30 ನಿಮಿಷ ಕಾಲ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ವಚನ ಗಾಯನ, ವಚನ ಸಾಹಿತ್ಯ ಚಿಂತನೆ, ಶರಣ, ಶರಣೆಯರ ಪರಿಚಯ, ವಚನಗಳಲ್ಲಿ ವಿಜ್ಞಾನ, ಜನಪದರು ಕಂಡ ಶರಣರ ಕುರಿತು ನಾಡಿನ ಮಠಾಧೀಶರು, ಚಿಂತಕರು, ಸಾಹಿತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಮಾತನಾಡುವರು. ಕೂಡಲಸಂಗಮ, ಬಸವನ ಬಾಗೇವಾಡಿ, ಚಿಕ್ಕಸಂಗಮ, ಎಂ.ಕೆ.ಹುಬ್ಬಳ್ಳಿ, ತಂಗಡಗಿ ಕ್ಷೇತ್ರಗಳ ಪರಿಚಯ ಈ ವೇಳೆ ಬಿತ್ತರವಾಗಲಿದೆ.