ಮೃತ್ಯು ಯಾರಿಗೆ ಯಾವಾಗ ಬರುತ್ತದೆ ಗೊತ್ತಿಲ್ಲ. ಎಂತಹ ಸಾಧಕರಿಗೂ ಸಾವು ತಪ್ಪಿದ್ದಲ್ಲ. ಅನಂತಂ, ಆನಂದಂ, ಬ್ರಹ್ಮಂ ಎಂದು ಹೇಳಲಾಗಿದೆ. ನಮ್ಮಲ್ಲಿ ಪರಬ್ರಹ್ಮನ ಅಂಶವಿದೆ. ತನ್ನ ಹೊಟ್ಟೆಯಲ್ಲಿ ಕಸ್ತೂರಿ ಸುವಾಸನೆಯಿದೆ ಎಂದು ಗೊತ್ತಿದ್ದರೂ, ಕಸ್ತೂರಿ ಮೃಗ ಕಾಡೆಲ್ಲ ಹುಡುಕುತ್ತದೆ. ನಮ್ಮ ಸ್ಥಿತಿಯೂ ಹೀಗೆ ಆಗಿದೆ. ನಮ್ಮಲ್ಲಿ ನಾವೇ ಆನಂದ ಕಂಡುಕೊಳ್ಳಬೇಕು ಎಂದರು.