ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಪ್ರಾಮಾಣಿಕತೆ ಮೆರೆದ ಕಂಡಕ್ಟರ್

Published 17 ಮಾರ್ಚ್ 2024, 15:58 IST
Last Updated 17 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಬಾಗಲಕೋಟೆ: ಬಸ್‌ನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಚೈನ್ ಅನ್ನು ವಾಪಸ್‌ ನೀಡುವ ಮೂಲಕ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕ ಪರಶುರಾಮ ಮಾದರ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೈದರಾಬಾದ್ ಬೆಳಗಾವಿ ಮಾರ್ಗದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಸನ್ನಕುಮಾರ ರೆಡ್ಡಿ ಎಂಬುವವರು ಒಂದು ಲಕ್ಷ ಮೌಲ್ಯದ ಚಿನ್ನದ ಚೈನು ಬಿಟ್ಟು ಹೋಗಿದ್ದರು. ಅದು ನಿರ್ವಾಹಕ ಪರಶುರಾಮ ಅವರಿಗೆ ಸಿಕ್ಕಿತ್ತು. ಬಾಗಲಕೋಟೆ ಘಟಕದ ವ್ಯವಸ್ಥಾಪಕ ಎ.ಎ. ಕೋರಿ ಅವರ ಸಮ್ಮುಖದಲ್ಲಿ ಪ್ರಸನ್ನಕುಮಾರ ಅವರಿಗೆ ಚೈನು ವಾಪಸ್‌ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT