ಬೃಹತ್ ಮೆರವಣಿಗೆ; ಜನವರಿ 21ರಂದು ಮೇದಾರ ಸಮಾಜದ ಕುಲಗುರು ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಗರದಲ್ಲಿ ಜ್ಯೋತಿ ಯಾತ್ರೆಯಲ್ಲಿ ಹೆಜ್ಜೆ ಹಾಕಲಾಗುವುದು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಝಾಂಜ್ ಪಥಕ್, ಕರಡಿ ಮಜಲು ವಾದ್ಯ ತಂಡಗಳು ಭಾಗವಹಿಸಲಿವೆ. ಮಾರವಾಡಿ ಗಲ್ಲಿ, ಅಡತಬಜಾರ, ಮಾಬುಸುಬಾನಿ ದರ್ಗಾ ಸರ್ಕಲ್,ಪಂಖಾ ಮಸೀದಿ, ವಲ್ಲಭಬಾಯಿ ಚೌಕ, ಸ್ಟೇಷನ್ ರಸ್ತೆ ಮೂಲಕ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಚರಂತಮಠದ ಶಿವಾನುಭವ ಮಂಟಪ ತಲುಪಲಿದೆ ಎಂದರು.