ಸಿಎಂ ಅಥವಾ ಡಿಸಿಎಂ ಗೋವಿಂದ ಕಾರಜೋಳ ಮನವೊಲಿಸಿ ನೀವು ಹಣ ತಂದರೆ ನನ್ನದೇನೂ ಅಭ್ಯಂತವಿಲ್ಲ ಎಂದು ಹೇಳಿದ ಹೆಬ್ಬಾರ, ರನ್ನ ಶುಗರ್ಸ್ನ ಸಕ್ಕರೆ ಹರಾಜಿನಿಂದ ಸಂಗ್ರಹವಾದ ₹41 ಕೋಟಿ ಜಿಲ್ಲಾಡಳಿತದ ಖಾತೆಯಲ್ಲಿದೆ. ಆದರೆ ಈ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸಲು ಆಗಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬೇಗನೇ ಇತ್ಯರ್ಥಗೊಂಡು ರೈತರಿಗೆ ಬಾಕಿ ಪಾವತಿಸಲು ಹಾಗೂ ಕಾರ್ಖಾನೆಯ ಕಾರ್ಮಿಕರಿಗೆ ಪಾವತಿಸಬೇಕಾದ ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವೆ ಎಂದು ಹೇಳಿದರು.