ಬಾಗಲಕೋಟೆ: ರಂಗಭೂಮಿ ನಟ, ನಿರ್ದೇಶಕ ಪ್ರಭಾಕರ ಕುಲಕರ್ಣಿ (69) ಮಂಗಳವಾರ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅವರು ಬಾಗಲಕೋಟೆ ವಕೀಲರ ಸಂಘದ ಅಧ್ಯಕ್ಷರಾಗಿದ್ದರು.
‘ಹಯವದನ’, ‘ಸೂರ್ಯಾಸ್ತದಿಂದ ಸೂರ್ಯೋದಯವರೆಗೆ’, ‘ಪಾರಿಜಾತದವರು’, ‘ಪ್ರಸನ್ನ ವೆಂಕಟದಾಸರು’, ‘ಕಲ್ಯಾಣದಲ್ಲಿ ಒಂದು ಕ್ರಾಂತಿ’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಲ್ಲದೆ ನಟನೆಯನ್ನೂ ಮಾಡಿದ್ದರು. ಕೆರೂರು ವಾಸುದೇವಾಚಾರ್ಯರು ಸ್ಥಾಪಿಸಿದ್ದ ‘ವಾಸುದೇವ ವಿನೋದಿನಿ ನಾಟ್ಯಸಭಾ’ ಪುನರುತ್ಥಾನಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.