<p><strong>ಬಾದಾಮಿ: </strong>ಪಠ್ಯ ಶಿಕ್ಷಣವು ಮಕ್ಕಳ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸೃಜನಾತ್ಮಕ ಕೌಶಲ್ಯವನ್ನು ವಿಕಸಿತಗೊಳಿ ಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ಹೇಳಿದರು. <br /> ಇಲ್ಲಿನ ಉರ್ದು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾ ರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರು ಸನ್ಮಾನಿಸಿ ಮಾತನಾಡಿದರು.<br /> <br /> ಡಾ.ಯು.ಕೆ.ನಂದನೂರ ಅಧ್ಯಕ್ಷತೆ ವಹಿಸಿದ್ದರು.ಎ.ಎಚ್.ಬಬರ್ಚಿ,ಎಸ್. ಎಸ್. ತಬ್ರೇಜ್,ಎಸ್.ಐ.ಹವಾಲ್ದಾರ, ವಿ.ಎಸ್.ಮೇಟಿ ಅತಿಥಿಗಳಾಗಿ ಆಗಮಿ ಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ದವು. ಪಾಲ ಕರು, ಶಿಕ್ಷಕ ಸಿಬ್ಬಂದಿ ಹಾಜರಿದ್ದರು. ಮುಖ್ಯ ಶಿಕ್ಷಕ ಎಂ.ಐ.ಬಾಗವಾನ ಸ್ವಾಗತಿಸಿದರು.ಶಿಕ್ಷಕಿ ಎಸ್.ಎ.ಸವಣೂರ ವಂದಿಸಿದರು.<br /> <br /> <strong>ಶಾಲೆಗೆ ಭೂಮಿ ದಾನ</strong><br /> <strong>ಬಾದಾಮಿ: </strong>ನಂದಿಕೇಶ್ವರದಲ್ಲಿ ಉನ್ನತೀ ಕರಿಸಿದ ಸರ್ಕಾರಿ ಪ್ರೌಢ ಶಾಲೆಗೆ ಗ್ರಾಮದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಬಿ.ಹಂಗರಗಿ ರೂ.20ಲಕ್ಷ ಮೌಲ್ಯದ ಎರಡು ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ ಎಂದುಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಿಳಿಸಿದ್ದಾರೆ.<br /> <br /> ಈಚೆಗೆ ಗ್ರಾಮದ ಕುಮಾರೇಶ್ವರ ಅನುಭವ ಮಂಟಪದಲ್ಲಿ ಜರುಗಿದ ಸಭೆಯಲ್ಲಿ ಹಂಗರಗಿ ಅವರು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಭೂಮಿ ದಾನ ಮಾಡುವುದಾಗಿ ತಿಳಿಸಿದರು.<br /> <br /> ಜಿಲ್ಲಾ ಪಂಚಾಯತಿ ಸದಸ್ಯ ಡಾ.ಎಂ. ಜಿ.ಕಿತ್ತಲಿ,ವೀರನಗೌಡ ಜನಾಲಿ, ಜಿ.ಡಿ.ಮಣ್ಣೂರಗ್ರಾಮದ ಹಿರಿಯರು ಮತ್ತು ಸ್ವಾಮಿ ವಿವೇಕಾನಂದ ಯುವಕ ಸಂಘದ ಸದಸ್ಯರು ಹಾಜರಿದ್ದರು.ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ ಹುಗ್ಗಿ ಮತ್ತು ಗ್ರಾಮದ ಹಿರಿಯರು ದಾನಿ ಯನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ: </strong>ಪಠ್ಯ ಶಿಕ್ಷಣವು ಮಕ್ಕಳ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸೃಜನಾತ್ಮಕ ಕೌಶಲ್ಯವನ್ನು ವಿಕಸಿತಗೊಳಿ ಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ಹೇಳಿದರು. <br /> ಇಲ್ಲಿನ ಉರ್ದು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾ ರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರು ಸನ್ಮಾನಿಸಿ ಮಾತನಾಡಿದರು.<br /> <br /> ಡಾ.ಯು.ಕೆ.ನಂದನೂರ ಅಧ್ಯಕ್ಷತೆ ವಹಿಸಿದ್ದರು.ಎ.ಎಚ್.ಬಬರ್ಚಿ,ಎಸ್. ಎಸ್. ತಬ್ರೇಜ್,ಎಸ್.ಐ.ಹವಾಲ್ದಾರ, ವಿ.ಎಸ್.ಮೇಟಿ ಅತಿಥಿಗಳಾಗಿ ಆಗಮಿ ಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ದವು. ಪಾಲ ಕರು, ಶಿಕ್ಷಕ ಸಿಬ್ಬಂದಿ ಹಾಜರಿದ್ದರು. ಮುಖ್ಯ ಶಿಕ್ಷಕ ಎಂ.ಐ.ಬಾಗವಾನ ಸ್ವಾಗತಿಸಿದರು.ಶಿಕ್ಷಕಿ ಎಸ್.ಎ.ಸವಣೂರ ವಂದಿಸಿದರು.<br /> <br /> <strong>ಶಾಲೆಗೆ ಭೂಮಿ ದಾನ</strong><br /> <strong>ಬಾದಾಮಿ: </strong>ನಂದಿಕೇಶ್ವರದಲ್ಲಿ ಉನ್ನತೀ ಕರಿಸಿದ ಸರ್ಕಾರಿ ಪ್ರೌಢ ಶಾಲೆಗೆ ಗ್ರಾಮದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಬಿ.ಹಂಗರಗಿ ರೂ.20ಲಕ್ಷ ಮೌಲ್ಯದ ಎರಡು ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ ಎಂದುಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಿಳಿಸಿದ್ದಾರೆ.<br /> <br /> ಈಚೆಗೆ ಗ್ರಾಮದ ಕುಮಾರೇಶ್ವರ ಅನುಭವ ಮಂಟಪದಲ್ಲಿ ಜರುಗಿದ ಸಭೆಯಲ್ಲಿ ಹಂಗರಗಿ ಅವರು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಭೂಮಿ ದಾನ ಮಾಡುವುದಾಗಿ ತಿಳಿಸಿದರು.<br /> <br /> ಜಿಲ್ಲಾ ಪಂಚಾಯತಿ ಸದಸ್ಯ ಡಾ.ಎಂ. ಜಿ.ಕಿತ್ತಲಿ,ವೀರನಗೌಡ ಜನಾಲಿ, ಜಿ.ಡಿ.ಮಣ್ಣೂರಗ್ರಾಮದ ಹಿರಿಯರು ಮತ್ತು ಸ್ವಾಮಿ ವಿವೇಕಾನಂದ ಯುವಕ ಸಂಘದ ಸದಸ್ಯರು ಹಾಜರಿದ್ದರು.ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ ಹುಗ್ಗಿ ಮತ್ತು ಗ್ರಾಮದ ಹಿರಿಯರು ದಾನಿ ಯನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>