ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಗೆ ಮಹಾರಾಷ್ಟ್ರದ ನೀರು: ದೂರವಾದ ಆತಂಕ

Published 6 ಮೇ 2023, 14:31 IST
Last Updated 6 ಮೇ 2023, 14:31 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 2 ಟಿಎಂಸಿ ಯಷ್ಟು ನೀರಿನನ್ನು ಬಿಟ್ಟಿದ್ದರಿಂದ ಹಿಪ್ಪರಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ.

ಇದರಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ಯಾವುದೆ ರೀತಿಯ ಸಮಸ್ಯೆ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಯಾವುದೆ ತೊಂದರೆಯಾಗುವುದಿಲ್ಲ. ಆದರೂ ಜನರು ನೀರನ್ನು ಮಿತವಾಗಿ ಬಳಸಬೇಕು ಎಂದು ಜಲಾಶಯದ ಸಹಾಯಕ ಎಂಜಿನಿಯರ್ ವಿಠ್ಠಲ ನಾಯಕ ತಿಳಿಸಿದರು.

ಇದುವರೆಗೂ ಸಮೀಪದ ಕೃಷ್ಣಾ ನದಿಯಲ್ಲಿ ಮತ್ತು ತಾಲ್ಲೂಕಿನ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಹಿಪ್ಪರಗಿ ಜಲಾಶಯದಿಂದ 0.6 ಟಿಎಂಸಿ ನೀರನ್ನು ನದಿಯ ಮುಂಭಾಗಕ್ಕೆ ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ನೀರಿನ ಕೊರತೆ ಎದುರಾಗುತ್ತಿತ್ತು. ಆದರೆ ಈಗ ಈ ಆತಂಕ ದೂರವಾಗಿದೆ.

Cut-off box - ‘ಯೋಗ ಧ್ಯಾನದಿಂದ ನೆಮ್ಮದಿ’ ಅಮೀನಗಡ: ಪ್ರತಿದಿನ ಯೋಗದೊಂದಿಗೆ ಧ್ಯಾನ ಪ್ರಾಣಾಯಾಮ ಮಾಡುವುದನ್ನು ಅಳವಳಡಿಸಿಕೊಂಡರೆ ಮಾನಸಿಕ ನೆಮ್ಮದಿ ಹಾಗೂ ಉತ್ತಮ ಅರೋಗ್ಯ ಹೊಂದಲು ಸಾಧ್ಯವೆಂದು ಸತ್ಸಂಗ ಸಂಚಾಲಕ ರಮೇಶ ದಡ್ಡೇನವರ ಹೇಳಿದರು. ಸಮೀಪದ ಸಿದ್ದನಕೊಳ್ಳ ಕನ್ನಿಕಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ನಡೆದ 'ಸತ್ಸಂಗ ಸಂಭ್ರಮ ಚಿಂತನೆ 1' ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಗ ಧ್ಯಾನ ಮಾಡಿ ಸಾಧಕರಾಗಲು ಸಾಧ್ಯವೆಂದು ಹೇಳಿದರು. ಇಂದಿರಾ ಲಾತೂರಕರ ಮಾತನಾಡಿ ಧ್ಯಾನ ಮಾಡಿದರೆ ಶಾಂತಿ ನೆಮ್ಮದಿ ಪಡೆಯುವುದರ ಜೊತೆಗೆ ಬಿಪಿ ಶುಗರ್ ರಕ್ತದೊತ್ತಡ ಹತ್ತು ಹಲವು ರೋಗಗಳಿಂದ ಮುಕ್ತಿ ಹೊಂದಬಹುದಾಗಿದೆ ಎಂದರು ಶ್ರೀನಿವಾಸ ಲಾತೂರಕರ ಎಸ್ಎನ್ ಗೌಡರ ಮಲ್ಲಣ್ಣ ಟಾಣ್ಣನವರ ಪ್ರಸಾದ ಶಿರೋಳ ಸುರೇಶ ನಾಯಕ ಸಂಗಮೇಶ ಬಾರಿಗಿಡದ ಶಂಕರ ಮಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT