<p><strong>ಜಮಖಂಡಿ (ಬಾಗಲಕೋಟೆ ಜಿಲ್ಲೆ):</strong> ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದಾಗ, ಹಿಂದೂ ಸಂಘಟನೆಗಳು ಯಾಕೆ ಮಾತನಾಡಲಿಲ್ಲ’ ಎಂದು ಉಸ್ತವಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು. </p>.<p>‘ಅಸ್ಪೃಶ್ಯತೆ ಸಮಸ್ಯೆ ನಮ್ಮ ಜನರನ್ನು ಇನ್ನೂ ಕಾಡುತ್ತಿದೆ. ಇದರ ಬಗ್ಗೆ ಹಿಂದೂ ಸಂಘಟನೆಗಳು, ಮಠಾಧೀಶರು ಧ್ವನಿ ಎತ್ತುತ್ತಿಲ್ಲ. ಇಂಥವರು ಹೇಗೆ ಹಿಂದೂ ರಾಷ್ಟ್ರ ಕಟ್ಟಲು ಸಾಧ್ಯ? ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಬಿಜೆಪಿಗೆ ತತ್ವ–ಸಿದ್ಧಾಂತಗಳಿಲ್ಲ. ಮುಸ್ಲಿಮರನ್ನು ಬೈದರೆ ಹಿಂದೂಗಳು ಒಗ್ಗಟ್ಟು ಆಗುತ್ತಾರೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಅದಕ್ಕೆ ಅಧಿಕಾರದ ಲಾಲಸೆಗಾಗಿ ಜಾತಿಗಳ ಮಧ್ಯ ಜಗಳ ಹಚ್ಚಿಸುತ್ತಿದ್ದಾರೆ. ಅವರ ಮುಖವಾಡ ಜನರಿಗೆ ಗೊತ್ತಾಗಿದೆ’ ಎಂದರು.</p>.<p>‘ಸದ್ಯ ಚುನಾವಣೆ ನಡೆದರೆ, 160 ಸೀಟುಗಳು ಬರುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹೇಳುತ್ತಾರೆ. ನಮ್ಮ ರಾಜ್ಯದ ಜನರು ತುಂಬಾ ಪ್ರಬುದ್ಧರು. ಅವರ ಕುತಂತ್ರ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಿಂದೆಯೂ ಅಧಿಕಾರಕ್ಕೆ ಬಂದಿಲ್ಲ, ಮುಂದೆಯೂ ಬರುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ (ಬಾಗಲಕೋಟೆ ಜಿಲ್ಲೆ):</strong> ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದಾಗ, ಹಿಂದೂ ಸಂಘಟನೆಗಳು ಯಾಕೆ ಮಾತನಾಡಲಿಲ್ಲ’ ಎಂದು ಉಸ್ತವಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು. </p>.<p>‘ಅಸ್ಪೃಶ್ಯತೆ ಸಮಸ್ಯೆ ನಮ್ಮ ಜನರನ್ನು ಇನ್ನೂ ಕಾಡುತ್ತಿದೆ. ಇದರ ಬಗ್ಗೆ ಹಿಂದೂ ಸಂಘಟನೆಗಳು, ಮಠಾಧೀಶರು ಧ್ವನಿ ಎತ್ತುತ್ತಿಲ್ಲ. ಇಂಥವರು ಹೇಗೆ ಹಿಂದೂ ರಾಷ್ಟ್ರ ಕಟ್ಟಲು ಸಾಧ್ಯ? ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.</p>.<p>‘ಬಿಜೆಪಿಗೆ ತತ್ವ–ಸಿದ್ಧಾಂತಗಳಿಲ್ಲ. ಮುಸ್ಲಿಮರನ್ನು ಬೈದರೆ ಹಿಂದೂಗಳು ಒಗ್ಗಟ್ಟು ಆಗುತ್ತಾರೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಅದಕ್ಕೆ ಅಧಿಕಾರದ ಲಾಲಸೆಗಾಗಿ ಜಾತಿಗಳ ಮಧ್ಯ ಜಗಳ ಹಚ್ಚಿಸುತ್ತಿದ್ದಾರೆ. ಅವರ ಮುಖವಾಡ ಜನರಿಗೆ ಗೊತ್ತಾಗಿದೆ’ ಎಂದರು.</p>.<p>‘ಸದ್ಯ ಚುನಾವಣೆ ನಡೆದರೆ, 160 ಸೀಟುಗಳು ಬರುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹೇಳುತ್ತಾರೆ. ನಮ್ಮ ರಾಜ್ಯದ ಜನರು ತುಂಬಾ ಪ್ರಬುದ್ಧರು. ಅವರ ಕುತಂತ್ರ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಿಂದೆಯೂ ಅಧಿಕಾರಕ್ಕೆ ಬಂದಿಲ್ಲ, ಮುಂದೆಯೂ ಬರುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>