ಕೆಂದೂರು ತಾಂಡಾ ನಿವಾಸಿಗಳು ಯುಗಾದಿ ಹಬ್ಬದ ದಿನವಾದ ಬುಧವಾರ ಬೇಲಿ ಹಾಕಿದರೆ, ಹೊನ್ನಾಕಟ್ಟಿ ಗ್ರಾಮಸ್ಥರು ಗುರುವಾರ ಹಾಕಿದ್ದಾರೆ. ಏಪ್ರಿಲ್ 14ರವರೆಗೆ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ತಮ್ಮೂರಿಗೆ ಹೊರಗಿನವರು ಯಾರೂ ಬರಬಾರದು. ಊರಿನವರು ಯಾರೂ ಹೊರಗೆ ಹೋಗಬಾರದು ಎಂಬುದು ಊರವರ ಆಶಯ.