<p><strong>ಪಟ್ಟದಕಲ್ಲು (ಬಾದಾಮಿ):</strong> ವಿಶ್ವ ಪರಂಪರೆಯ ತಾಣ ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲಾದ ಪಟ್ಟದಕಲ್ಲಿನ ಸ್ಮಾರಕಗಳಲ್ಲಿ ಶಾಲಾ ಕಾಲೇಜುಗಳ ಮಕ್ಕಳ ಕಲರವದೊಂದಿಗೆ ಪ್ರವಾಸಿಗರ ದಂಡು ಆಗಮಿಸಿತ್ತು.</p>.<p>ಚಾಲುಕ್ಯರ ಐತಿಹಾಸಿಕ ಪರಂಪರೆಯ ಸ್ಮಾರಕಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರಗಳಾದ ಬನಶಂಕರಿ, ಶಿವಯೋಗಮಂದಿರಕ್ಕೆ ಭಾನುವಾರ ಸಾಗರೋಪಾದಿಯಂತೆ ಪ್ರವಾಸಿಗರು ಭೇಟಿ ನೀಡಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಪಟ್ಟದಕಲ್ಲಿನ ಸ್ಮಾರಕಗಳ ಫೋಟೊಗಳನ್ನು ಸೆಲ್ಫಿ ಪಡೆಯುತ್ತಿದ್ದರು.</p>.<p>ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳಲ್ಲಿ ಶಾಲಾ ಕಾಲೇಜಿನ ಮಕ್ಕಳು ಆಗಮಿಸಿದ್ದರು. ಕುಟುಂಬ ಸಮೇತರಾಗಿ ಮತ್ತು ಸ್ನೇಹಿತರೊಂದಿಗೆ ಕಾರಿನಲ್ಲಿ ಆಗಮಿಸಿದ್ದರು. ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ ಎಂದು ಚಾಲಕರು ಹೇಳಿದರು.</p>.<p>‘ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸ್ಮಾರಕಗಳನ್ನು ನೋಡಿದೆ. ಚಾಲುಕ್ಯರ ಶಿಲ್ಪಿಗಳು ತುಂಬಾ ಅದ್ಭುತವಾಗಿ ಕಲ್ಲಿನಲ್ಲಿ ಪಾರಂಪಾರಿಕ ಮೂರ್ತಿಶಿಲ್ಪಗಳನ್ನು ಕೆತ್ತಿದ್ದಾರೆ. ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಲ ಸೌಲಭ್ಯವನ್ನು ಕಲ್ಪಿಸಬೇಕಿದೆ ’ ಎಂದು ಮಹಾರಾಷ್ಟ್ರದ ಪುಣೆ ಪ್ರವಾಸಿ ಶ್ರೀಕಾಂತ ಪ್ರತಿಕ್ರಿಯಿಸಿದರು.</p>.<p>ಶನಿವಾರ (ಡಿ.27) ಒಂದೇ ದಿನ ಬಾದಾಮಿ ಸ್ಮಾರಕಗಳ ವೀಕ್ಷಣೆಯಿಂದ ಪ್ರವಾಸಿಗರಿಂದ ₹1.55 ಲಕ್ಷ, ಪಟ್ಟದಕಲ್ಲಿನಲ್ಲಿ ₹ 2.10 ಲಕ್ಷ ಆದಾಯ ಬಂದಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ತಿಳಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ಟದಕಲ್ಲು (ಬಾದಾಮಿ):</strong> ವಿಶ್ವ ಪರಂಪರೆಯ ತಾಣ ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲಾದ ಪಟ್ಟದಕಲ್ಲಿನ ಸ್ಮಾರಕಗಳಲ್ಲಿ ಶಾಲಾ ಕಾಲೇಜುಗಳ ಮಕ್ಕಳ ಕಲರವದೊಂದಿಗೆ ಪ್ರವಾಸಿಗರ ದಂಡು ಆಗಮಿಸಿತ್ತು.</p>.<p>ಚಾಲುಕ್ಯರ ಐತಿಹಾಸಿಕ ಪರಂಪರೆಯ ಸ್ಮಾರಕಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರಗಳಾದ ಬನಶಂಕರಿ, ಶಿವಯೋಗಮಂದಿರಕ್ಕೆ ಭಾನುವಾರ ಸಾಗರೋಪಾದಿಯಂತೆ ಪ್ರವಾಸಿಗರು ಭೇಟಿ ನೀಡಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ ಮಕ್ಕಳು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಪಟ್ಟದಕಲ್ಲಿನ ಸ್ಮಾರಕಗಳ ಫೋಟೊಗಳನ್ನು ಸೆಲ್ಫಿ ಪಡೆಯುತ್ತಿದ್ದರು.</p>.<p>ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳಲ್ಲಿ ಶಾಲಾ ಕಾಲೇಜಿನ ಮಕ್ಕಳು ಆಗಮಿಸಿದ್ದರು. ಕುಟುಂಬ ಸಮೇತರಾಗಿ ಮತ್ತು ಸ್ನೇಹಿತರೊಂದಿಗೆ ಕಾರಿನಲ್ಲಿ ಆಗಮಿಸಿದ್ದರು. ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ ಎಂದು ಚಾಲಕರು ಹೇಳಿದರು.</p>.<p>‘ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸ್ಮಾರಕಗಳನ್ನು ನೋಡಿದೆ. ಚಾಲುಕ್ಯರ ಶಿಲ್ಪಿಗಳು ತುಂಬಾ ಅದ್ಭುತವಾಗಿ ಕಲ್ಲಿನಲ್ಲಿ ಪಾರಂಪಾರಿಕ ಮೂರ್ತಿಶಿಲ್ಪಗಳನ್ನು ಕೆತ್ತಿದ್ದಾರೆ. ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಲ ಸೌಲಭ್ಯವನ್ನು ಕಲ್ಪಿಸಬೇಕಿದೆ ’ ಎಂದು ಮಹಾರಾಷ್ಟ್ರದ ಪುಣೆ ಪ್ರವಾಸಿ ಶ್ರೀಕಾಂತ ಪ್ರತಿಕ್ರಿಯಿಸಿದರು.</p>.<p>ಶನಿವಾರ (ಡಿ.27) ಒಂದೇ ದಿನ ಬಾದಾಮಿ ಸ್ಮಾರಕಗಳ ವೀಕ್ಷಣೆಯಿಂದ ಪ್ರವಾಸಿಗರಿಂದ ₹1.55 ಲಕ್ಷ, ಪಟ್ಟದಕಲ್ಲಿನಲ್ಲಿ ₹ 2.10 ಲಕ್ಷ ಆದಾಯ ಬಂದಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ತಿಳಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>