<p><strong>ಬಾದಾಮಿ:</strong> ಬನಶಂಕರಿದೇವಿ ಜಾತ್ರೆಗೆ ಯಾತ್ರಿಕರು ಆಗಮಿಸುತ್ತಿದ್ದಂತೆ ಬಾದಾಮಿ ರಸ್ತೆಯ ಎಡ-ಬಲಕ್ಕೆ ವೈವಿಧ್ಯಮಯ ಕಲಾತ್ಮಕ ಬಾಗಿಲು ಚೌಕಟ್ಟುಗಳು ಸ್ವಾಗತಿಸುತ್ತಿವೆ.</p>.<p>ಹೊಳೆ ಆಲೂರಿನಲ್ಲಿ ಬಾಗಿಲು ಚೌಕಟ್ಟುಗಳನ್ನು ಮೊದಲು ಬಡಿಗೇರ ಜನಾಂಗದವರು ರೂಪಿಸುತ್ತಿದ್ದರು. ಈಗ ಎಲ್ಲ ಸಮುದಾಯದ ಜನರು ಬಾಗಿಲು ಚೌಕಟ್ಟುಗಳನ್ನು ನಿರ್ಮಿಸುವ ಕಲೆ ರೂಢಿಸಿಕೊಂಡಿದ್ದಾರೆ.</p>.<p>ವಿಶೇಷವಾಗಿ ಸಾಗವಾನಿ, ಮೈಸೂರು ಸಾಗವಾನಿ ಮತ್ತು ಬೇವಿನ ಕಟ್ಟಿಗೆಯಲ್ಲಿ ಆರರಿಂದ ಎಂಟು ಅಡಿ ಎತ್ತರ, ಮೂರುವರೆ ಅಡಿ ಅಗಲದ ಬಾಗಿಲು ಚೌಕಟ್ಟುಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಸಿದ್ಧವಾಗಿವೆ.</p>.<p>ಸಾಗವಾನಿ ಬಾಗಿಲು ₹ 30 ಸಾವಿರದಿಂದ ₹40 ಸಾವಿರ, ಮೈಸೂರು ಸಾಗವಾನಿ ₹14ಸಾವಿರದಿಂದ ₹30 ಸಾವಿರ ಮತ್ತು ಬೇವಿನ ಬಾಗಿಲು ₹1500 ದಿಂದ 5 ಸಾವಿರದವರೆಗೆ ಮಾರಾಟವಾಗುತ್ತಿವೆ.</p>.<p>ಬಾಗಿಲು ಚೌಕಟ್ಟಿನಲ್ಲಿ ಆಯಾ ಧರ್ಮದ ದೇವರುಗಳು, ಶರಣರು ,ದಾಸರು, ಸಂತರು, ಪ್ರಾಣಿ-ಪಕ್ಷಿಗಳು, ಪ್ರಕೃತಿ ಸೌಂದರ್ಯ, ಗಿಡ, ಮರ ಬಳ್ಳಿಗಳನ್ನು ಕಾಷ್ಟದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಯಲ್ಲಿ ಕಲಾವಿದರು ಸುಂದರವಾಗಿ ಅರಳಿಸಿದ್ದಾರೆ.</p>.<p>‘ಮೊದಲು ಗ್ರಾಮೀಣ ಪ್ರದೇಶದ ಶ್ರೀಮಂತರು ಮತ್ತು ಗೌಡರು ದೊಡ್ಡ ದೊಡ್ಡ ಬಾಗಿಲುಗಳನ್ನು ಕೊಂಡೊಯ್ಯುತ್ತಿದ್ದರು. ಈಗ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆ ಬಳಸುವುದರಿಂದ ನಗರ ಪ್ರದೇಶದ ಜನರೂ ಬಾಗಿಲು ಚೌಕಟ್ಟುಗಳನ್ನು ಖರೀದಿಸುತ್ತಿದ್ದಾರೆ’ ಎಂದು ಕಲಾವಿದ ಶಹಾಬುದ್ದೀನ (ಯಾಶೀನ) ಕೊತಬಾಳ ಪ್ರತಿಕ್ರಿಯಿಸಿದರು.</p>.<p>‘ಒಂದೊಂದು ಅಂಗಡಿಯಲ್ಲಿ 40 ರಿಂದ 60 ಬಾಗಿಲುಗಳನ್ನು ಮಾರಾಟಕ್ಕೆ ತಂದಿರುತ್ತಾರೆ. ಜಾತ್ರೆಯಲ್ಲಿ ಪ್ರತಿಯೊಂದು ಅಂಗಡಿಯಲ್ಲಿ 40 ರಿಂದ 50 ಬಾಗಿಲುಗಳ ಮಾರಾಟವಾಗುತ್ತವೆ ಎನ್ನುತ್ತಾರೆ’ ಕಲಾವಿದರು.