<p><strong>ಬಾಗಲಕೋಟೆ</strong>: ವಾಣಿಜ್ಯ ಚಟುವಟಿಕೆಗಳಿಗಾಗಿ ನೀಡಿದ ಹಲವು ಸೆಕ್ಟರ್ಗಳಲ್ಲಿ ಜಾಲಿ ಗಿಡಗಳು ಬೆಳೆದು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಗಡಿಗಳು ನಿರ್ಮಾಣವಾಗದೇ ಸಂಜೆ ಅವು ಅಕ್ರಮ ಚಟುವಟಿಕೆಗಳ ತಾಣಗಳಾಗುತ್ತಿವೆ.</p>.<p>ವಾಣಿಜ್ಯ ಚಟುವಟಿಕೆಗೆ ಸೆಕ್ಟರ್ ನಂ.31ರಲ್ಲಿ ಗುರುವಾರದ ಸಂತೆ ನಡೆಯುತ್ತಿದೆ. ಹಲವಾರು ಜನರು ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಜಾಲಿ ಗಿಡಗಳು ಬೆಳೆದಿರುವುದರಿಂದ ಸಂಚರಿಸಲೂ ಕಷ್ಟ ಪಡಬೇಕಾದ ಸ್ಥಿತಿ ಇದೆ.</p>.<p>ಸೆಕ್ಟರ್ ನಂ.17ರಲ್ಲಿಯೂ ಇದೆ ಸ್ಥಿತಿ. ಮಧ್ಯದಲ್ಲಿ ಹಲವಾರು ನಿವೇಶನಗಳು ಖಾಲಿ ಇದ್ದು, ಅಲ್ಲಿಯೂ ಮುಳ್ಳು ಗಿಡಗಳು ಬೆಳೆದಿವೆ. ಅಲ್ಲಿ ಸಂಚರಿಸಲು ಭಯ ಪಡುವಂತಹ ಸ್ಥಿತಿ ಇದೆ. ವಿಷಜಂತುಗಳ ವಾಸಸ್ಥಾನವಾಗಿವೆ.</p>.<p>ರಸ್ತೆಯ ಎರಡೂ ಬದಿ ಮುಳ್ಳು ಗಿಡಗಳು ಬೆಳೆದಿರುವುದರಿಂದ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಅರ್ಧ ರಸ್ತೆಯನ್ನು ಗಿಡಗಳು ಆವರಿಸಿವೆ. ಇದರಿಂದಾಗಿ ಸಂತೆ ನಡೆಯುವ ಹಾಗೂ ವಿವಿಧ ಖಾಲಿ ಪ್ಲಾಟ್ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.</p>.<p>ವಾಣಿಜ್ಯ ಸೆಕ್ಟರ್ನಲ್ಲಿ ಮದ್ಯದ ಅಂಗಡಿಯೊಂದಿದೆ. ಅಲ್ಲಿ ಮದ್ಯ ತೆಗೆದುಕೊಳ್ಳುವ ಜನರು ಅಲ್ಲಿಯೇ ರಸ್ತೆ ಬದಿ ಕುಳಿತು ಕುಡಿಯುತ್ತಾರೆ. ಅದರ ಪಕ್ಕದ ಸೆಕ್ಟರ್ನಲ್ಲಿರುವ ನಿವಾಸಿಗಳಿಗೆ, ಬೇರೆ ಸೆಕ್ಟರ್ಗಳಿಗೆ ಹೋಗುವವರು ಮುಜುಗುರದಿಂದ ಸಂಚರಿಸಬೇಕಾದ ಸ್ಥಿತಿ ಇದೆ.</p>.<p>ನಿವೇಶನ ತೆಗೆದುಕೊಂಡ ಎರಡು ವರ್ಷಗಳಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ನಿವೇಶನ ನೀಡಲಾಗಿರುತ್ತದೆ. ಆದರೆ, ಹತ್ತಾರು ವರ್ಷಗಳಾದರೂ ಕಟ್ಟಡಗಳ ನಿರ್ಮಾಣವಾಗಿಲ್ಲ. ಇದನ್ನು ಕೇಳಬೇಕಾದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವೂ ಮೌನವಾಗಿದೆ.</p>.<p>ಕಟ್ಟಡಗಳನ್ನು ನಿರ್ಮಿಸಿಕೊಳ್ಳದಿದ್ದರೂ ಪರವಾಗಿಲ್ಲ. ನಿವೇಶನಗಳನ್ನು ಸ್ವಚ್ಛವಾಗಿಯಾದರೂ ಇಟ್ಟುಕೊಳ್ಳಬೇಕು. ಹತ್ತಾರು ವರ್ಷಗಳಿಂದ ತಿರುಗಿ ನೋಡದ್ದರಿಂದ ಜಾಲಿ ಗಿಡಗಳು ಬೆಳೆದು ಸಂಚಾರಕ್ಕೂ ತೊಂದರೆಯಾಗುತ್ತಿದೆ.</p>.<p>‘ನಿವೇಶನಗಳ ಸ್ವಚ್ಛತೆಗೆ ಬಿಟಿಡಿಎ ಕ್ರಮಕೈಗೊಳ್ಳಬೇಕು. ಜನರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅದನ್ನು ಕೂಡಲೇ ಬಗೆಹರಿಸಬೇಕು’ ಎಂದು ನಿವಾಸಿ ಮಲ್ಲಿಕಾರ್ಜುನ ಗೌಡರ ಒತ್ತಾಯಿಸಿದರು.</p>.<div><blockquote>ಹಣಕಾಸಿನ ಕೊರತೆ ಇರುವುದರಿಂದ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು</blockquote><span class="attribution"> ಚಂದ್ರಹಾಸ ಬಂಡಿ ಸಿಇ ಬಿಟಿಡಿಎ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ವಾಣಿಜ್ಯ ಚಟುವಟಿಕೆಗಳಿಗಾಗಿ ನೀಡಿದ ಹಲವು ಸೆಕ್ಟರ್ಗಳಲ್ಲಿ ಜಾಲಿ ಗಿಡಗಳು ಬೆಳೆದು ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಗಡಿಗಳು ನಿರ್ಮಾಣವಾಗದೇ ಸಂಜೆ ಅವು ಅಕ್ರಮ ಚಟುವಟಿಕೆಗಳ ತಾಣಗಳಾಗುತ್ತಿವೆ.