<p><strong>ಇಳಕಲ್</strong>: ‘ಕೃಷಿಕರ ಹಾಗೂ ಕರಕುಶಲ ಕರ್ಮಿಗಳ ಕಾಯಕ ಸಂಸ್ಕೃತಿಯಿಂದ ಜಾನಪದ ಜನ್ಮ ತಾಳಿದ್ದು, ನಗರದ ಮಕ್ಕಳಿಗೆ ಜಾನಪದ ಕಲೆ, ಹಾಡು, ಜನಜೀವನ ತಿಳಿಯುವ ಅವಕಾಶಗಳೇ ಇಲ್ಲವಾಗಿದೆ’ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಹೇಳಿದರು.</p>.<p>ನಗರದ ಜೇಸಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಹಳ್ಳಿ ಸೊಗಡು’ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಜಾನಪದವು ಕೃಷಿ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಇವತ್ತು ಕೃಷಿಯಿಂದ ದೂರವಾಗಿರುವ ನಗರವಾಸಿಗಳಿಗೆ ಜಾನಪದ ಕಲೆಗಳು, ಕೃಷಿ ಉಪಕರಣಗಳು, ಬೆಳೆಗಳ ಮಾಹಿತಿ ಕೂಡಾ ಇಲ್ಲವಾಗಿದೆ. ವಿದ್ಯಾರ್ಥಿಗಳಿಗೆ ಹಳ್ಳಿಯ ಸೊಗಡನ್ನು ತಿಳಿಸುವ ಈ ಕಾರ್ಯಕ್ರಮ ಚೆನ್ನಾಗಿ ಆಯೋಜಿಸಲಾಗಿದೆ’ ಎಂದರು.</p>.<p>ಶಿರೂರಿನ ಬಸವಲಿಂಗ ಶ್ರೀಗಳು ಮಾತನಾಡಿ, ‘ಶಿಕ್ಷಕರು ಪ್ರತಿ ವರ್ಗದ ಮಕ್ಕಳಿಂದ ಒಂದೊಂದು ಕಾಯಕವನ್ನು ರೂಢಿ ಮಾಡಿಸಿ, ಪ್ರದರ್ಶನ ಮಾಡಿಸಿದ್ದು ಶ್ಲಾಘನೀಯವಾದುದು. ಇಲ್ಲಿ ನಡೆದ ಜಾನಪದ ಬದುಕಿನ ಪ್ರದರ್ಶನವು ಅನೇಕ ವಿದ್ಯಾರ್ಥಿಗಳಿಗೆ ಆನಂದದ ಕಲಿಕೆಗೆ ಕಾರಣವಾಗಿದೆ’ ಎಂದರು.</p>.<p>ಜೇಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಅಕ್ಕಿ, ಕಾರ್ಯದರ್ಶಿ ಅಶೋಕ ಶ್ಯಾವಿ, ಸದಸ್ಯರಾದ ಬಸವರಾಜ ಮಠದ, ಶಾಂತು ಸರಗಣಾಚಾರಿ, ಶ್ಯಾಮಸುಂದರ ಕರವಾ, ಸಂಗಣ್ಣ ಮುಳಗುಂದ, ರಾಜೇಂದ್ರ ಜುಂಜಾ, ಬಸವರಾಜ ಗೋಟುರ, ಶ್ರೀಕಾಂತ ಹೊಸಮನಿ, ಬಸವರಾಜ ನಾಲವಾಡದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಳಕಲ್</strong>: ‘ಕೃಷಿಕರ ಹಾಗೂ ಕರಕುಶಲ ಕರ್ಮಿಗಳ ಕಾಯಕ ಸಂಸ್ಕೃತಿಯಿಂದ ಜಾನಪದ ಜನ್ಮ ತಾಳಿದ್ದು, ನಗರದ ಮಕ್ಕಳಿಗೆ ಜಾನಪದ ಕಲೆ, ಹಾಡು, ಜನಜೀವನ ತಿಳಿಯುವ ಅವಕಾಶಗಳೇ ಇಲ್ಲವಾಗಿದೆ’ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಹೇಳಿದರು.</p>.<p>ನಗರದ ಜೇಸಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಹಳ್ಳಿ ಸೊಗಡು’ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಜಾನಪದವು ಕೃಷಿ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಇವತ್ತು ಕೃಷಿಯಿಂದ ದೂರವಾಗಿರುವ ನಗರವಾಸಿಗಳಿಗೆ ಜಾನಪದ ಕಲೆಗಳು, ಕೃಷಿ ಉಪಕರಣಗಳು, ಬೆಳೆಗಳ ಮಾಹಿತಿ ಕೂಡಾ ಇಲ್ಲವಾಗಿದೆ. ವಿದ್ಯಾರ್ಥಿಗಳಿಗೆ ಹಳ್ಳಿಯ ಸೊಗಡನ್ನು ತಿಳಿಸುವ ಈ ಕಾರ್ಯಕ್ರಮ ಚೆನ್ನಾಗಿ ಆಯೋಜಿಸಲಾಗಿದೆ’ ಎಂದರು.</p>.<p>ಶಿರೂರಿನ ಬಸವಲಿಂಗ ಶ್ರೀಗಳು ಮಾತನಾಡಿ, ‘ಶಿಕ್ಷಕರು ಪ್ರತಿ ವರ್ಗದ ಮಕ್ಕಳಿಂದ ಒಂದೊಂದು ಕಾಯಕವನ್ನು ರೂಢಿ ಮಾಡಿಸಿ, ಪ್ರದರ್ಶನ ಮಾಡಿಸಿದ್ದು ಶ್ಲಾಘನೀಯವಾದುದು. ಇಲ್ಲಿ ನಡೆದ ಜಾನಪದ ಬದುಕಿನ ಪ್ರದರ್ಶನವು ಅನೇಕ ವಿದ್ಯಾರ್ಥಿಗಳಿಗೆ ಆನಂದದ ಕಲಿಕೆಗೆ ಕಾರಣವಾಗಿದೆ’ ಎಂದರು.</p>.<p>ಜೇಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಅಕ್ಕಿ, ಕಾರ್ಯದರ್ಶಿ ಅಶೋಕ ಶ್ಯಾವಿ, ಸದಸ್ಯರಾದ ಬಸವರಾಜ ಮಠದ, ಶಾಂತು ಸರಗಣಾಚಾರಿ, ಶ್ಯಾಮಸುಂದರ ಕರವಾ, ಸಂಗಣ್ಣ ಮುಳಗುಂದ, ರಾಜೇಂದ್ರ ಜುಂಜಾ, ಬಸವರಾಜ ಗೋಟುರ, ಶ್ರೀಕಾಂತ ಹೊಸಮನಿ, ಬಸವರಾಜ ನಾಲವಾಡದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>