ಶಿದರಾಯನ ಮೊದಲ ಪತ್ನಿಯ ಮಕ್ಕಳಾದ ಗುರುಪಾದ, ಬಸಗೊಂಡ, ಸೊಸೆಯಂದಿರಾದ ಗೀತಾ, ರಾಜಶ್ರೀ ಮತ್ತು ಬೀಗರು ಮನೆಯ ನಾಲ್ವರು ಸೇರಿ ಕೊಡಲಿ, ಗುದ್ದಲಿಯಿಂದ ಹೊಡೆದು ಸಾಯಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಪ್ರತ್ಯಕ್ಷದರ್ಶಿಗಳಾದ ಕಲಾವತಿ ಪುತ್ರ ಪ್ರವೀಣ ಹಾಗೂ ಅಮ್ಮ ಲಕ್ಷ್ಮಿಬಾಯಿ ಹೇಳಿಕೆ ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.