ಬಾಗಲಕೋಟೆ: ಕಡೆಯ ಶ್ರಾವಣ ಸೋಮವಾರ ರಬಕವಿ-ಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದಲ್ಲಿ ಅಲ್ಲಮಪ್ರಭುಗಳ ಜಾತ್ರೆ ವೈಭವದಿಂದ ನೆರವೇರಿತು.
ಸಾವಿರಾರು ಮಂದಿ ಪಾಲ್ಗೊಂಡು ನಂದಿಕೋಲು ಉತ್ಸವ, ದೇವರ ಪಾಲಕಿ ಸೇವೆಯನ್ನು ಕಣ್ತುಂಬಿಕೊಂಡರು.
ಹುಬ್ಬಳ್ಳಿ- ಧಾರವಾಡ, ಜಮಖಂಡಿ, ರಬಕವಿ-ಬನಹಟ್ಟಿ, ಬೆಳಗಾವಿ ನಗರ, ಅಥಣಿ, ರಾಯಭಾಗ ಹಾಗೂ ನೆರೆಯ ಮಹಾರಾಷ್ಟ್ರದಿಂದ ಖಾಸಗಿ ವಾಹನಗಳಲ್ಲಿ ಭಕ್ತರು ಬಂದು ಜಾತ್ರೆಯಲ್ಲಿ ಪಾಲ್ಗೊಂಡರು.
ಜಾತ್ರೆಯಲ್ಲಿ ಎಲ್ಲಿಯೂ ಕೋವಿಡ್ ನಿಯಮಾವಳಿ ಪಾಲನೆಯಾಗಿರುವುದು ಕಂಡುಬರಲಿಲ್ಲ. ಸುರಕ್ಷಿತ ಅಂತರ ಮಾಯವಾಗಿತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ನಡೆಯುವುದಿಲ್ಲ ದೇವಸ್ಥಾನ ಸಮಿತಿ ಹಾಗೂ ಸ್ಥಳೀಯ ಪುರಸಭೆ ಆಡಳಿತ ಹೇಳಿತ್ತು. ಆದರೆ ನಿರ್ಬಂಧಗಳನ್ನು ಗಾಳಿಗೆ ತೂರಿ ಧಾರ್ಮಿಕ ಕಾರ್ಯಕ್ರಮ ಆಚರಿಸಲಾಯಿತು. ಜಾತ್ರೆಯಲ್ಲಿ ಎಲ್ಲಿಯೂ ಪೊಲೀಸ್ ಬಂದೋಬಸ್ತ್ ಕಂಡುಬರಲಿಲ್ಲ.