<p>ಕೆರೂರ: ಕೊಲೆ ಮಾಡಿದ ಅಪರಾಧಿಗೆ ಬಾಗಲಕೋಟೆ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡಿ ವಿಧಿಸಿ ಗುರುವಾರ ತೀರ್ಪು ನೀಡಿದೆ.</p>.<p>ಸಮೀಪದ ಹಂಗರಗಿ ಗ್ರಾಮದ ಹೊಳಿಯಪ್ಪ ಗಾಣಿಗೇರ ಕೊಲೆಯಾದ ವ್ಯಕ್ತಿ. ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಹನಮಂತ ಗಾಣಿಗೇರ ಇಬ್ಬರು ಕೊಲೆ ಮಾಡಿದ ಅಪರಾಧಿಗಳು.</p>.<p>ಘಟನೆಯ ವಿವರ: ಮೃತ ಹೊಳಿಯಪ್ಪ ಗಾಣಿಗೇರ ಅಪರಾಧಿ ಮಲ್ಲಿಕಾರ್ಜುನ ಗಾಣಿಗೇರ ಮಗಳ ಜೊತೆಗೆ ಸಲುಗೆಯಿಂದ ಮಾತನಾಡುವುದು ಮತ್ತು ಹುಡುಗಾಟ ಮಾಡುವುದು ಮಾಡುತ್ತಿದ್ದರಿಂದ ಮಲ್ಲಿಕಾರ್ಜುನ ಸಿಟ್ಟಾಗಿ ಕೊಲೆ ಮಾಡಬೇಕೆಂದು ನಿರ್ಧರಿಸಿದ್ದನು.</p>.<p>2020ರಲ್ಲಿ ಹೊಸ ವರ್ಷಾಚರಣೆ ಮಾಡುವ ನೆಪದಲ್ಲಿ ಮಲ್ಲಿಕಾರ್ಜುನ ತನ್ನ ಸಹಚರ ಹನಮಂತ ಗಾಣಿಗೇರನೊಂದಿಗೆ ಮೃತ ಹೊಳಿಯಪ್ಪನನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದನು. ಪಾರ್ಟಿ ಮಾಡಿ, ಮಧ್ಯರಾತ್ರಿ ಹೊಳಿಯಪ್ಪನ ತಲೆಗೆ ಸ್ಪ್ರಿಂಕ್ಲರ್ ಗಡ್ಡಿಯಿಂದ ಹೊಡೆದು, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿತ್ತು.</p>.<p>ಜೀವಾವಧಿ ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ ತಲಾ ₹5 ಸಾವಿರ, ದೂರುದಾರರಾದ ಮೃತರ ಪತ್ನಿಗೆ ₹3 ಲಕ್ಷ ಪರಿಹಾರ ನೀಡಲು ನ್ಯಾಯಾಧೀಶ ಎನ್.ವಿ. ವಿಜಯ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆರೂರ: ಕೊಲೆ ಮಾಡಿದ ಅಪರಾಧಿಗೆ ಬಾಗಲಕೋಟೆ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡಿ ವಿಧಿಸಿ ಗುರುವಾರ ತೀರ್ಪು ನೀಡಿದೆ.</p>.<p>ಸಮೀಪದ ಹಂಗರಗಿ ಗ್ರಾಮದ ಹೊಳಿಯಪ್ಪ ಗಾಣಿಗೇರ ಕೊಲೆಯಾದ ವ್ಯಕ್ತಿ. ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಹನಮಂತ ಗಾಣಿಗೇರ ಇಬ್ಬರು ಕೊಲೆ ಮಾಡಿದ ಅಪರಾಧಿಗಳು.</p>.<p>ಘಟನೆಯ ವಿವರ: ಮೃತ ಹೊಳಿಯಪ್ಪ ಗಾಣಿಗೇರ ಅಪರಾಧಿ ಮಲ್ಲಿಕಾರ್ಜುನ ಗಾಣಿಗೇರ ಮಗಳ ಜೊತೆಗೆ ಸಲುಗೆಯಿಂದ ಮಾತನಾಡುವುದು ಮತ್ತು ಹುಡುಗಾಟ ಮಾಡುವುದು ಮಾಡುತ್ತಿದ್ದರಿಂದ ಮಲ್ಲಿಕಾರ್ಜುನ ಸಿಟ್ಟಾಗಿ ಕೊಲೆ ಮಾಡಬೇಕೆಂದು ನಿರ್ಧರಿಸಿದ್ದನು.</p>.<p>2020ರಲ್ಲಿ ಹೊಸ ವರ್ಷಾಚರಣೆ ಮಾಡುವ ನೆಪದಲ್ಲಿ ಮಲ್ಲಿಕಾರ್ಜುನ ತನ್ನ ಸಹಚರ ಹನಮಂತ ಗಾಣಿಗೇರನೊಂದಿಗೆ ಮೃತ ಹೊಳಿಯಪ್ಪನನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದನು. ಪಾರ್ಟಿ ಮಾಡಿ, ಮಧ್ಯರಾತ್ರಿ ಹೊಳಿಯಪ್ಪನ ತಲೆಗೆ ಸ್ಪ್ರಿಂಕ್ಲರ್ ಗಡ್ಡಿಯಿಂದ ಹೊಡೆದು, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿತ್ತು.</p>.<p>ಜೀವಾವಧಿ ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ ತಲಾ ₹5 ಸಾವಿರ, ದೂರುದಾರರಾದ ಮೃತರ ಪತ್ನಿಗೆ ₹3 ಲಕ್ಷ ಪರಿಹಾರ ನೀಡಲು ನ್ಯಾಯಾಧೀಶ ಎನ್.ವಿ. ವಿಜಯ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>