<p><strong>ತೇರದಾಳ:</strong> ದೇಶವಾಸಿಗಳ ತಲಾ ಆದಾಯ ಹೆಚ್ಚಾದಂತೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾಮಾನ್ಯ ಜ್ಞಾನವಾದರೂ ಹೊಂದಿರಬೇಕು’ ಎಂದು ತೇರದಾಳದ ಎಸ್ಡಿಎಂ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಎಸ್. ದಾನಿಗೊಂಡ ಹೇಳಿದರು.</p>.<p>ಎಸ್ಡಿಎಂ ಸಂಸ್ಥೆಯ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾರ್ಟರ್ಡ್ ಅಕೌಂಟಂಟ್, ಕಾರ್ಯದರ್ಶಿ ಪದವಿಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವಾಣಿಜ್ಯ ವಿಭಾಗದಲ್ಲಿ ಪಿಯು ಓದುವಾಗಲೇ ಲೆಕ್ಕ ಪರಿಶೋಧನೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ವೃತ್ತಿಗೆ ಇಂದು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಬೇಡಿಕೆಯಿದೆ. ವಾಣಿಜ್ಯ ಪದವಿ ಬಳಿಕ ವಿಪುಲ ಉದ್ಯೋಗಾವಕಾಶಗಳಿವೆ. ನಮ್ಮ ಭಾಗದಲ್ಲೂ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಈ ವೃತ್ತಿಗೆ ಬೇಕಾದ ಅರ್ಹತೆ, ಮಹತ್ವ ಮತ್ತು ಸಾಧನೆಗೆ ಬೇಕಾದ ನೈಪುಣ್ಯದ ಬಗ್ಗೆ ತಜ್ಞರು ತಿಳಿವಳಿಕೆ ಮತ್ತು ಮಾರ್ಗದರ್ಶನ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಲಿ’ ಎಂದರು.</p>.<p>ಧಾರವಾಡದ ಲೆಕ್ಕಪರಿಶೋಧಕರಾದ ವಿಠ್ಠಲ ಗುತ್ತಿ ಮಾತನಾಡಿ, ‘ಲೆಕ್ಕಪರಿಶೋಧಕನ ಸಹಿಗೆ ಇದ್ದ ಬೆಲೆ ಒಬ್ಬ ರಾಷ್ಟ್ರಪತಿ ಸಹಿಗಿಂತ ಹೆಚ್ಚು ಎಂಬ ದೇಶದ ಪ್ರಧಾನಮಂತ್ರಿಯವರ ಮಾತಿನಲ್ಲೇ ಈ ಕೆಲಸದ ಮಹತ್ವ ಹೇಳಿದಂತಾಗಿದೆ. ದೇಶ ಆರ್ಥಿಕತೆಯಲ್ಲಿ ಪ್ರಗತಿ ಹೊಂದಬೇಕಾದರೆ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೆಕ್ಕಪರಿಶೋಧಕರು ಮೂಡಿ ಬರಬೇಕಿದೆ’ ಎಂದು ಹೇಳಿದರು.</p>.<p>ವಾಣಿಜ್ಯ ವಿಭಾಗದಲ್ಲಿ ಇರುವಂತಹ ಉದ್ಯೋಗ ಅವಕಾಶಗಳ ಬಗ್ಗೆ ದೀಪಾ ತಳವಾರ ವಿವರಿಸಿದರು. ಕಾಲೇಜು ಪ್ರಾಚಾರ್ಯ ಸಂತೋಷ ಕೃಷ್ಣಾಪುರ ಇದ್ದರು. ವಿಠ್ಠಲ ಮುರಾರಿ, ಬಿ.ಎಸ್. ನೇಗಿನಾಳ, ಅಮೋಘ ಕಂಕಣವಾಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ:</strong> ದೇಶವಾಸಿಗಳ ತಲಾ ಆದಾಯ ಹೆಚ್ಚಾದಂತೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾಮಾನ್ಯ ಜ್ಞಾನವಾದರೂ ಹೊಂದಿರಬೇಕು’ ಎಂದು ತೇರದಾಳದ ಎಸ್ಡಿಎಂ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಎಸ್. ದಾನಿಗೊಂಡ ಹೇಳಿದರು.</p>.<p>ಎಸ್ಡಿಎಂ ಸಂಸ್ಥೆಯ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾರ್ಟರ್ಡ್ ಅಕೌಂಟಂಟ್, ಕಾರ್ಯದರ್ಶಿ ಪದವಿಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವಾಣಿಜ್ಯ ವಿಭಾಗದಲ್ಲಿ ಪಿಯು ಓದುವಾಗಲೇ ಲೆಕ್ಕ ಪರಿಶೋಧನೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ವೃತ್ತಿಗೆ ಇಂದು ಜಾಗತಿಕ ಮಟ್ಟದಲ್ಲಿ ಒಳ್ಳೆಯ ಬೇಡಿಕೆಯಿದೆ. ವಾಣಿಜ್ಯ ಪದವಿ ಬಳಿಕ ವಿಪುಲ ಉದ್ಯೋಗಾವಕಾಶಗಳಿವೆ. ನಮ್ಮ ಭಾಗದಲ್ಲೂ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಈ ವೃತ್ತಿಗೆ ಬೇಕಾದ ಅರ್ಹತೆ, ಮಹತ್ವ ಮತ್ತು ಸಾಧನೆಗೆ ಬೇಕಾದ ನೈಪುಣ್ಯದ ಬಗ್ಗೆ ತಜ್ಞರು ತಿಳಿವಳಿಕೆ ಮತ್ತು ಮಾರ್ಗದರ್ಶನ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಲಿ’ ಎಂದರು.</p>.<p>ಧಾರವಾಡದ ಲೆಕ್ಕಪರಿಶೋಧಕರಾದ ವಿಠ್ಠಲ ಗುತ್ತಿ ಮಾತನಾಡಿ, ‘ಲೆಕ್ಕಪರಿಶೋಧಕನ ಸಹಿಗೆ ಇದ್ದ ಬೆಲೆ ಒಬ್ಬ ರಾಷ್ಟ್ರಪತಿ ಸಹಿಗಿಂತ ಹೆಚ್ಚು ಎಂಬ ದೇಶದ ಪ್ರಧಾನಮಂತ್ರಿಯವರ ಮಾತಿನಲ್ಲೇ ಈ ಕೆಲಸದ ಮಹತ್ವ ಹೇಳಿದಂತಾಗಿದೆ. ದೇಶ ಆರ್ಥಿಕತೆಯಲ್ಲಿ ಪ್ರಗತಿ ಹೊಂದಬೇಕಾದರೆ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೆಕ್ಕಪರಿಶೋಧಕರು ಮೂಡಿ ಬರಬೇಕಿದೆ’ ಎಂದು ಹೇಳಿದರು.</p>.<p>ವಾಣಿಜ್ಯ ವಿಭಾಗದಲ್ಲಿ ಇರುವಂತಹ ಉದ್ಯೋಗ ಅವಕಾಶಗಳ ಬಗ್ಗೆ ದೀಪಾ ತಳವಾರ ವಿವರಿಸಿದರು. ಕಾಲೇಜು ಪ್ರಾಚಾರ್ಯ ಸಂತೋಷ ಕೃಷ್ಣಾಪುರ ಇದ್ದರು. ವಿಠ್ಠಲ ಮುರಾರಿ, ಬಿ.ಎಸ್. ನೇಗಿನಾಳ, ಅಮೋಘ ಕಂಕಣವಾಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>