</p>.<p>ವಾಣಿಜ್ಯ ಚಟುವಟಿಕೆಗೆ ಸೆಕ್ಟರ್ ನಂ.31ರಲ್ಲಿ ಗುರುವಾರದ ಸಂತೆ ನಡೆಯುತ್ತಿದೆ. ಹಲವಾರು ಜನರು ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಜಾಲಿ ಗಿಡಗಳು ಬೆಳೆದಿರುವುದರಿಂದ ಸಂಚರಿಸಲೂ ಕಷ್ಟ ಪಡಬೇಕಾದ ಸ್ಥಿತಿ ಇದೆ.</p>.<p>ಸೆಕ್ಟರ್ ನಂ.17ರಲ್ಲಿಯೂ ಇದೆ ಸ್ಥಿತಿ. ಮಧ್ಯದಲ್ಲಿ ಹಲವಾರು ನಿವೇಶನಗಳು ಖಾಲಿ ಇದ್ದು, ಅಲ್ಲಿಯೂ ಮುಳ್ಳು ಗಿಡಗಳು ಬೆಳೆದಿವೆ. ಅಲ್ಲಿ ಸಂಚರಿಸಲು ಭಯ ಪಡುವಂತಹ ಸ್ಥಿತಿ ಇದೆ. ವಿಷಜಂತುಗಳ ವಾಸಸ್ಥಾನವಾಗಿವೆ.</p>.<p>ರಸ್ತೆಯ ಎರಡೂ ಬದಿ ಮುಳ್ಳು ಗಿಡಗಳು ಬೆಳೆದಿರುವುದರಿಂದ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಅರ್ಧ ರಸ್ತೆಯನ್ನು ಗಿಡಗಳು ಆವರಿಸಿವೆ. ಇದರಿಂದಾಗಿ ಸಂತೆ ನಡೆಯುವ ಹಾಗೂ ವಿವಿಧ ಖಾಲಿ ಪ್ಲಾಟ್ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.</p>.<p>ವಾಣಿಜ್ಯ ಸೆಕ್ಟರ್ನಲ್ಲಿ ಮದ್ಯದ ಅಂಗಡಿಯೊಂದಿದೆ. ಅಲ್ಲಿ ಮದ್ಯ ತೆಗೆದುಕೊಳ್ಳುವ ಜನರು ಅಲ್ಲಿಯೇ ರಸ್ತೆ ಬದಿ ಕುಳಿತು ಕುಡಿಯುತ್ತಾರೆ. ಅದರ ಪಕ್ಕದ ಸೆಕ್ಟರ್ನಲ್ಲಿರುವ ನಿವಾಸಿಗಳಿಗೆ, ಬೇರೆ ಸೆಕ್ಟರ್ಗಳಿಗೆ ಹೋಗುವವರು ಮುಜುಗುರದಿಂದ ಸಂಚರಿಸಬೇಕಾದ ಸ್ಥಿತಿ ಇದೆ.</p>.<p>ನಿವೇಶನ ತೆಗೆದುಕೊಂಡ ಎರಡು ವರ್ಷಗಳಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ನಿವೇಶನ ನೀಡಲಾಗಿರುತ್ತದೆ. ಆದರೆ, ಹತ್ತಾರು ವರ್ಷಗಳಾದರೂ ಕಟ್ಟಡಗಳ ನಿರ್ಮಾಣವಾಗಿಲ್ಲ. ಇದನ್ನು ಕೇಳಬೇಕಾದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವೂ ಮೌನವಾಗಿದೆ.</p>.<p>ಕಟ್ಟಡಗಳನ್ನು ನಿರ್ಮಿಸಿಕೊಳ್ಳದಿದ್ದರೂ ಪರವಾಗಿಲ್ಲ. ನಿವೇಶನಗಳನ್ನು ಸ್ವಚ್ಛವಾಗಿಯಾದರೂ ಇಟ್ಟುಕೊಳ್ಳಬೇಕು. ಹತ್ತಾರು ವರ್ಷಗಳಿಂದ ತಿರುಗಿ ನೋಡದ್ದರಿಂದ ಜಾಲಿ ಗಿಡಗಳು ಬೆಳೆದು ಸಂಚಾರಕ್ಕೂ ತೊಂದರೆಯಾಗುತ್ತಿದೆ.</p>.<p>‘ನಿವೇಶನಗಳ ಸ್ವಚ್ಛತೆಗೆ ಬಿಟಿಡಿಎ ಕ್ರಮಕೈಗೊಳ್ಳಬೇಕು. ಜನರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅದನ್ನು ಕೂಡಲೇ ಬಗೆಹರಿಸಬೇಕು’ ಎಂದು ನಿವಾಸಿ ಮಲ್ಲಿಕಾರ್ಜುನ ಗೌಡರ ಒತ್ತಾಯಿಸಿದರು.</p>.<div><blockquote>ಹಣಕಾಸಿನ ಕೊರತೆ ಇರುವುದರಿಂದ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು</blockquote><span class="attribution"> ಚಂದ್ರಹಾಸ ಬಂಡಿ ಸಿಇ ಬಿಟಿಡಿಎ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>