<p><strong>ಬಾಗಲಕೋಟೆ:</strong> ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ಭೂಮಿ ಹಾಗೂ ಕಾಲುವೆಗೆ ಹೋಗುವ ಭೂಮಿಗೆ ರಾಜ್ಯ ಸರ್ಕಾರ ಹೊಸದಾಗಿ ದರ ನಿಗದಿ ಮಾಡಿದೆ. ಈ ಒಪ್ಪಂದ ದರಕ್ಕೆ ರೈತರನ್ನು ಒಪ್ಪಿಸುವ ಹೊಣೆಯನ್ನು ಜನಪ್ರತಿನಿಧಿಗಳು, ರೈತ ಹೋರಾಟಗಾರರ ಹೆಗಲಿಗೆ ಸರ್ಕಾರ ವರ್ಗಾಯಿಸಿದೆ. ಇದರಲ್ಲಿ ಅವರು ಯಶಸ್ವಿಯಾಗುವರೇ ಎಂಬುದು ಪ್ರಶ್ನೆಯಾಗಿದೆ.</p>.<p>ರಾಜ್ಯ ಸರ್ಕಾರವು ಯುಕೆಪಿಯಡಿ ಮುಳುಗಡೆಯಾಗುವ ನೀರಾವರಿಯ ಪ್ರತಿ ಎಕರೆಗೆ ₹40 ಲಕ್ಷ, ಒಣಭೂಮಿಯ ಪ್ರತಿ ಎಕರೆಗೆ ₹30 ಲಕ್ಷ ನಿಗದಿ ಮಾಡಲಾಗಿದೆ. ಕಾಲುವೆಗೆ ಬೇಕಾಗುವ ನೀರಾವರಿಯ ಪ್ರತಿ ಎಕರೆಗೆ ₹30 ಲಕ್ಷ, ಒಣಭೂಮಿ ಪ್ರತಿ ಎಕರೆಗ ₹25 ಲಕ್ಷ ನಿಗದಿ ಮಾಡಲಾಗಿದೆ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ರೈತ ಹೋರಾಟಗಾರರು ನೀರಾವರಿಯ ಪ್ರತಿ ಎಕರೆಗೆ ₹50 ಲಕ್ಷ, ಒಣಭೂಮಿ ಪ್ರತಿ ಎಕರೆಗೆ ₹40 ಲಕ್ಷ ಪರಿಹಾರ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದರು. ಸರ್ಕಾರ ಹಲವಾರು ಸುತ್ತಿನ ಮಾತುಕತೆಯ ನಂತರ ಮೇಲಿನ ದರ ನಿಗದಿ ಮಾಡಿದೆ.</p>.<p>ಮುಳುಗಡೆ ಹಾಗೂ ಕಾಲುವೆಗೆ ನೀಡುವ ಭೂಮಿಯ ಪರಿಹಾರ ದರ ಬೇರೆ, ಬೇರೆ ನಿಗದಿ ಮಾಡಿರುವುದಕ್ಕೆ ರೈತರ ಪ್ರತಿಕ್ರಿಯೆ ಇನ್ನಷ್ಟೇ ವ್ಯಕ್ತವಾಗಬೇಕಿದೆ. ಪುನರ್ವಸತಿಗಾಗಿ ತೆಗೆದುಕೊಳ್ಳುವ ಭೂಮಿಯ ದರದ ಬಗ್ಗೆ ತೆಗೆದುಕೊಂಡ ನಿರ್ಧಾರ ಬಹಿರಂಗವಾಗಿಲ್ಲ.</p>.<p>ಯುಕೆಪಿ ಮೂರನೇ ಹಂತದ ಯೋಜನೆ ಪೂರ್ಣಗೊಳ್ಳಲು 1.33 ಲಕ್ಷ ಎಕರೆ ಭೂಮಿ ಬೇಕಾಗಿದೆ. ಇದರಲ್ಲಿ 75,563 ಎಕರೆ ಮುಳುಗಡೆಯಾಗಲಿದೆ. ಕಾಲುವೆ ನಿರ್ಮಾಣಕ್ಕಾಗಿ 51,830 ಎಕರೆ, ಮುಳುಗಡೆಯಾಗಲಿರುವ 20 ಹಳ್ಳಿಗಳ ಪುನರ್ವಸತಿಗಾಗಿ 6,469 ಎಕರೆ ಭೂಮಿ ಬೇಕಾಗಿದೆ.