ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳದ ಸತೀಶ ಗಾರಗಿ ಅವರಿಗೆ ಬೆಳಗಾವಿಯಲ್ಲಿ ರೆಮ್ಡಿಸಿವಿರ್ ತಯಾರಿಸುವ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ಮುಂದಿನ ದಿನಗಳಲ್ಲಿ ಬೆಳಗಾವಿಯಿಂದಲೇ ಜಿಲ್ಲೆಗೆ ಚುಚ್ಚುಮದ್ದು ಪೂರೈಕೆಯಾಗಲಿದೆ. ಮುಂದಿನ 20ರಿಂದ 30 ದಿನಗಳಲ್ಲಿ ಚುಚ್ಚುಮದ್ದು ತಯಾರಿಕೆ ಕಾರ್ಯ ಪ್ರಾರಂಭವಾಗಲಿದೆ. ಇದರಿಂದು ರಾಜ್ಯದಲ್ಲಿ ರೆಮ್ಡೆಸಿವಿರ್ ಕೊರತೆ ನೀಗಲಿದೆ ಎಂದು ಹೇಳಿದರು.