</p>.<p>‘ಜಾತ್ರೆಗೆ ಬಂದಾಗ ಹೊಸ ಮನೆಗೆ ಮುಂಬಾಗಿಲನ್ನು ನೋಡಿಕೊಂಡು ಹೋಗುತ್ತೇವೆ, ಜಾತ್ರೆಯ ಗದ್ದಲ ಕಡಿಮೆಯಾದ ನಂತರ ತೆಗೆದುಕೊಂಡು ಹೋಗುತ್ತೇವೆ’ ಎಂದು ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಶಂಕರಗೌಡ ತಿಳಿಸಿದರು.</p>.<p>ಅಂದಪ್ಪ ಕೊರಗನ್ನವರ, ಎಚ್ಚರಪ್ಪ ಸೋಮಾಪೂರ, ಸುಲೇಮಾನ ಕೊತಬಾಳ, ವಿರೂಪಾಕ್ಷ ಮಚ್ಚೆನ್ನವರ, ಹನುಮಂತ ಸಂಗಟಿ, ಬಾಷೆಸಾಬ್ ಕೊತಬಾಳ, ಮಲ್ಲಪ್ಪ ಹಡಪದ ಮೊದಲಾದ ನೂರಾರು ಕಲಾವಿದರು ಇಡೀ ವರ್ಷ ಹೊಳೆ ಆಲೂರಿನಲ್ಲಿ ಬಾಗಿಲು ಚೌಕಟ್ಟುಗಳನ್ನು ತಯಾರಿಸುತ್ತಾರೆ.</p>.<div><blockquote>ಜಾತಿ ಧರ್ಮಗಳ ಕಟ್ಟಳೆಗಳನ್ನು ಮೀರಿದ ಬಾಗಿಲು ಚೌಕಟ್ಟನ್ನು ವೈವಿಧ್ಯಮಯ ಕಲೆಯಿಂದ ಕಲಾವಿದರು ಆಕರ್ಷವಾಗಿ ತಯಾರಿಸಿದ್ದಾರೆ</blockquote><span class="attribution"> ದಾಜೀಬಾ ಜಗದಾಳೆ ಕಲಾವಿದ ಸಾಹಿತಿ ಬಾದಾಮಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಬನಶಂಕರಿದೇವಿ ಜಾತ್ರೆಗೆ ಯಾತ್ರಿಕರು ಆಗಮಿಸುತ್ತಿದ್ದಂತೆ ಬಾದಾಮಿ ರಸ್ತೆಯ ಎಡ-ಬಲಕ್ಕೆ ವೈವಿಧ್ಯಮಯ ಕಲಾತ್ಮಕ ಬಾಗಿಲು ಚೌಕಟ್ಟುಗಳು ಸ್ವಾಗತಿಸುತ್ತಿವೆ.</p>.<p>ಹೊಳೆ ಆಲೂರಿನಲ್ಲಿ ಬಾಗಿಲು ಚೌಕಟ್ಟುಗಳನ್ನು ಮೊದಲು ಬಡಿಗೇರ ಜನಾಂಗದವರು ರೂಪಿಸುತ್ತಿದ್ದರು. ಈಗ ಎಲ್ಲ ಸಮುದಾಯದ ಜನರು ಬಾಗಿಲು ಚೌಕಟ್ಟುಗಳನ್ನು ನಿರ್ಮಿಸುವ ಕಲೆ ರೂಢಿಸಿಕೊಂಡಿದ್ದಾರೆ.</p>.<p>ವಿಶೇಷವಾಗಿ ಸಾಗವಾನಿ, ಮೈಸೂರು ಸಾಗವಾನಿ ಮತ್ತು ಬೇವಿನ ಕಟ್ಟಿಗೆಯಲ್ಲಿ ಆರರಿಂದ ಎಂಟು ಅಡಿ ಎತ್ತರ, ಮೂರುವರೆ ಅಡಿ ಅಗಲದ ಬಾಗಿಲು ಚೌಕಟ್ಟುಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಸಿದ್ಧವಾಗಿವೆ.</p>.<p>ಸಾಗವಾನಿ ಬಾಗಿಲು ₹ 30 ಸಾವಿರದಿಂದ ₹40 ಸಾವಿರ, ಮೈಸೂರು ಸಾಗವಾನಿ ₹14ಸಾವಿರದಿಂದ ₹30 ಸಾವಿರ ಮತ್ತು ಬೇವಿನ ಬಾಗಿಲು ₹1500 ದಿಂದ 5 ಸಾವಿರದವರೆಗೆ ಮಾರಾಟವಾಗುತ್ತಿವೆ.</p>.