</p>.<p>ನಿಗದಿತ ಅವಧಿಯಲ್ಲಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾದರೆ ಮಾತ್ರ ಹೆಚ್ಚಿನ ಭೂಮಿ ಸರ್ಕಾರಕ್ಕೆ ನೇರವಾಗಿ ದೊರೆಯಲಿದೆ. ವಿಳಂಬ ಮಾಡಿದರೆ, ನಿತ್ಯ ಬೆಲೆ ಹೆಚ್ಚಾಗುವುದರಿಂದ ಭವಿಷ್ಯದಲ್ಲಿ ಮತ್ತೆ ದರ ಸಮಸ್ಯೆ ಎದುರಾಗಲಿದೆ.</p>.<div><blockquote>ಮುಳುಗಡೆಯಾಗುವ ಭೂಮಿಗೆ ಪರಿಹಾರ ನಿಗದಿ ಮಾಡಿರುವುದು ಸ್ವಾಗತಾರ್ಹ. ಪ್ರತಿ ವರ್ಷ ಶೇ10ರಷ್ಟು ಬೆಳವಣಿಗೆ ದರದಲ್ಲಿ ಹೆಚ್ಚಳವಾಗುವುದರಿಂದ ಇದೇ ಆರ್ಥಿಕ ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು </blockquote><span class="attribution">ಪ್ರಕಾಶ ಅಂತರಗೊಂಡ ಸಂಚಾಲಕ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿ</span></div>.<p><strong>ಒಂದು ಲಕ್ಷ ಕೋಟಿ ಬೇಕು!</strong> </p><p>ಯುಕೆಪಿ ಮೂರನೇ ಹಂತ ಪೂರ್ಣಗೊಳಿಸಲು ಅಂದಾಜು 1 ಲಕ್ಷ ಕೋಟಿ ಮೊತ್ತ ಬೇಕಾಗಲಿದೆ. ಈ ಹಿಂದೆ ನಿಗದಿಯಾಗಿದ್ದ ಪರಿಹಾರಕ್ಕೆ ₹87 818 ಕೋಟಿ ಬೇಕಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮವು ಮಾರ್ಚ್ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಲ್ಲಿ ಒಣ ಬೇಸಾಯಕ್ಕೆ ₹30 ಲಕ್ಷ ನೀರಾವರಿ ಭೂಮಿಗೆ ₹35 ಲಕ್ಷಕ್ಕೆ ಹೆಚ್ಚಿಸಿದರೆ ಅಂದಾಜು ವೆಚ್ಚ ₹96006 ಕೋಟಿಗೆ ಹೆಚ್ಚಲಿದೆ ಎಂದಿತ್ತು. ಈಗ ರಾಜ್ಯ ಸರ್ಕಾರ ಅದಕ್ಕಿಂತಲೂ ಹೆಚ್ಚಿನ ದರ ನಿಗದಿ ಮಾಡಿರುವುದರಿಂದ ವೆಚ್ಚ ಲಕ್ಷ ಕೋಟಿ ದಾಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಮಾತುಗಳನ್ನಾಡಿದ್ದಾರೆ. ₹70 ಸಾವಿರ ಕೋಟಿ ಬೇಕಾಗಬಹುದು ಎಂದಿದ್ದಾರೆ. ಆದರೆ ವಾಸ್ತವದಲ್ಲಿ ಅಂದಾಜು ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ಭೂಮಿ ಹಾಗೂ ಕಾಲುವೆಗೆ ಹೋಗುವ ಭೂಮಿಗೆ ರಾಜ್ಯ ಸರ್ಕಾರ ಹೊಸದಾಗಿ ದರ ನಿಗದಿ ಮಾಡಿದೆ. ಈ ಒಪ್ಪಂದ ದರಕ್ಕೆ ರೈತರನ್ನು ಒಪ್ಪಿಸುವ ಹೊಣೆಯನ್ನು ಜನಪ್ರತಿನಿಧಿಗಳು, ರೈತ ಹೋರಾಟಗಾರರ ಹೆಗಲಿಗೆ ಸರ್ಕಾರ ವರ್ಗಾಯಿಸಿದೆ. ಇದರಲ್ಲಿ ಅವರು ಯಶಸ್ವಿಯಾಗುವರೇ ಎಂಬುದು ಪ್ರಶ್ನೆಯಾಗಿದೆ.</p>.<p>ರಾಜ್ಯ ಸರ್ಕಾರವು ಯುಕೆಪಿಯಡಿ ಮುಳುಗಡೆಯಾಗುವ ನೀರಾವರಿಯ ಪ್ರತಿ ಎಕರೆಗೆ ₹40 ಲಕ್ಷ, ಒಣಭೂಮಿಯ ಪ್ರತಿ ಎಕರೆಗೆ ₹30 ಲಕ್ಷ ನಿಗದಿ ಮಾಡಲಾಗಿದೆ. ಕಾಲುವೆಗೆ ಬೇಕಾಗುವ ನೀರಾವರಿಯ ಪ್ರತಿ ಎಕರೆಗೆ ₹30 ಲಕ್ಷ, ಒಣಭೂಮಿ ಪ್ರತಿ ಎಕರೆಗ ₹25 ಲಕ್ಷ ನಿಗದಿ ಮಾಡಲಾಗಿದೆ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ರೈತ ಹೋರಾಟಗಾರರು ನೀರಾವರಿಯ ಪ್ರತಿ ಎಕರೆಗೆ ₹50 ಲಕ್ಷ, ಒಣಭೂಮಿ ಪ್ರತಿ ಎಕರೆಗೆ ₹40 ಲಕ್ಷ ಪರಿಹಾರ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದರು. ಸರ್ಕಾರ ಹಲವಾರು ಸುತ್ತಿನ ಮಾತುಕತೆಯ ನಂತರ ಮೇಲಿನ ದರ ನಿಗದಿ ಮಾಡಿದೆ.</p>.<p>ಮುಳುಗಡೆ ಹಾಗೂ ಕಾಲುವೆಗೆ ನೀಡುವ ಭೂಮಿಯ ಪರಿಹಾರ ದರ ಬೇರೆ, ಬೇರೆ ನಿಗದಿ ಮಾಡಿರುವುದಕ್ಕೆ ರೈತರ ಪ್ರತಿಕ್ರಿಯೆ ಇನ್ನಷ್ಟೇ ವ್ಯಕ್ತವಾಗಬೇಕಿದೆ. ಪುನರ್ವಸತಿಗಾಗಿ ತೆಗೆದುಕೊಳ್ಳುವ ಭೂಮಿಯ ದರದ ಬಗ್ಗೆ ತೆಗೆದುಕೊಂಡ ನಿರ್ಧಾರ ಬಹಿರಂಗವಾಗಿಲ್ಲ.</p>.<p>ಯುಕೆಪಿ ಮೂರನೇ ಹಂತದ ಯೋಜನೆ ಪೂರ್ಣಗೊಳ್ಳಲು 1.33 ಲಕ್ಷ ಎಕರೆ ಭೂಮಿ ಬೇಕಾಗಿದೆ. ಇದರಲ್ಲಿ 75,563 ಎಕರೆ ಮುಳುಗಡೆಯಾಗಲಿದೆ. ಕಾಲುವೆ ನಿರ್ಮಾಣಕ್ಕಾಗಿ 51,830 ಎಕರೆ, ಮುಳುಗಡೆಯಾಗಲಿರುವ 20 ಹಳ್ಳಿಗಳ ಪುನರ್ವಸತಿಗಾಗಿ 6,469 ಎಕರೆ ಭೂಮಿ ಬೇಕಾಗಿದೆ.</p>.