<p><strong>ಬಾಗಲಕೋಟೆ</strong>: ‘ಕೃಷ್ಣನ ಕೈಯಲ್ಲಿ ಚಕ್ರ, ಶಿವನ ಕೈಯಲ್ಲಿ ತ್ರಿಶೂಲ ಇದೆ. ಈಗೊಬ್ಬರು ಬುಲ್ಡೋಜರ್ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಗೂ ಬರಲಿದೆ’ ಎಂದು ಧರ್ಮ ಜಾಗರಣ ಸಮಿತಿ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹನುಮಂತ ಮಳಲಿ ಹೇಳಿದರು.</p>.<p>ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಶನಿವಾರ ನವನಗರದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು.</p>.<p>‘ಶೋಭಾಯಾತ್ರೆ ಮೇಲೆ ಕಲ್ಲು ಎಸೆದವರು ಕಿಡಿಗೇಡಿಗಳು. ರಾಷ್ಟ್ರ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಶೋಭಾಯಾತ್ರೆಗೆ ಮಸೀದಿ ಮೇಲಿಂದ ಹೂ ಹಾಕಬೇಕೇ ಹೊರತು ಚಪ್ಪಲಿ ಎಸೆಯಬಾರದು. ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>‘ಪಾಕಿಸ್ತಾನ ಏಳನೇ ತರಗತಿ ಪಠ್ಯದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಪಠ್ಯವಿದೆ. ಅಂತಹ ಯೋಧ ಹುಟ್ಟಲಿ ಎಂದು ಪಠ್ಯದಲ್ಲಿ ಅಳವಡಿಸಲಾಗಿದೆ. ಆದರೆ, ನಮ್ಮಲ್ಲಿ ಅವರ ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವಮಾನ ಮಾಡಿದಂತೆ’ ಎಂದರು</p>.<p>‘ಪ್ರಧಾನಿ ನರೇಂದ್ರ ಮೋದಿ ಒಬ್ಬರನ್ನೇ ಸ್ಯಾಂಪಲ್ ಆಗಿ ನೀಡಿದ್ದೇವೆ. ವಿಶ್ವವೇ ಕೊಂಡಾಡುತ್ತಿದೆ. ಅಂತಹ ಸಾವಿರಾರು ಮಂದಿ ನಮ್ಮಲ್ಲಿದ್ದಾರೆ. ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಒಂದೇ ಕಾನೂನು ಆಗುವವರೆಗೆ ನೀವೂ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಡಿ’ ಎಂದರು.</p>.<p>‘ಸೋಗಲಾಡಿ ಸರ್ಕಾರಕ್ಕೆ ಮತ ಹಾಕಿದ್ದೇವೆ. ಯೋಗ್ಯತೆ ಇಲ್ಲದವರಿಗೆ ಮತ ಹಾಕಬೇಡಿ. ಯಾವುದೇ ಪಕ್ಷಕ್ಕೆ ಮತ ಹಾಕಿ ಎನ್ನುವುದಿಲ್ಲ. ಯಾವುದೇ ಪಕ್ಷದ ಮೇಲೆ ನಂಬಿಕೆ ಇಲ್ಲ. ಕೆಲವರು ಪಕ್ಷದಲ್ಲಿ ಮುಖವಾಡ ಹಾಕಿಕೊಂಡವರಿದ್ದಾರೆ. ಬೇರೆ ಪಕ್ಷದಲ್ಲೂ ಒಳ್ಳೆಯವರಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ‘ಕೃಷ್ಣನ ಕೈಯಲ್ಲಿ ಚಕ್ರ, ಶಿವನ ಕೈಯಲ್ಲಿ ತ್ರಿಶೂಲ ಇದೆ. ಈಗೊಬ್ಬರು ಬುಲ್ಡೋಜರ್ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಗೂ ಬರಲಿದೆ’ ಎಂದು ಧರ್ಮ ಜಾಗರಣ ಸಮಿತಿ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹನುಮಂತ ಮಳಲಿ ಹೇಳಿದರು.</p>.<p>ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಶನಿವಾರ ನವನಗರದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು.</p>.<p>‘ಶೋಭಾಯಾತ್ರೆ ಮೇಲೆ ಕಲ್ಲು ಎಸೆದವರು ಕಿಡಿಗೇಡಿಗಳು. ರಾಷ್ಟ್ರ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಶೋಭಾಯಾತ್ರೆಗೆ ಮಸೀದಿ ಮೇಲಿಂದ ಹೂ ಹಾಕಬೇಕೇ ಹೊರತು ಚಪ್ಪಲಿ ಎಸೆಯಬಾರದು. ಮುಂದೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>‘ಪಾಕಿಸ್ತಾನ ಏಳನೇ ತರಗತಿ ಪಠ್ಯದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಪಠ್ಯವಿದೆ. ಅಂತಹ ಯೋಧ ಹುಟ್ಟಲಿ ಎಂದು ಪಠ್ಯದಲ್ಲಿ ಅಳವಡಿಸಲಾಗಿದೆ. ಆದರೆ, ನಮ್ಮಲ್ಲಿ ಅವರ ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವಮಾನ ಮಾಡಿದಂತೆ’ ಎಂದರು</p>.<p>‘ಪ್ರಧಾನಿ ನರೇಂದ್ರ ಮೋದಿ ಒಬ್ಬರನ್ನೇ ಸ್ಯಾಂಪಲ್ ಆಗಿ ನೀಡಿದ್ದೇವೆ. ವಿಶ್ವವೇ ಕೊಂಡಾಡುತ್ತಿದೆ. ಅಂತಹ ಸಾವಿರಾರು ಮಂದಿ ನಮ್ಮಲ್ಲಿದ್ದಾರೆ. ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಒಂದೇ ಕಾನೂನು ಆಗುವವರೆಗೆ ನೀವೂ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಡಿ’ ಎಂದರು.</p>.<p>‘ಸೋಗಲಾಡಿ ಸರ್ಕಾರಕ್ಕೆ ಮತ ಹಾಕಿದ್ದೇವೆ. ಯೋಗ್ಯತೆ ಇಲ್ಲದವರಿಗೆ ಮತ ಹಾಕಬೇಡಿ. ಯಾವುದೇ ಪಕ್ಷಕ್ಕೆ ಮತ ಹಾಕಿ ಎನ್ನುವುದಿಲ್ಲ. ಯಾವುದೇ ಪಕ್ಷದ ಮೇಲೆ ನಂಬಿಕೆ ಇಲ್ಲ. ಕೆಲವರು ಪಕ್ಷದಲ್ಲಿ ಮುಖವಾಡ ಹಾಕಿಕೊಂಡವರಿದ್ದಾರೆ. ಬೇರೆ ಪಕ್ಷದಲ್ಲೂ ಒಳ್ಳೆಯವರಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>