<p>ಬಾಗಿಲು ಚೌಕಟ್ಟಿನಲ್ಲಿ ಆಯಾ ಧರ್ಮದ ದೇವರುಗಳು, ಶರಣರು ,ದಾಸರು, ಸಂತರು, ಪ್ರಾಣಿ-ಪಕ್ಷಿಗಳು, ಪ್ರಕೃತಿ ಸೌಂದರ್ಯ, ಗಿಡ, ಮರ ಬಳ್ಳಿಗಳನ್ನು ಕಾಷ್ಟದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಯಲ್ಲಿ ಕಲಾವಿದರು ಸುಂದರವಾಗಿ ಅರಳಿಸಿದ್ದಾರೆ.</p>.<p>‘ಮೊದಲು ಗ್ರಾಮೀಣ ಪ್ರದೇಶದ ಶ್ರೀಮಂತರು ಮತ್ತು ಗೌಡರು ದೊಡ್ಡ ದೊಡ್ಡ ಬಾಗಿಲುಗಳನ್ನು ಕೊಂಡೊಯ್ಯುತ್ತಿದ್ದರು. ಈಗ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆ ಬಳಸುವುದರಿಂದ ನಗರ ಪ್ರದೇಶದ ಜನರೂ ಬಾಗಿಲು ಚೌಕಟ್ಟುಗಳನ್ನು ಖರೀದಿಸುತ್ತಿದ್ದಾರೆ’ ಎಂದು ಕಲಾವಿದ ಶಹಾಬುದ್ದೀನ (ಯಾಶೀನ) ಕೊತಬಾಳ ಪ್ರತಿಕ್ರಿಯಿಸಿದರು.</p>.<p>‘ಒಂದೊಂದು ಅಂಗಡಿಯಲ್ಲಿ 40 ರಿಂದ 60 ಬಾಗಿಲುಗಳನ್ನು ಮಾರಾಟಕ್ಕೆ ತಂದಿರುತ್ತಾರೆ. ಜಾತ್ರೆಯಲ್ಲಿ ಪ್ರತಿಯೊಂದು ಅಂಗಡಿಯಲ್ಲಿ 40 ರಿಂದ 50 ಬಾಗಿಲುಗಳ ಮಾರಾಟವಾಗುತ್ತವೆ ಎನ್ನುತ್ತಾರೆ’ ಕಲಾವಿದರು.</p>.<p>‘ಜಾತ್ರೆಗೆ ಬಂದಾಗ ಹೊಸ ಮನೆಗೆ ಮುಂಬಾಗಿಲನ್ನು ನೋಡಿಕೊಂಡು ಹೋಗುತ್ತೇವೆ, ಜಾತ್ರೆಯ ಗದ್ದಲ ಕಡಿಮೆಯಾದ ನಂತರ ತೆಗೆದುಕೊಂಡು ಹೋಗುತ್ತೇವೆ’ ಎಂದು ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಶಂಕರಗೌಡ ತಿಳಿಸಿದರು.</p>.<p>ಅಂದಪ್ಪ ಕೊರಗನ್ನವರ, ಎಚ್ಚರಪ್ಪ ಸೋಮಾಪೂರ, ಸುಲೇಮಾನ ಕೊತಬಾಳ, ವಿರೂಪಾಕ್ಷ ಮಚ್ಚೆನ್ನವರ, ಹನುಮಂತ ಸಂಗಟಿ, ಬಾಷೆಸಾಬ್ ಕೊತಬಾಳ, ಮಲ್ಲಪ್ಪ ಹಡಪದ ಮೊದಲಾದ ನೂರಾರು ಕಲಾವಿದರು ಇಡೀ ವರ್ಷ ಹೊಳೆ ಆಲೂರಿನಲ್ಲಿ ಬಾಗಿಲು ಚೌಕಟ್ಟುಗಳನ್ನು ತಯಾರಿಸುತ್ತಾರೆ.</p>.<div><blockquote>ಜಾತಿ ಧರ್ಮಗಳ ಕಟ್ಟಳೆಗಳನ್ನು ಮೀರಿದ ಬಾಗಿಲು ಚೌಕಟ್ಟನ್ನು ವೈವಿಧ್ಯಮಯ ಕಲೆಯಿಂದ ಕಲಾವಿದರು ಆಕರ್ಷವಾಗಿ ತಯಾರಿಸಿದ್ದಾರೆ</blockquote><span class="attribution"> ದಾಜೀಬಾ ಜಗದಾಳೆ ಕಲಾವಿದ ಸಾಹಿತಿ ಬಾದಾಮಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>