<p><strong>ಬಾಗಲಕೋಟೆ</strong>: ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ್ದ ಮನೆ ಪರಿಹಾರ ಹಣದಲ್ಲಿ ಪಾಲು ನೀಡದ ಪತ್ನಿಯ ತಮ್ಮನನ್ನೇ ಕೊಲೆಗಾರ ಸೇರಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.</p>.<p>ಅವಧೂತ ಗವಿಮಠ, ಮಿಯಾದಾದ ಮಹಮ್ಮದ್ ನಾಯಕ, ನಚಿಕೇತ ಶಹಾಪೂರ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತಲಾ ₹5 ಸಾವಿರ ದಂಡ ವಿಧಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.</p>.<p><strong>ಪ್ರಕರಣ ವಿವರ:</strong> ವೀರೇಶ ಹಡಗಳಿಮಠ ನವನಗರದ ಸೆಕ್ಟರ್ ನಂ.63ರಲ್ಲಿ ವಾಸವಾಗಿದ್ದರು. ಇವರ ತಂದೆ–ತಾಯಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ವೀರೇಶ ಅವರ ಅಕ್ಕನನ್ನು ಬೆಳಗಾವಿ ಅವಧೂತ ಗವಿಮಠ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.</p>.<p>ಬಾಗಲಕೋಟೆಯಲ್ಲಿದ್ದ ವೀರೇಶ ಅವರ ಪಿತ್ರಾರ್ಜಿತ ಆಸ್ತಿ ಮುಳುಗಡೆಯಾಗಿತ್ತು. ಅದರ ಮೊದಲ ಕಂತಿನ ಪರಿಹಾರ ಹಣ ಬಿಡುಗಡೆಯಾಗಿತ್ತು. ಅದರಲ್ಲಿ ನಮಗೂ ಅರ್ಧ ಪಾಲು ನೀಡಬೇಕು ಎಂದು ವೀರೇಶ ಅವರ ಅಕ್ಕ ಮಧುಶ್ರೀ ಹಾಗೂ ಮಾವ ಅವಧೂತ ಫೋನ್ ಮಾಡಿ ಕಿರಿಕಿರಿ ಮಾಡುತ್ತಿದ್ದರು.</p>.<p>ವೀರೇಶ ತನ್ನ ಸ್ನೇಹಿತ ಸುಹಾಸ ಬೋರನ್ನವರನೊಂದಿಗೆ ನವನಗರದ ಬಾಡಿಗೆ ಮನೆಯಲ್ಲಿದ್ದಾಗ ಕೊಲೆ ಮಾಡುವ ಉದ್ದೇಶದಿಂದ ಅಪರಾಧಿಗಳು ಮನೆ ಹೊಕ್ಕು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದರು. ಬಿಡಿಸಿಕೊಳ್ಳಲು ಹೋದ ಸುಹಾಸ ಅವರ ಮೇಲೆಯೂ ಹಲ್ಲೆ ಮಾಡಲಾಗಿತ್ತು.</p>.<p>ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ತನಿಖಾಧಿಕಾರಿ ಸಿಪಿಐ ಎಸ್.ಎಂ. ಅವಜಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ್ದ ಮನೆ ಪರಿಹಾರ ಹಣದಲ್ಲಿ ಪಾಲು ನೀಡದ ಪತ್ನಿಯ ತಮ್ಮನನ್ನೇ ಕೊಲೆಗಾರ ಸೇರಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ. ವಿಜಯ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.</p>.<p>ಅವಧೂತ ಗವಿಮಠ, ಮಿಯಾದಾದ ಮಹಮ್ಮದ್ ನಾಯಕ, ನಚಿಕೇತ ಶಹಾಪೂರ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತಲಾ ₹5 ಸಾವಿರ ದಂಡ ವಿಧಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.</p>.<p><strong>ಪ್ರಕರಣ ವಿವರ:</strong> ವೀರೇಶ ಹಡಗಳಿಮಠ ನವನಗರದ ಸೆಕ್ಟರ್ ನಂ.63ರಲ್ಲಿ ವಾಸವಾಗಿದ್ದರು. ಇವರ ತಂದೆ–ತಾಯಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ವೀರೇಶ ಅವರ ಅಕ್ಕನನ್ನು ಬೆಳಗಾವಿ ಅವಧೂತ ಗವಿಮಠ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.</p>.<p>ಬಾಗಲಕೋಟೆಯಲ್ಲಿದ್ದ ವೀರೇಶ ಅವರ ಪಿತ್ರಾರ್ಜಿತ ಆಸ್ತಿ ಮುಳುಗಡೆಯಾಗಿತ್ತು. ಅದರ ಮೊದಲ ಕಂತಿನ ಪರಿಹಾರ ಹಣ ಬಿಡುಗಡೆಯಾಗಿತ್ತು. ಅದರಲ್ಲಿ ನಮಗೂ ಅರ್ಧ ಪಾಲು ನೀಡಬೇಕು ಎಂದು ವೀರೇಶ ಅವರ ಅಕ್ಕ ಮಧುಶ್ರೀ ಹಾಗೂ ಮಾವ ಅವಧೂತ ಫೋನ್ ಮಾಡಿ ಕಿರಿಕಿರಿ ಮಾಡುತ್ತಿದ್ದರು.</p>.<p>ವೀರೇಶ ತನ್ನ ಸ್ನೇಹಿತ ಸುಹಾಸ ಬೋರನ್ನವರನೊಂದಿಗೆ ನವನಗರದ ಬಾಡಿಗೆ ಮನೆಯಲ್ಲಿದ್ದಾಗ ಕೊಲೆ ಮಾಡುವ ಉದ್ದೇಶದಿಂದ ಅಪರಾಧಿಗಳು ಮನೆ ಹೊಕ್ಕು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದರು. ಬಿಡಿಸಿಕೊಳ್ಳಲು ಹೋದ ಸುಹಾಸ ಅವರ ಮೇಲೆಯೂ ಹಲ್ಲೆ ಮಾಡಲಾಗಿತ್ತು.</p>.<p>ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ತನಿಖಾಧಿಕಾರಿ ಸಿಪಿಐ ಎಸ್.ಎಂ. ಅವಜಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>