<p><strong>ಬಾಗಲಕೋಟೆ</strong>: ಓದು ಕಲಿಯದ ಜನಪದ ಸಾಹಿತಿಗಳು ರಚಿಸಿದ ಸಾಹಿತ್ಯವನ್ನು ಅಧ್ಯಯನ ಮಾಡಲು ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಇದು ಜನಪದ ಸಾಹಿತ್ಯದ ಶಕ್ತಿ ಎಂದು ಸಾಹಿತಿ ವೈ.ವೈ. ಕೊಕ್ಕನವರ ಹೇಳಿದರು.</p>.<p>ಶನಿವಾರ ಸಮ್ಮೇಳನದಲ್ಲಿ ‘ಜನಪದ ಅಂದು–ಇಂದು’ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು, ಟ್ರ್ಯಾಕ್ಟರ್ಗಳಲ್ಲಿ ಹಾಕುತ್ತಿರುವ ಹಾಡಿನಿಂದ ಜನಪದ ಸಾಹಿತ್ಯ, ಸಂಸ್ಕೃತಿ ಹಾಳಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದರು.</p>.<p>ಸಾಹಿತ್ಯದ ಮೂಲ ಉದ್ದೇಶವೇ ಕೆಟ್ಟದ್ದು ಹೋಗಿ, ಒಳ್ಳೆಯದಾಗಿ ಬದಲಾಗಬೇಕು ಎಂಬುದಾಗಿದೆ. ಜನಪದ ಸಾಹಿತ್ಯ ನೇರವಾಗಿ ಹೇಳುವ ಕೆಲಸ ಮಾಡಿದೆ. ಶ್ರಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮೊಬೈಲ್ ದಾಸರಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಜನರ ಜೀವನ, ನಡೆ, ನುಡಿ, ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸವನ್ನು ಜನಪದ ಸಾಹಿತ್ಯ ಮೌಖಿಕ ಸಾಹಿತ್ಯದ ಮೂಲಕ ಜನಪದರು ಮಾಡಿಕೊಂಡು ಬಂದಿದ್ದಾರೆ. ಸಾಹಿತ್ಯದ ಬೇರುಗಳು ಜನಪದದಲ್ಲಿವೆ ಎಂದರು.</p>.<p>ಅತಿಥಿಗಳಾಗಿದ್ದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಡಿ. ಬಾಬು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದು ದಿವಾನ ಮಾತನಾಡಿ, ‘ಜನಪದ ಎಂದಿಗೂ ಅಳಿಯುವುದಿಲ್ಲ. ರೂಪ ಬದಲಿಸಿಕೊಂಡು ಸದಾ ಜತೆಗಿರುತ್ತದೆ’ ಎಂದು ಹೇಳಿದರು.</p>.<p>ಮನುಷ್ಯನ ಜೀವನದಲ್ಲಿ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ ಕೆಲಸವನ್ನು ಜನಪದ ಮಾಡಿದೆ. ಇಂದಿನ ಮಕ್ಕಳು ಜನಪದ ಕೇಳಿದರೆ ಸಾಕು ನಮ್ಮ ಸಂಸ್ಕೃತಿಯ ವೈಭವ ಗೊತ್ತಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಓದು ಕಲಿಯದ ಜನಪದ ಸಾಹಿತಿಗಳು ರಚಿಸಿದ ಸಾಹಿತ್ಯವನ್ನು ಅಧ್ಯಯನ ಮಾಡಲು ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಇದು ಜನಪದ ಸಾಹಿತ್ಯದ ಶಕ್ತಿ ಎಂದು ಸಾಹಿತಿ ವೈ.ವೈ. ಕೊಕ್ಕನವರ ಹೇಳಿದರು.</p>.<p>ಶನಿವಾರ ಸಮ್ಮೇಳನದಲ್ಲಿ ‘ಜನಪದ ಅಂದು–ಇಂದು’ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು, ಟ್ರ್ಯಾಕ್ಟರ್ಗಳಲ್ಲಿ ಹಾಕುತ್ತಿರುವ ಹಾಡಿನಿಂದ ಜನಪದ ಸಾಹಿತ್ಯ, ಸಂಸ್ಕೃತಿ ಹಾಳಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದರು.</p>.<p>ಸಾಹಿತ್ಯದ ಮೂಲ ಉದ್ದೇಶವೇ ಕೆಟ್ಟದ್ದು ಹೋಗಿ, ಒಳ್ಳೆಯದಾಗಿ ಬದಲಾಗಬೇಕು ಎಂಬುದಾಗಿದೆ. ಜನಪದ ಸಾಹಿತ್ಯ ನೇರವಾಗಿ ಹೇಳುವ ಕೆಲಸ ಮಾಡಿದೆ. ಶ್ರಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮೊಬೈಲ್ ದಾಸರಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಜನರ ಜೀವನ, ನಡೆ, ನುಡಿ, ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸವನ್ನು ಜನಪದ ಸಾಹಿತ್ಯ ಮೌಖಿಕ ಸಾಹಿತ್ಯದ ಮೂಲಕ ಜನಪದರು ಮಾಡಿಕೊಂಡು ಬಂದಿದ್ದಾರೆ. ಸಾಹಿತ್ಯದ ಬೇರುಗಳು ಜನಪದದಲ್ಲಿವೆ ಎಂದರು.</p>.<p>ಅತಿಥಿಗಳಾಗಿದ್ದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಡಿ. ಬಾಬು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದು ದಿವಾನ ಮಾತನಾಡಿ, ‘ಜನಪದ ಎಂದಿಗೂ ಅಳಿಯುವುದಿಲ್ಲ. ರೂಪ ಬದಲಿಸಿಕೊಂಡು ಸದಾ ಜತೆಗಿರುತ್ತದೆ’ ಎಂದು ಹೇಳಿದರು.</p>.<p>ಮನುಷ್ಯನ ಜೀವನದಲ್ಲಿ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ ಕೆಲಸವನ್ನು ಜನಪದ ಮಾಡಿದೆ. ಇಂದಿನ ಮಕ್ಕಳು ಜನಪದ ಕೇಳಿದರೆ ಸಾಕು ನಮ್ಮ ಸಂಸ್ಕೃತಿಯ ವೈಭವ ಗೊತ್ತಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>