<p><strong>ಬಾಗಲಕೋಟೆ:</strong> ನವನಗರದಲ್ಲಿ ಬಾಲಕಿಯೊಬ್ಬಳು ಇತ್ತೀಚೆಗೆ ನಾಯಿ ಕಡಿದು ಮೃತಳಾಗಿದ್ದಾಳೆ. ನಾಯಿಗಳು ಹೆಚ್ಚಿದ್ದು, ಜಿಲ್ಲೆಯಲ್ಲಿ ನಿತ್ಯ ಹತ್ತಾರು ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.</p>.<p>ಮೂರು ವರ್ಷಗಳ ಅಂಕಿ–ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ನಾಯಿಗಳ ಕಡಿತದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2025ರೊಂದರಲ್ಲಿಯೇ 25,096 ಜನರ ಮೇಲೆ ನಾಯಿಗಳ ದಾಳಿ ನಡೆದಿದೆ. ನಿತ್ಯ ಸರಾಸರಿ 68 ಜನರು ನಾಯಿ ಕಡಿತಕ್ಕೆ ಈಡಾಗುತ್ತಿದ್ದಾರೆ.</p>.<p>ನಾಯಿ ಕಡಿತದಿಂದ ಕಳೆದ ವರ್ಷ ಐವರು ಮೃತರಾಗಿದ್ದಾರೆ. ಈ ವರ್ಷದ ಆರಂಭದಲ್ಲಿಯೇ ಬಾಲಕಿಯೊಬ್ಬರು ಬಲಿಯಾಗಿದ್ದಾರೆ. ನಾಯಿ ಹಾವಳಿ ತಡೆಗಟ್ಟಬೇಕು ಎನ್ನುವ ಸಾರ್ವಜನಿಕರ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಸ್ಪಂದನೆ ದೊರೆತಿದ್ದು ಕಡಿಮೆ.</p>.<p>ಇಳಕಲ್ ನಗರದಲ್ಲಿ ನಾಯಿಯೊಂದು 30ಕ್ಕೂ ಹೆಚ್ಚು ಜನರನ್ನು ಕಡಿದಿತ್ತು. ಬಾಗಲಕೋಟೆಯಲ್ಲಿ ನಾಯಿಯೊಂದು 10 ಜನ ಅಂಧ ಮಕ್ಕಳ ಮೇಲೆ ದಾಳಿ ನಡೆಸಿತ್ತು. ಅಲ್ಲಲ್ಲಿ ನಾಯಿಗಳು ಕಡಿತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ತಿಂಗಳುಗಟ್ಟಲೇ ಚಿಕಿತ್ಸೆ ಪಡೆಯುತ್ತಿರುತ್ತಾರೆ.</p>.<p>ಬೆಳಿಗ್ಗೆ ಹಾಗೂ ಸಂಜೆ ಜನರು ವಾಕಿಂಗ್ ಹೋಗಲು ಹೆದರುವಂತಾಗಿದೆ. ಮಕ್ಕಳನ್ನು ಓಣಿಯಲ್ಲಿ ಆಟವಾಡಿಸಲು ಕಳುಹಿಸಲು, ಶಾಲೆಗೆ, ಟ್ಯೂಷನ್ಗೆ ಒಬ್ಬರನ್ನೇ ಕಳುಹಿಸಿದ ಪರಿಸ್ಥಿತಿ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿದೆ. ಕೆಲವು ಕಡೆಗಳಲ್ಲಿ ನಾಯಿಗಳು ವಾಹನವನ್ನು ಬೆನ್ನಟ್ಟುವುದರಿಂದ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳೂ ನಡೆದಿವೆ.</p>.<p>ಬೀದಿ ಬದಿ ಇರುವ ಮಾಂಸದ ಅಂಗಡಿಗಳವರು, ಎಗ್ ರೈಸ್ ಸೆಂಟರ್ಗಳವರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ಹೆಚ್ಚುವರಿ ಹಾಗೂ ತ್ಯಾಜ್ಯದ ತುಂಡುಗಳನ್ನು ಎಸೆಯುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ.</p>.