<p><strong>ಬಾದಾಮಿ:</strong> ‘ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂದೆ ಇರುವ ಸಬ್ ಜೈಲ್ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ನೂತನವಾಗಿ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಪೊಲೀಸ್ ಇಲಾಖೆಯ ಜೊತೆಗೆ ಇಲ್ಲಿಯೇ ಸಬ್ ಜೈಲ್ ಇಲಾಖೆ ಇತ್ತು. ಸಬ್ ಜೈಲ್ ಸಿಬ್ಬಂದಿಯ ವಸತಿಗೆ ಎರಡು ಎಕರೆ ನಿವೇಶನದಲ್ಲಿ 12 ಮನೆಗಳನ್ನು ನಿರ್ಮಿಸಲಾಗಿತ್ತು. ಸಬ್ ಜೈಲ್ ಪೊಲೀಸ್ ಸಿಬ್ಬಂದಿ ಇಲ್ಲಿಯೇ ವಾಸವಾಗಿದ್ದರು.</p>.<p>ಪೊಲೀಸ್ ಇಲಾಖೆಯ ಹಳೇ ಕಟ್ಟಡವನ್ನು ತೆರವು ಮಾಡಿದ್ದರಿಂದ ಸಬ್ ಜೈಲ್ ನ್ನು ಜಿಲ್ಲಾ ಸ್ಥಳ ಬಾಗಲಕೋಟೆಗೆ ಸ್ಥಳಾಂತರಿಸಲಾಯಿತು. ಸಿಬ್ಬಂದಿ ಕೂಡ ಬಾಗಲಕೋಟೆಗೆ ತೆರಳಿದರು. ಇಲ್ಲಿನ ವಸತಿ ಗೃಹಗಳು ಖಾಲಿಯಾದವು. ಮನೆಗಳೆಲ್ಲ ಶಿಥಿಲಗೊಂಡವು.</p>.<p>ಖಾಲಿಯಾಗಿರುವ ಸಬ್ ಜೈಲ್ ಸಿಬ್ಬಂದಿ ವಸತಿ ಗೃಹಗಳಲ್ಲಿ ಸಂಜೆಯಾಗುತ್ತಿದ್ದಂತೆ ಜೂಜಾಟ, ಕುಡುಕರ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈಚೆಗೆ ಪರಸ್ಥಳದ ವ್ಯಕ್ತಿಯೊಬ್ಬ ಇದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.</p>.<p>‘ಮ್ಯೂಸಿಯಂ ರಸ್ತೆಯಲ್ಲಿ ತರಕಾರಿ ಮತ್ತು ಹಣ್ಣು ಮಾರಾಟದಿಂದ ಪ್ರವಾಸಿಗರ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ಖಾಲಿ ಇರುವ ಸಬ್ ಜೈಲ್ ನಿವೇಶನದಲ್ಲಿ ತರಕಾರಿ ಮಾರುಟ್ಟೆಯನ್ನು ನಿರ್ಮಿಸಿ ’ ಎಂದು ಮತಕ್ಷೇತ್ರದ ಶಾಸಕರಿದ್ದಾಗ ಸಿದ್ದರಾಮಯ್ಯ ಅವರಿಗೆ 2019 ರಲ್ಲಿ ಸ್ಥಳೀಯ ಅಭಿವೃದ್ಧಿ ಹೋರಾಟ ಸಮಿತಿಯು ಮನವಿ ಸಲ್ಲಿಸಿದ್ದನ್ನು ಸ್ಮರಿಸಬಹುದು.</p>.<p>ನೂತನ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸದರಿ ನಿವೇಶನವನ್ನು ಪುರಸಭೆ ಹಸ್ತಾಂತರಿಸಲು ಅಂದಿನ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾವನೆಯನ್ನು ಹಿಂದಿನ ಸರ್ಕಾರದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮಂಜೂರಾತಿಗೆ 2020ರ ಜೂನ್ 6 ರಂದು ಪತ್ರವನ್ನು ಬರೆದಿದ್ದರು.</p>.<p>‘ಸಬ್ ಜೈಲ್ ನಿವೇಶನದ ಹಸ್ತಾಂತರ ಕುರಿತು ರಾಜ್ಯ ಗೃಹ ಇಲಾಖೆಯಿಂದ ಯಾವುದೇ ಪತ್ರ ಪುರಸಭೆಗೆ ಬಂದಿಲ್ಲ. ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಇದೆ ’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.</p>.