<p><strong>ರಬಕವಿ ಬನಹಟ್ಟಿ</strong>: ನ.2ರಂದು ಇಲ್ಲಿನ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಸಮಸ್ತ ಸೋಮವಾರ ಪೇಟೆ ದೈವ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ ತಿಳಿಸಿದರು.</p>.<p>ಅವರು ಸುದ್ದಿಗಾರರೊಂದಿಗೆ ಮಾತನಾಡಿ, 42 ಉಪ ಜಾತಿಗಳನ್ನು ಒಳಗೊಂಡ ಸೋಮವಾರ ಪೇಟೆಯ ದೈವ ಮಂಡಳಿ ಮತ್ತು ಮಲ್ಲಿಕಾರ್ಜುನ ದೇವರ ಭಕ್ತ ಮಂಡಳಿ ಆಶ್ರಯದಲ್ಲಿ ಜಾತ್ರೆ ನಡೆಯಲಿದೆ.</p>.<p>ನ.2 ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಶನಿವಾರ ಬೆಳಗಿನ ಜಾವದಿಂದಲೇ ಬಹಳಷ್ಟು ಜನರು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆಯನ್ನು ಪೂರೈಸುತ್ತಾರೆ. ಸಂಜೆ 8 ಕ್ಕೆ ಹೂ ಮಾಲೆ, ವಿದ್ಯುತ್ ದೀಪಾಲಂಕಾರ ಮತ್ತು ಭಕ್ತರು ನೀಡಿದ ಸಂಕಷ್ಟ ಮಾಲೆಗಳಿಂದ ಶೃಂಗಾರಗೊಂಡ ಮಲ್ಲಿಕಾರ್ಜುನ ದೇವರ ರಥೋತ್ಸವವು ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭಗೊಂಡ ನಗರದ ಪ್ರಮುಖ ಸಂಚರಿಸಿ ಜುಂಜಪ್ಪನವರ ಮನೆಯವರಿಗೆ ನಡೆಯುತ್ತದೆ.</p>.<p>ರಥೋತ್ಸವದ ನಂತರ ಇಲ್ಲಿನ ಹಳೆಯ ಅಂಚೆ ಕಚೇರಿಯ ಮುಂಭಾಗದಲ್ಲಿ ರಬಕವಿ ಮತ್ತು ಮಹಾಲಿಂಗಪುರದ ಸಂಬಾಳ ಮತ್ತು ಕರಡಿ ಕಲಾವಿದರ ತಂಡದಿಂದ ಸಂಬಾಳ ಮತ್ತು ಕರಡಿ ವಾದನಗಳ ಪ್ರದರ್ಶನ ನಡೆಯಲಿದೆ.</p>.<p>ಭಾನುವಾರ ಮಧ್ಯಾಹ್ನ 3ಗಂಟೆಗೆ ಇಲ್ಲಿನ ಅಶೋಕ ಕಾಲೊನಿಯಲ್ಲಿರುವ ಕುಸ್ತಿ ಮೈದಾನದಲ್ಲಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.</p>.<p>ಸೋಮವಾರ ಕಳಸೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.</p>.<p>ಪ್ರಶಾಂತ ಕೊಳಕಿ, ಡಾ. ಮಲ್ಲಿಕಾರ್ಜುನ ಬಾವಲತ್ತಿ, ಕಿರಣ ಆಳಗಿ, ಮಲ್ಲಿನಾಥ ಕಕಮರಿ, ಶಿವು ಬಾಗೇವಾಡಿ, ಚನ್ನಪ್ಪ ಗುಣಕಿ, ಮಹಾಶಾಂತ ಶೆಟ್ಟಿ, ರಾಜು ಲುಕ್ಕ, ಮಲ್ಲು ಬುಟ್ಟನ್ನವರ, ಕುಲಕರ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ</strong>: ನ.2ರಂದು ಇಲ್ಲಿನ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಸಮಸ್ತ ಸೋಮವಾರ ಪೇಟೆ ದೈವ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ ತಿಳಿಸಿದರು.</p>.<p>ಅವರು ಸುದ್ದಿಗಾರರೊಂದಿಗೆ ಮಾತನಾಡಿ, 42 ಉಪ ಜಾತಿಗಳನ್ನು ಒಳಗೊಂಡ ಸೋಮವಾರ ಪೇಟೆಯ ದೈವ ಮಂಡಳಿ ಮತ್ತು ಮಲ್ಲಿಕಾರ್ಜುನ ದೇವರ ಭಕ್ತ ಮಂಡಳಿ ಆಶ್ರಯದಲ್ಲಿ ಜಾತ್ರೆ ನಡೆಯಲಿದೆ.</p>.<p>ನ.2 ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಶನಿವಾರ ಬೆಳಗಿನ ಜಾವದಿಂದಲೇ ಬಹಳಷ್ಟು ಜನರು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆಯನ್ನು ಪೂರೈಸುತ್ತಾರೆ. ಸಂಜೆ 8 ಕ್ಕೆ ಹೂ ಮಾಲೆ, ವಿದ್ಯುತ್ ದೀಪಾಲಂಕಾರ ಮತ್ತು ಭಕ್ತರು ನೀಡಿದ ಸಂಕಷ್ಟ ಮಾಲೆಗಳಿಂದ ಶೃಂಗಾರಗೊಂಡ ಮಲ್ಲಿಕಾರ್ಜುನ ದೇವರ ರಥೋತ್ಸವವು ಮಲ್ಲಿಕಾರ್ಜುನ ದೇವಸ್ಥಾನದಿಂದ ಆರಂಭಗೊಂಡ ನಗರದ ಪ್ರಮುಖ ಸಂಚರಿಸಿ ಜುಂಜಪ್ಪನವರ ಮನೆಯವರಿಗೆ ನಡೆಯುತ್ತದೆ.</p>.<p>ರಥೋತ್ಸವದ ನಂತರ ಇಲ್ಲಿನ ಹಳೆಯ ಅಂಚೆ ಕಚೇರಿಯ ಮುಂಭಾಗದಲ್ಲಿ ರಬಕವಿ ಮತ್ತು ಮಹಾಲಿಂಗಪುರದ ಸಂಬಾಳ ಮತ್ತು ಕರಡಿ ಕಲಾವಿದರ ತಂಡದಿಂದ ಸಂಬಾಳ ಮತ್ತು ಕರಡಿ ವಾದನಗಳ ಪ್ರದರ್ಶನ ನಡೆಯಲಿದೆ.</p>.<p>ಭಾನುವಾರ ಮಧ್ಯಾಹ್ನ 3ಗಂಟೆಗೆ ಇಲ್ಲಿನ ಅಶೋಕ ಕಾಲೊನಿಯಲ್ಲಿರುವ ಕುಸ್ತಿ ಮೈದಾನದಲ್ಲಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.</p>.<p>ಸೋಮವಾರ ಕಳಸೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.</p>.<p>ಪ್ರಶಾಂತ ಕೊಳಕಿ, ಡಾ. ಮಲ್ಲಿಕಾರ್ಜುನ ಬಾವಲತ್ತಿ, ಕಿರಣ ಆಳಗಿ, ಮಲ್ಲಿನಾಥ ಕಕಮರಿ, ಶಿವು ಬಾಗೇವಾಡಿ, ಚನ್ನಪ್ಪ ಗುಣಕಿ, ಮಹಾಶಾಂತ ಶೆಟ್ಟಿ, ರಾಜು ಲುಕ್ಕ, ಮಲ್ಲು ಬುಟ್ಟನ್ನವರ, ಕುಲಕರ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>