‘ಹೆಬ್ಬಾಳದಿಂದ ಸ್ನೇಹಿತರೊಂದಿಗೆ ವಾಹನದಲ್ಲಿ ಬಂದಿದ್ದ ಅವರಿಗೆ ಎರಡು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ವಾಹನ ನಿಲುಗಡೆ ಮಾಡುವಲ್ಲಿಯೇ ನನಗೆ ಸುಸ್ತಾಗಿದೆ. ನೀವೇ ಹೋಗಿ ಬನ್ನಿ ಎಂದು ಸ್ನೇಹಿತರನ್ನು ಕಳುಹಿಸಿದ್ದರು. ಸಮಾವೇಶ ಮುಗಿದ ಮೇಲೆ ಸ್ನೇಹಿತರು ಫೋನ್ ಮಾಡಿದಾಗ ವ್ಯಾಟರ್ ಟ್ಯಾಂಕ್ ಬಳಿ ಇರುವುದಾಗಿ ಹೇಳಿದ್ದರು. ಹುಡುಕಾಡಿದಾಗ ಸಿಕ್ಕಿರಲಿಲ್ಲ. ಬಸ್ಗೆ ಬರುವಂತೆ ತಿಳಿಸಿ ಸ್ನೇಹಿತರು ಹೊರಟಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.