<p>‘ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಒತ್ತಾಯಿಸಿ ಮ್ಯೂಸಿಯಂ ರಸ್ತೆಯಲ್ಲಿ ಪ್ರವಾಸಿ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ನೂತನ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಬೇಕು ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೆಗಲ್ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂದೆ ಇರುವ ಸಬ್ ಜೈಲ್ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ನೂತನವಾಗಿ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಪೊಲೀಸ್ ಇಲಾಖೆಯ ಜೊತೆಗೆ ಇಲ್ಲಿಯೇ ಸಬ್ ಜೈಲ್ ಇಲಾಖೆ ಇತ್ತು. ಸಬ್ ಜೈಲ್ ಸಿಬ್ಬಂದಿಯ ವಸತಿಗೆ ಎರಡು ಎಕರೆ ನಿವೇಶನದಲ್ಲಿ 12 ಮನೆಗಳನ್ನು ನಿರ್ಮಿಸಲಾಗಿತ್ತು. ಸಬ್ ಜೈಲ್ ಪೊಲೀಸ್ ಸಿಬ್ಬಂದಿ ಇಲ್ಲಿಯೇ ವಾಸವಾಗಿದ್ದರು.</p>.<p>ಪೊಲೀಸ್ ಇಲಾಖೆಯ ಹಳೇ ಕಟ್ಟಡವನ್ನು ತೆರವು ಮಾಡಿದ್ದರಿಂದ ಸಬ್ ಜೈಲ್ ನ್ನು ಜಿಲ್ಲಾ ಸ್ಥಳ ಬಾಗಲಕೋಟೆಗೆ ಸ್ಥಳಾಂತರಿಸಲಾಯಿತು. ಸಿಬ್ಬಂದಿ ಕೂಡ ಬಾಗಲಕೋಟೆಗೆ ತೆರಳಿದರು. ಇಲ್ಲಿನ ವಸತಿ ಗೃಹಗಳು ಖಾಲಿಯಾದವು. ಮನೆಗಳೆಲ್ಲ ಶಿಥಿಲಗೊಂಡವು.</p>.<p>ಖಾಲಿಯಾಗಿರುವ ಸಬ್ ಜೈಲ್ ಸಿಬ್ಬಂದಿ ವಸತಿ ಗೃಹಗಳಲ್ಲಿ ಸಂಜೆಯಾಗುತ್ತಿದ್ದಂತೆ ಜೂಜಾಟ, ಕುಡುಕರ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈಚೆಗೆ ಪರಸ್ಥಳದ ವ್ಯಕ್ತಿಯೊಬ್ಬ ಇದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.</p>.<p>‘ಮ್ಯೂಸಿಯಂ ರಸ್ತೆಯಲ್ಲಿ ತರಕಾರಿ ಮತ್ತು ಹಣ್ಣು ಮಾರಾಟದಿಂದ ಪ್ರವಾಸಿಗರ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ಖಾಲಿ ಇರುವ ಸಬ್ ಜೈಲ್ ನಿವೇಶನದಲ್ಲಿ ತರಕಾರಿ ಮಾರುಟ್ಟೆಯನ್ನು ನಿರ್ಮಿಸಿ ’ ಎಂದು ಮತಕ್ಷೇತ್ರದ ಶಾಸಕರಿದ್ದಾಗ ಸಿದ್ದರಾಮಯ್ಯ ಅವರಿಗೆ 2019 ರಲ್ಲಿ ಸ್ಥಳೀಯ ಅಭಿವೃದ್ಧಿ ಹೋರಾಟ ಸಮಿತಿಯು ಮನವಿ ಸಲ್ಲಿಸಿದ್ದನ್ನು ಸ್ಮರಿಸಬಹುದು.</p>.<p>ನೂತನ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸದರಿ ನಿವೇಶನವನ್ನು ಪುರಸಭೆ ಹಸ್ತಾಂತರಿಸಲು ಅಂದಿನ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾವನೆಯನ್ನು ಹಿಂದಿನ ಸರ್ಕಾರದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮಂಜೂರಾತಿಗೆ 2020ರ ಜೂನ್ 6 ರಂದು ಪತ್ರವನ್ನು ಬರೆದಿದ್ದರು.</p>.<p>‘ಸಬ್ ಜೈಲ್ ನಿವೇಶನದ ಹಸ್ತಾಂತರ ಕುರಿತು ರಾಜ್ಯ ಗೃಹ ಇಲಾಖೆಯಿಂದ ಯಾವುದೇ ಪತ್ರ ಪುರಸಭೆಗೆ ಬಂದಿಲ್ಲ. ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಇದೆ ’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.</p>.<p>‘ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಒತ್ತಾಯಿಸಿ ಮ್ಯೂಸಿಯಂ ರಸ್ತೆಯಲ್ಲಿ ಪ್ರವಾಸಿ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ನೂತನ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಬೇಕು ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೆಗಲ್ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>