ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನರು ಹಾಲು, ಮಜ್ಜಿಗೆ, ಮೊಸರಿನ ಮೊರೆ ಹೋಗಿದ್ದರು. ಖಾಸಗಿ ಕಂಪನಿಗಳ ಮೊಸರು, ಮಜ್ಜಿಗೆ ಮಾರಾಟದ ಜತೆಗೆ ವಿಜಯಪುರ, ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಂಪು ಪಾನೀಯ ಬೇಡಿಕೆ ಜೋರಾಗಿತ್ತು. ಹವಾನಿಯಂತ್ರಿತ ಯಂತ್ರ, ಏರ್ ಕೂಲರ್ಗಳ ಮಾರಾಟವೂ ಭರ್ಜರಿಯಾಗಿ ನಡೆದಿದೆ. ಸೋಡಾ, ಶರಬತ್, ಲಸ್ಸಿ, ಐಸ್ಕ್ರೀಂ ಮಾರಾಟದ ಮಳಿಗೆಗಳಲ್ಲೂ ಜನಸಂದಣಿ ಕಾಣುತ್ತಿತ್ತು.