<p><strong>ಜಮಖಂಡಿ</strong>: ‘ಹಾನಿಗೀಡಾದ ಪ್ರದೇಶದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ, ಹಾನಿಯನ್ನು ನೋಡಿಕೊಂಡು ಪರಿಹಾರ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.</p>.<p>ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಈಚೆಗೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಿಧನರಾದ ರೈತ ಈಶ್ವರ ಸಿದ್ಧನವರ ನಿವಾಸಕ್ಕೆ ಬುಧವಾರ ಭೆಟ್ಟಿ ನೀಡಿ ಸರ್ಕಾರದಿಂದ ₹ 5 ಲಕ್ಷ ಪರಿಹಾರ ಚೆಕ್ ವಿತರಿಸಿ ಸುದ್ದಿಗಾರರ ಜೊತೆ ಮಾತನಾಡಿದರು.</p>.<p>ಮುಳುಗಡೆ ಆಗಿರುವ ಜಮೀನುಗಳಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ ಅವುಗಳನ್ನು ಆದಷ್ಟೂ ಬೇಗಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.</p>.<p>ಹಲವಾರು ವರ್ಷಗಳಿಂದ ಪ್ರವಾಹ ಬರುತ್ತಿದೆ, ಬೆಳೆ ಹಾನಿಯಾಗುತ್ತಿವೆ, ಈ ಬಗ್ಗೆ ಅಧಿಕಾರಿಗಳಿಂದ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.</p>.<p>ಈ ಭಾಗದಲ್ಲಿ ಹೆಚ್ಚು ನೀರು ನಿಲ್ಲುತ್ತಿರುವ ಬಗ್ಗೆ ಸರ್ವೆ ಮಾಡಿಸಲಾಗುವುದು ಸರ್ವೆ ವರದಿ ಬಂದ<br> ನಂತರ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಾಗುವುದು. ಜಮಖಂಡಿ ತಾಲ್ಲೂಕಿನಲ್ಲೇ ಪ್ರವಾಹದಿಂದ 3 ಜನರು ಸಾವನಪ್ಪಿರುವದು ದುರ್ದೈವದ ಸಂಗತಿ. ಪ್ರವಾಹ ಬಂದಾಗ ರೈತರು ಕಾಳಜಿ ವಹಿಸಬೇಕು, ನೀರಿಗೆ ಇಳಿಯಬಾರದು ಎಂದು ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು ಎಂದರು.</p>.<p>ಮುಖಂಡ ತೌಫೀಕ ಪಾರ್ಥನಳ್ಳಿ, ಎಸಿ ಶ್ವೇತಾ ಬೀಡಿಕರ, ಡಿವೈಎಸ್ಪಿ ಶಾಂತವೀರ ಈ, ತಹಶೀಲ್ದಾರ್ ಸದಾಶಿವ ಮಕ್ಕೋಜಿ, ತಾಲ್ಲೂಕು ಪಮಚಾಯಿತಿ ಇಒ ಸಂಜಿವ ಜುನ್ನೂರ, ಸಿದ್ದಾರ್ಥ ಗೋಠೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ‘ಹಾನಿಗೀಡಾದ ಪ್ರದೇಶದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ, ಹಾನಿಯನ್ನು ನೋಡಿಕೊಂಡು ಪರಿಹಾರ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.</p>.<p>ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಈಚೆಗೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಿಧನರಾದ ರೈತ ಈಶ್ವರ ಸಿದ್ಧನವರ ನಿವಾಸಕ್ಕೆ ಬುಧವಾರ ಭೆಟ್ಟಿ ನೀಡಿ ಸರ್ಕಾರದಿಂದ ₹ 5 ಲಕ್ಷ ಪರಿಹಾರ ಚೆಕ್ ವಿತರಿಸಿ ಸುದ್ದಿಗಾರರ ಜೊತೆ ಮಾತನಾಡಿದರು.</p>.<p>ಮುಳುಗಡೆ ಆಗಿರುವ ಜಮೀನುಗಳಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ ಅವುಗಳನ್ನು ಆದಷ್ಟೂ ಬೇಗಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.</p>.<p>ಹಲವಾರು ವರ್ಷಗಳಿಂದ ಪ್ರವಾಹ ಬರುತ್ತಿದೆ, ಬೆಳೆ ಹಾನಿಯಾಗುತ್ತಿವೆ, ಈ ಬಗ್ಗೆ ಅಧಿಕಾರಿಗಳಿಂದ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.</p>.<p>ಈ ಭಾಗದಲ್ಲಿ ಹೆಚ್ಚು ನೀರು ನಿಲ್ಲುತ್ತಿರುವ ಬಗ್ಗೆ ಸರ್ವೆ ಮಾಡಿಸಲಾಗುವುದು ಸರ್ವೆ ವರದಿ ಬಂದ<br> ನಂತರ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಾಗುವುದು. ಜಮಖಂಡಿ ತಾಲ್ಲೂಕಿನಲ್ಲೇ ಪ್ರವಾಹದಿಂದ 3 ಜನರು ಸಾವನಪ್ಪಿರುವದು ದುರ್ದೈವದ ಸಂಗತಿ. ಪ್ರವಾಹ ಬಂದಾಗ ರೈತರು ಕಾಳಜಿ ವಹಿಸಬೇಕು, ನೀರಿಗೆ ಇಳಿಯಬಾರದು ಎಂದು ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು ಎಂದರು.</p>.<p>ಮುಖಂಡ ತೌಫೀಕ ಪಾರ್ಥನಳ್ಳಿ, ಎಸಿ ಶ್ವೇತಾ ಬೀಡಿಕರ, ಡಿವೈಎಸ್ಪಿ ಶಾಂತವೀರ ಈ, ತಹಶೀಲ್ದಾರ್ ಸದಾಶಿವ ಮಕ್ಕೋಜಿ, ತಾಲ್ಲೂಕು ಪಮಚಾಯಿತಿ ಇಒ ಸಂಜಿವ ಜುನ್ನೂರ, ಸಿದ್ದಾರ್ಥ ಗೋಠೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>