<p>ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 3,949, ಬಾದಾಮಿ ತಾಲ್ಲೂಕಿನಲ್ಲಿ 3,894, ಹುನಗುಂದ ತಾಲ್ಲೂಕಿನಲ್ಲಿ 3,353, ಬಾಗಲಕೋಟೆ ತಾಲ್ಲೂಕಿನಲ್ಲಿ 3,439 ಪ್ರಕರಣಗಳು 2025ರಲ್ಲಿ ದಾಖಲಾಗಿವೆ. ಪ್ರತಿ ತಾಲ್ಲೂಕಿನಲ್ಲಿ ನಾಯಿಗಳ ಕಡಿತಕ್ಕೆ ಒಳಗಾದವರ ಸಂಖ್ಯೆ ನಾಲ್ಕು ಸಂಖ್ಯೆಯಲ್ಲಿಯೇ ಇದೆ.</p>.<div><blockquote>ಈಗಾಗಲೇ ಒಂದು ಸುತ್ತು ನಾಯಿಗಳ ಸಂತಾನಶಕ್ತಿ ಹರಣ ಮಾಡಿಸಲಾಗಿದೆ. ಈಗ ಇನ್ನಷ್ಟು ನಾಯಿಗಳ ಸಂತಾನಶಕ್ತಿ ಹರಣ ಮಾಡಿಸಲಾಗುತ್ತಿದೆ </blockquote><span class="attribution">ಸತೀಶ ಕಜ್ಜಿಡೋಣಿ ಪರಿಸರ ಎಂಜಿನಿಯರ್ ನಗರಸಭೆ ಬಾಗಲಕೋಟೆ</span></div>.<div><blockquote>ಬಾಗಲಕೋಟೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ತಿರುಗಾಡಲು ಎದುರಾಡುವಂತಾಗಿದೆ. ಜನರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು </blockquote><span class="attribution">ಗಿರೀಶ ಭಾಂಡಗೆ ನಿವಾಸಿ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ನವನಗರದಲ್ಲಿ ಬಾಲಕಿಯೊಬ್ಬಳು ಇತ್ತೀಚೆಗೆ ನಾಯಿ ಕಡಿದು ಮೃತಳಾಗಿದ್ದಾಳೆ. ನಾಯಿಗಳು ಹೆಚ್ಚಿದ್ದು, ಜಿಲ್ಲೆಯಲ್ಲಿ ನಿತ್ಯ ಹತ್ತಾರು ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.</p>.<p>ಮೂರು ವರ್ಷಗಳ ಅಂಕಿ–ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ನಾಯಿಗಳ ಕಡಿತದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2025ರೊಂದರಲ್ಲಿಯೇ 25,096 ಜನರ ಮೇಲೆ ನಾಯಿಗಳ ದಾಳಿ ನಡೆದಿದೆ. ನಿತ್ಯ ಸರಾಸರಿ 68 ಜನರು ನಾಯಿ ಕಡಿತಕ್ಕೆ ಈಡಾಗುತ್ತಿದ್ದಾರೆ.</p>.<p>ನಾಯಿ ಕಡಿತದಿಂದ ಕಳೆದ ವರ್ಷ ಐವರು ಮೃತರಾಗಿದ್ದಾರೆ. ಈ ವರ್ಷದ ಆರಂಭದಲ್ಲಿಯೇ ಬಾಲಕಿಯೊಬ್ಬರು ಬಲಿಯಾಗಿದ್ದಾರೆ. ನಾಯಿ ಹಾವಳಿ ತಡೆಗಟ್ಟಬೇಕು ಎನ್ನುವ ಸಾರ್ವಜನಿಕರ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಸ್ಪಂದನೆ ದೊರೆತಿದ್ದು ಕಡಿಮೆ.</p>.