ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೂರಿನಲ್ಲಿ ಜಾನಪದ ಸಂಭ್ರಮ

Last Updated 2 ಸೆಪ್ಟೆಂಬರ್ 2022, 6:04 IST
ಅಕ್ಷರ ಗಾತ್ರ

ಕೆರೂರ (ಬಾಗಲಕೋಟೆ): ದೇಶದ ಗ್ರಾಮೀಣ ಸೊಗಡನ್ನು ಶ್ರಿಮಂತಗೊಳಿಸಿದ್ದು ಜಾನಪದ ಕಲೆ. ಅದು ದೇಶದ ಸಂಪತ್ತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೇಲ್ಲಿಕೆರಿ ಹೇಳಿದರು.

ಕೆರೂರಿನ ದೇವಾಂಗ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯ ಚಟುವಟಿಕೆಗಳ ಉಧ್ಘಾಟನೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.

ದೇಶದ ಗ್ರಾಮೀಣ ಸೊಗಡಿನಲ್ಲಿ ಜಾನಪದ ಕಲೆ ತನ್ನದೆಯಾದ ಶಕ್ತಿಯೊಂದಿಗೆ ಸಾಂಸ್ಕೃತಿಕ ವಲಯದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದೆ. ಜಾನಪದ ಕಲೆ ಉಳಿದು, ಬೆಳೆಯಬೇಕಾಗಿದೆ. ಯುವ ಜನಾಂಗವನ್ನು ಸಾಹಿತ್ಯ, ಕಲೆಗಳತ್ತ ಸೆಳೆಯಬೇಕಿದೆ ಎಂದರು.

ಜಾನಪದ ಪರಿಷತ್ತಿನ ಬಾದಾಮಿ ತಾಲ್ಲೂಕು ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು.

ಕೆರೂರಿನ ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಸಿ.ಎಸ್‌. ಬಾಳಕ್ಕವರ. ಕೋಶಾಧ್ಯಕ್ಷ ಆರ್.ಸಿ. ಚಿತ್ತವಾಡಗಿ, ಬಾದಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ, ಕ.ಜಾ.ಪ. ಬದಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗರಾಜ ಇದ್ದರು.

ವಿವಿದ ಜಾನಪದ ಕಲಾ ತಂಡಗಳು ದೇಶಭಕ್ತಿ ಗೀತೆ, ಸೋಬಾನೆ, ತತ್ವಪದ, ಬಿಸುಕಲ್ಲಿನ ಪದ ಹಾಡಿದರು. ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT