ ಗೇಟ್ ಕಾವಲುಗಾರ ಗುರುರಾಜ ಹಿರೇಮಠ ಎಂಬುವವರ ಕೈಗೆ ಏ. 3ರಂದು ರಾತ್ರಿ ಐದಾರು ಜನ ಅಪರಿಚಿತರು ಹಗ್ಗದಿಂದ ಕಟ್ಟಿ, ಬೆದರಿಸಿ ₹50,700 ಮೌಲ್ಯದ ಕಬ್ಬಿಣದ ಗೇಟನ್ನು ಮತ್ತು ಮತ್ತು ಅವರಲ್ಲಿದ್ದ ₹ 800 ಕಿತ್ತುಕೊಂಡು ವಾಹನದಲ್ಲಿ ಪರಾರಿಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು.</p>.<p>ಗಜೇಂದ್ರಗಡದ ಮುತ್ತಪ್ಪ ಗೋಂದಳೆ ಸೇರಿದಂತೆ ನಾಲ್ಕು ಜನ ಆರೋಪಿಗಳಿಂದ ₹6 ಲಕ್ಷ ಮೌಲ್ಯದ ಎರಡು ಗೂಡ್ಸ್ ವಾಹನ, ₹1.40 ಲಕ್ಷ ಮೌಲ್ಯದ ಎರಡು ಮೋಟಾರ್ ಬೈಕ್, ₹50,700 ಮೌಲ್ಯದ 13 ಕಬ್ಬಿಣದ ಗೇಟುಗಳು ಮತ್ತು ₹800 ನಗದನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.</p>.<p>ಜಿಲ್ಲಾ ಪೊಲೀಸ್ ಅಧೀಕ್ಷಕ ಅಮರನಾಥ ರಡ್ಡಿ, ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದ ಮೇರೆಗೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>