<p>ಇಳಕಲ್ ನಗರದಲ್ಲಿ ನಾಯಿಯೊಂದು 30ಕ್ಕೂ ಹೆಚ್ಚು ಜನರನ್ನು ಕಡಿದಿತ್ತು. ಬಾಗಲಕೋಟೆಯಲ್ಲಿ ನಾಯಿಯೊಂದು 10 ಜನ ಅಂಧ ಮಕ್ಕಳ ಮೇಲೆ ದಾಳಿ ನಡೆಸಿತ್ತು. ಅಲ್ಲಲ್ಲಿ ನಾಯಿಗಳು ಕಡಿತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ತಿಂಗಳುಗಟ್ಟಲೇ ಚಿಕಿತ್ಸೆ ಪಡೆಯುತ್ತಿರುತ್ತಾರೆ.</p>.<p>ಬೆಳಿಗ್ಗೆ ಹಾಗೂ ಸಂಜೆ ಜನರು ವಾಕಿಂಗ್ ಹೋಗಲು ಹೆದರುವಂತಾಗಿದೆ. ಮಕ್ಕಳನ್ನು ಓಣಿಯಲ್ಲಿ ಆಟವಾಡಿಸಲು ಕಳುಹಿಸಲು, ಶಾಲೆಗೆ, ಟ್ಯೂಷನ್ಗೆ ಒಬ್ಬರನ್ನೇ ಕಳುಹಿಸಿದ ಪರಿಸ್ಥಿತಿ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿದೆ. ಕೆಲವು ಕಡೆಗಳಲ್ಲಿ ನಾಯಿಗಳು ವಾಹನವನ್ನು ಬೆನ್ನಟ್ಟುವುದರಿಂದ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳೂ ನಡೆದಿವೆ.</p>.<p>ಬೀದಿ ಬದಿ ಇರುವ ಮಾಂಸದ ಅಂಗಡಿಗಳವರು, ಎಗ್ ರೈಸ್ ಸೆಂಟರ್ಗಳವರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ಹೆಚ್ಚುವರಿ ಹಾಗೂ ತ್ಯಾಜ್ಯದ ತುಂಡುಗಳನ್ನು ಎಸೆಯುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ.</p>.<p>ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 3,949, ಬಾದಾಮಿ ತಾಲ್ಲೂಕಿನಲ್ಲಿ 3,894, ಹುನಗುಂದ ತಾಲ್ಲೂಕಿನಲ್ಲಿ 3,353, ಬಾಗಲಕೋಟೆ ತಾಲ್ಲೂಕಿನಲ್ಲಿ 3,439 ಪ್ರಕರಣಗಳು 2025ರಲ್ಲಿ ದಾಖಲಾಗಿವೆ. ಪ್ರತಿ ತಾಲ್ಲೂಕಿನಲ್ಲಿ ನಾಯಿಗಳ ಕಡಿತಕ್ಕೆ ಒಳಗಾದವರ ಸಂಖ್ಯೆ ನಾಲ್ಕು ಸಂಖ್ಯೆಯಲ್ಲಿಯೇ ಇದೆ.</p>.<div><blockquote>ಈಗಾಗಲೇ ಒಂದು ಸುತ್ತು ನಾಯಿಗಳ ಸಂತಾನಶಕ್ತಿ ಹರಣ ಮಾಡಿಸಲಾಗಿದೆ. ಈಗ ಇನ್ನಷ್ಟು ನಾಯಿಗಳ ಸಂತಾನಶಕ್ತಿ ಹರಣ ಮಾಡಿಸಲಾಗುತ್ತಿದೆ </blockquote><span class="attribution">ಸತೀಶ ಕಜ್ಜಿಡೋಣಿ ಪರಿಸರ ಎಂಜಿನಿಯರ್ ನಗರಸಭೆ ಬಾಗಲಕೋಟೆ</span></div>.<div><blockquote>ಬಾಗಲಕೋಟೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ತಿರುಗಾಡಲು ಎದುರಾಡುವಂತಾಗಿದೆ. ಜನರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು </blockquote><span class="attribution">ಗಿರೀಶ ಭಾಂಡಗೆ ನಿವಾಸಿ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>