ಸೈಕ್ಲಿಂಗ್ ಕೋಚ್ ಅನಿತಾ ನಿಂಬರಗಿ ಸೈಕ್ಲಿಸ್ಟ್ಗಳ ನಡುವೆ ತಾರತಮ್ಯ ಮಾಡುತ್ತಾರೆ. ಕೆಲವರಿಗಷ್ಟೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸರ್ಕಾರ ಒದಗಿಸಿದ ಪರಿಕರಗಳನ್ನು ನಮಗೆ ಕೊಡುತ್ತಿಲ್ಲ. ಅವರಿಗೆ ಗದಗ ಜಿಲ್ಲೆಗೆ ವರ್ಗಾವಣೆಯಾಗಿದ್ದರೂ, ಅಲ್ಲಿಗೆ ಹೋಗದೇ ಇಲ್ಲಿಗೆ ಮರಳಿದ್ದಾರೆ. ಅವರು ನಮಗೆ ತರಬೇತಿ ಕೊಡುವುದು ಬೇಡ ಎಂದು ಪ್ರತಿಭಟನಾಕಾರರು ಹೇಳಿದರು.