ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಬಮಂತ ಮಾವಿನಮರದ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೊಳಿಸಿವೆ. ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಹಿಂಪಡೆ
ಯದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮುತ್ತಣ್ಣ ದೇವರಮನಿ, ವಿ.ಆರ್. ಚವ್ಹಾಣ, ಚಂದ್ರಕಾಂತ ಶೇಖ್, ರಂಗಪ್ಪ ಉಪ್ಪಾರ, ಪುಂಡಪ್ಪ ಬೇವಿನಮಟ್ಟಿ, ಮಲ್ಲಯ್ಯ ಹಿರೇಮಠ, ಬಸವರಾಜ ಹಲಕುರ್ಕಿ, ಗುಂಡಪ್ಪ ಕೋಟಿ, ರಾಮಣ್ಣ ಪೂಜಾರ, ಶೇಖರ ರಾಠೋಡ, ಪರ್ವತಿ, ಕೋಟೆಕಲ್ಲ, ಹಾನಾಪೂರ, ಹುಲ್ಲಿಕೇರಿ, ತೋಗುಣಸಿ, ಆಸಂಗಿ-
ಕಟಗಿನಹಳ್ಳಿ, ಪಾದನಕಟ್ಟಿ, ಹಳದೂರ, ಅಲ್ಲೂರ ರೈತರು, ಕಾರ್ಮಿಕರು ಪಾಲ್ಗೊಂಡಿದ್ದರು.