<p><strong>ರಾಂಪುರ:</strong> ದೇಶ ಸೇವೆ ಮಾಡುವ ಹಂಬಲವುಳ್ಳ ಯುವಕರು ಸೇನೆಗೆ ಸೇರಬೇಕು ಎಂದು ನಿವೃತ್ತ ಸುಬೇದಾರ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗದಿಗೆಪ್ಪ ಅರಕೇರಿ ಹೇಳಿದರು.</p>.<p>ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮಂಗಳವಾರ ತವರಿಗೆ ಬಂದ ಶಿರಗುಂಪಿ ಗ್ರಾಮದ ಹವಾಲ್ದಾರ್ ಮಂಜುನಾಥ ಜೋಗಿ ಅವರಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇಂದು ಯುವಕರಿಗೆ ಸೇನೆಗೆ ಸೇರಲು ಸಾಕಷ್ಟು ಅವಕಾಶಗಳಿವೆ. ದೇಶ ಸೇವೆಯೇ ಈಶ ಸೇವೆ ಎಂಬಂತೆ ದೇಶ ರಕ್ಷಣೆಯಲ್ಲಿ ತೊಡಗಲು ಮುಂದಾಗಬೇಕು. ಇಂದು ಮಹಿಳೆಯರು ಸಹ ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.</p>.<p>ತಳಗಿಹಾಳ ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್.ಎಸ್.ನಾಗರಾಳ ಹಾಗೂ ನಿವೃತ್ತ ಶಿಕ್ಷಕ ಗಣೇಶ ಹೊರಪೇಟೆ ಮಾತನಾಡಿ, ಹಗಲು ರಾತ್ರಿಯೆನ್ನದೆ ಸೈನಿಕರು ದೇಶದ ಗಡಿ ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಯೋಧರ ಸೇವೆ ಅವಿಸ್ಮರಣೀಯ ಎಂದರು.</p>.<p>ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಾರ್ಯಾಧ್ಯಕ್ಷ ಪ್ರಕಾಶ ಸಿಂಗರಡ್ಡಿ, ಕ್ಯಾಪ್ಟನ್ ಯಂಕಣ್ಣ ಹಟ್ಟಿ, ಗ್ಯಾನಪ್ಪ ದಳವಾಯಿ, ಸುಬೇದಾರ ಶಂಕ್ರಪ್ಪ ಬಾರಕೇರ, ಮಾಜಿ ಸೈನಿಕರಾದ ಮಂಜುನಾಥ ಮನಗೂಳಿ, ಯಲ್ಲಪ್ಪ ಕಡೆಮನಿ, ನಾಗಪ್ಪ ಮುಳಗುಂದ, ಗುರುರಾಜ್ ರೊಳ್ಳಿ, ನಿವೃತ್ತ ಶಿಕ್ಷಕ ಆರ್.ಎಸ್.ಗಾಡದ ಅತಿಥಿಗಳಾಗಿದ್ದರು.</p>.<p>ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹವಾಲ್ದಾರ್ ಮಂಜುನಾಥ ಜೋಗಿ ಅವರನ್ನು ಇಲಾಳ, ತಳಗಿಹಾಳ ಮತ್ತು ಶಿರಗುಂಪಿ ಗ್ರಾಮಗಳ ಜನತೆ ಮೆರವಣಿಗೆ ಮೂಲಕ ಗ್ರಾಮ ದೇವತೆಯ ದೇವಸ್ಥಾನಕ್ಕೆ ಕರೆತಂದರು. ಮೂರೂ ಗ್ರಾಮಗಳ ಪರವಾಗಿ ಯೋಧನನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಪುರ:</strong> ದೇಶ ಸೇವೆ ಮಾಡುವ ಹಂಬಲವುಳ್ಳ ಯುವಕರು ಸೇನೆಗೆ ಸೇರಬೇಕು ಎಂದು ನಿವೃತ್ತ ಸುಬೇದಾರ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗದಿಗೆಪ್ಪ ಅರಕೇರಿ ಹೇಳಿದರು.</p>.<p>ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮಂಗಳವಾರ ತವರಿಗೆ ಬಂದ ಶಿರಗುಂಪಿ ಗ್ರಾಮದ ಹವಾಲ್ದಾರ್ ಮಂಜುನಾಥ ಜೋಗಿ ಅವರಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇಂದು ಯುವಕರಿಗೆ ಸೇನೆಗೆ ಸೇರಲು ಸಾಕಷ್ಟು ಅವಕಾಶಗಳಿವೆ. ದೇಶ ಸೇವೆಯೇ ಈಶ ಸೇವೆ ಎಂಬಂತೆ ದೇಶ ರಕ್ಷಣೆಯಲ್ಲಿ ತೊಡಗಲು ಮುಂದಾಗಬೇಕು. ಇಂದು ಮಹಿಳೆಯರು ಸಹ ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.</p>.<p>ತಳಗಿಹಾಳ ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್.ಎಸ್.ನಾಗರಾಳ ಹಾಗೂ ನಿವೃತ್ತ ಶಿಕ್ಷಕ ಗಣೇಶ ಹೊರಪೇಟೆ ಮಾತನಾಡಿ, ಹಗಲು ರಾತ್ರಿಯೆನ್ನದೆ ಸೈನಿಕರು ದೇಶದ ಗಡಿ ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಯೋಧರ ಸೇವೆ ಅವಿಸ್ಮರಣೀಯ ಎಂದರು.</p>.<p>ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಾರ್ಯಾಧ್ಯಕ್ಷ ಪ್ರಕಾಶ ಸಿಂಗರಡ್ಡಿ, ಕ್ಯಾಪ್ಟನ್ ಯಂಕಣ್ಣ ಹಟ್ಟಿ, ಗ್ಯಾನಪ್ಪ ದಳವಾಯಿ, ಸುಬೇದಾರ ಶಂಕ್ರಪ್ಪ ಬಾರಕೇರ, ಮಾಜಿ ಸೈನಿಕರಾದ ಮಂಜುನಾಥ ಮನಗೂಳಿ, ಯಲ್ಲಪ್ಪ ಕಡೆಮನಿ, ನಾಗಪ್ಪ ಮುಳಗುಂದ, ಗುರುರಾಜ್ ರೊಳ್ಳಿ, ನಿವೃತ್ತ ಶಿಕ್ಷಕ ಆರ್.ಎಸ್.ಗಾಡದ ಅತಿಥಿಗಳಾಗಿದ್ದರು.</p>.<p>ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹವಾಲ್ದಾರ್ ಮಂಜುನಾಥ ಜೋಗಿ ಅವರನ್ನು ಇಲಾಳ, ತಳಗಿಹಾಳ ಮತ್ತು ಶಿರಗುಂಪಿ ಗ್ರಾಮಗಳ ಜನತೆ ಮೆರವಣಿಗೆ ಮೂಲಕ ಗ್ರಾಮ ದೇವತೆಯ ದೇವಸ್ಥಾನಕ್ಕೆ ಕರೆತಂದರು. ಮೂರೂ ಗ್ರಾಮಗಳ ಪರವಾಗಿ ಯೋಧನನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>