ವಿಜಯಪುರ ಗಾಣಿಗ ಗುರುಪೀಠದ ಜಯಬಸವ ಕುಮಾರಸ್ವಾಮೀಜಿ, ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥದೇವರು ಸಾನ್ನಿಧ್ಯ ವಹಿಸುವರು. ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಗಾಣಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಅಮರಾವತಿ ಅಧ್ಯಕ್ಷತೆ ವಹಿಸುವರು. ಅಥಣಿ ಶಾಸಕ ಲಕ್ಷ್ಮಣ ಸವದಿ ಜ್ಯೋತಿ ಬೆಳಗಿಸಲಿದ್ದು, ಸಂಸದ ಪಿ.ಸಿ. ಗದ್ದಿಗೌಡರ ಮುಖ್ಯಅತಿಥಿಯಾಗಿ ಆಗಮಿಸುವರು. ಸಮಾಜದ ರಾಜ್ಯಾಧ್ಯಕ್ಷ ಗುರುಣ್ಣ ಗೋಡಿ, ಪುರಸಭೆ ಸದಸ್ಯ ಚಂದಪ್ಪ ಕಡಿವಾಲ, ಮಹೇಶಪ್ಪ ಸಜ್ಜನ,ಬಸವಂತಪ್ಪ ಕುಂಟೋಜಿ, ಚಂದ್ರಶೇಖರ ಸೂಡಿ, ಶರಣಪ್ಪ ಕನ್ನೊಳ್ಳಿ, ಅಮೀನಪ್ಪ ಸಂದಿಗವಾಡ, ಬಸವರಾಜ ಇಸ್ಲಾಂಪೂರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.