<p>ನಿಗದಿತ ಅವಧಿಯಲ್ಲಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾದರೆ ಮಾತ್ರ ಹೆಚ್ಚಿನ ಭೂಮಿ ಸರ್ಕಾರಕ್ಕೆ ನೇರವಾಗಿ ದೊರೆಯಲಿದೆ. ವಿಳಂಬ ಮಾಡಿದರೆ, ನಿತ್ಯ ಬೆಲೆ ಹೆಚ್ಚಾಗುವುದರಿಂದ ಭವಿಷ್ಯದಲ್ಲಿ ಮತ್ತೆ ದರ ಸಮಸ್ಯೆ ಎದುರಾಗಲಿದೆ.</p>.<div><blockquote>ಮುಳುಗಡೆಯಾಗುವ ಭೂಮಿಗೆ ಪರಿಹಾರ ನಿಗದಿ ಮಾಡಿರುವುದು ಸ್ವಾಗತಾರ್ಹ. ಪ್ರತಿ ವರ್ಷ ಶೇ10ರಷ್ಟು ಬೆಳವಣಿಗೆ ದರದಲ್ಲಿ ಹೆಚ್ಚಳವಾಗುವುದರಿಂದ ಇದೇ ಆರ್ಥಿಕ ವರ್ಷದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು </blockquote><span class="attribution">ಪ್ರಕಾಶ ಅಂತರಗೊಂಡ ಸಂಚಾಲಕ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿ</span></div>.<p><strong>ಒಂದು ಲಕ್ಷ ಕೋಟಿ ಬೇಕು!</strong> </p><p>ಯುಕೆಪಿ ಮೂರನೇ ಹಂತ ಪೂರ್ಣಗೊಳಿಸಲು ಅಂದಾಜು 1 ಲಕ್ಷ ಕೋಟಿ ಮೊತ್ತ ಬೇಕಾಗಲಿದೆ. ಈ ಹಿಂದೆ ನಿಗದಿಯಾಗಿದ್ದ ಪರಿಹಾರಕ್ಕೆ ₹87 818 ಕೋಟಿ ಬೇಕಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮವು ಮಾರ್ಚ್ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಲ್ಲಿ ಒಣ ಬೇಸಾಯಕ್ಕೆ ₹30 ಲಕ್ಷ ನೀರಾವರಿ ಭೂಮಿಗೆ ₹35 ಲಕ್ಷಕ್ಕೆ ಹೆಚ್ಚಿಸಿದರೆ ಅಂದಾಜು ವೆಚ್ಚ ₹96006 ಕೋಟಿಗೆ ಹೆಚ್ಚಲಿದೆ ಎಂದಿತ್ತು. ಈಗ ರಾಜ್ಯ ಸರ್ಕಾರ ಅದಕ್ಕಿಂತಲೂ ಹೆಚ್ಚಿನ ದರ ನಿಗದಿ ಮಾಡಿರುವುದರಿಂದ ವೆಚ್ಚ ಲಕ್ಷ ಕೋಟಿ ದಾಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಮಾತುಗಳನ್ನಾಡಿದ್ದಾರೆ. ₹70 ಸಾವಿರ ಕೋಟಿ ಬೇಕಾಗಬಹುದು ಎಂದಿದ್ದಾರೆ. ಆದರೆ ವಾಸ್ತವದಲ್ಲಿ ಅಂದಾಜು ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>